ಲಾತೂರ್: ಭಾರತದ ವಿರುದ್ಧ ಮತ್ತೆ ಸೊಲ್ಲೆತ್ತಲು ಸಾಧ್ಯವೇ ಆಗದ ರೀತಿಯಲ್ಲಿ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಲಾತೂರ್ ಬಳಿಯ ಆವುಸಾದಲ್ಲಿ ಮೋದಿ ಅವರ ಜತೆ ಮೊದಲ ಚುನಾವಣಾ ರಾರಯಲಿ ನಡೆಸಿದ ಠಾಕ್ರೆ, ''ಕೇಂದ್ರ ಸರಕಾರ ಕೇವಲ ಪಾಕಿಸ್ತಾನಕ್ಕೆ ಪಾಠ ಕಲಿಸುವ ಮಾತನಾಡಿದರಷ್ಟೇ ಸಾಲದು. ಮತ್ತೆ ಭಾರತದ ವಿರುದ್ಧ ಮಾತನಾಡಲು ಆ ದೇಶದ ಬಳಿ ಏನೂ ಉಳಿಯಬಾರದು. ಆ ರೀತಿಯಲ್ಲಿ ಏಟು ನೀಡಬೇಕು,'' ಎಂದು ಒತ್ತಾಯಿಸಿದರು. ರಾಮ ಮಂದಿರ ನಿರ್ಮಾಣ ಹಾಗೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಭರವಸೆ ನೀಡಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಠಾಕ್ರೆ ಸ್ವಾಗತಿಸಿದರು. ಎರಡು ವರ್ಷದ ಬಳಿಕ ಮೋದಿ ಹಾಗೂ ಠಾಕ್ರೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ವಿಶೇಷ.
ಮತ್ತೆ ಸೊಲ್ಲೆತ್ತಲು ಆಗದಂತೆ ಪಾಕ್ಗೆ ಪಾಠ ಕಲಿಸಿ: ಠಾಕ್ರೆ
ರಾಮ ಮಂದಿರ ನಿರ್ಮಾಣ ಹಾಗೂ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಭರವಸೆ ನೀಡಿರುವ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಠಾಕ್ರೆ ಸ್ವಾಗತಿಸಿದರು.
Vijaya Karnataka 10 Apr 2019, 5:00 am