ಆ್ಯಪ್ನಗರ

ಖರ್ಚಿನ ಕುರಿತು ಗೊಂದಲದ ಮಾಹಿತಿ ದಿಗ್ವಿಜಯ್‌, ಸಾಧ್ವಿಗೆ ಆಯೋಗ ನೋಟಿಸ್‌

ಲೆಕ್ಕ ವ್ಯತ್ಯಾಸದ ಬಗ್ಗೆ ವಿವರ ನೀಡುವಂತೆ ಅಭ್ಯರ್ಥಿಗಳಿಬ್ಬರಿಗೂ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 5 May 2019, 5:00 am
ಹೊಸದಿಲ್ಲಿ: ಚುನಾವಣಾ ಖರ್ಚಿನ ಕುರಿತು ಗೊಂದಲದ ಮಾಹಿತಿ ನೀಡಿದ್ದಕ್ಕಾಗಿ ಮಧ್ಯಪ್ರದೇಶದ ಭೋಪಾಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಮತ್ತು ಅವರ ಪ್ರತಿಸ್ಪರ್ಧಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಚುನಾವಣಾ ಆಯೋಗ ಶನಿವಾರ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web delhi cm arvind kejriwal slapped during roadshow
ಖರ್ಚಿನ ಕುರಿತು ಗೊಂದಲದ ಮಾಹಿತಿ ದಿಗ್ವಿಜಯ್‌, ಸಾಧ್ವಿಗೆ ಆಯೋಗ ನೋಟಿಸ್‌


ಚುನಾವಣಾ ಪ್ರಚಾರಕ್ಕಾಗಿ ಕಳೆದ ಶುಕ್ರವಾರದವರೆಗೆ ತಾವು 21,30,136 ರೂ. ಖರ್ಚು ಮಾಡಿರುವುದಾಗಿ ದಿಗ್ವಿಜಯ್‌ ಸಿಂಗ್‌ ಆಯೋಗಕ್ಕೆ ಲೆಕ್ಕ ಸಲ್ಲಿಸಿದ್ದರು. ಆದರೆ, ಪರಿಷ್ಕರಣೆ ನಡೆಸಿದ ಚುನಾವನಾ ಆಯೋಗದ ವೀಕ್ಷಕರ ತಂಡ, ಸಿಂಗ್‌ ಅವರ ಖರ್ಚಿನ ನೈಜ ಬಾಬ್ತು 39,47,674 ರೂ.ಗಳೆಂದು ತಿಳಿಸಿದೆ. ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಸಲ್ಲಿಸಿರುವ ಖರ್ಚಿನ ವಿವರದಲ್ಲೂ ಇಂತಹದ್ದೇ ವ್ಯತ್ಯಾಸ ಕಾಣಿಸಿದೆ. ಅವರು 6,27,663 ರೂ. ಖರ್ಚು ಮಾಡಿರುವುದಾಗಿ ತಿಳಿಸಿದ್ದರು. ಆದರೆ, ವಾಸ್ತವವಾಗಿ ಅವರು 13,51,756 ರೂ. ಖರ್ಚು ಮಾಡಿರುವುದನ್ನು ಚುನಾವಣಾ ಆಯೋಗದ ವೀಕ್ಷಕರ ತಂಡ ಪತ್ತೆ ಹಚ್ಚಿದೆ.

ಈ ಲೆಕ್ಕ ವ್ಯತ್ಯಾಸದ ಬಗ್ಗೆ ವಿವರ ನೀಡುವಂತೆ ಅಭ್ಯರ್ಥಿಗಳಿಬ್ಬರಿಗೂ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ