ರತ್ಲಾಮ್: ಲೋಕಸಭೆ ಚುನಾವಣೆಗೆ ಮಧ್ಯಪ್ರದೇಶದ ಭೋಪಾಲ್ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಮತ ಚಲಾವಣೆ ಮಾಡದೇ ಪಾಪ ಎಸಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ರತ್ಲಾಮ್ ಜಿಲ್ಲೆಯಲ್ಲಿ ಸೋಮವಾರ ಚುನಾವಣಾ ಪ್ರಚಾರ ಸಭೆ ನಡೆಸಿದ ಮೋದಿ ಅವರು, ''ಆರನೇ ಹಂತದ ಭಾಗವಾಗಿ ಭಾನುವಾರ ಭೋಪಾಲ್ನಲ್ಲಿ ನಡೆದ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕರು ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬ ಆಚರಿಸಿದ್ದರು. ಆದರೆ ತಮಗೆ ಮತ ಹಾಕಿ ಎಂದು ಪ್ರಚಾರ ನಡೆಸಿದ ದಿಗ್ವಿಜಯ್ ಸಿಂಗ್ ಸ್ವತಃ ಮತ ಹಾಕದೇ ಸುತ್ತಾಟದಲ್ಲಿ ಮುಳುಗಿದ್ದರು. ವೋಟ್ ಮಾಡದೇ ಅವರು ಪಾಪ ಎಸಗಿದ್ದಾರೆ,'' ಎಂದು ವಾಗ್ದಾಳಿ ನಡೆಸಿದರು. ಮತ ಚಲಾವಣೆ ಮಾಡದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ದಿಗ್ವಿಜಯ್, ''ರಾಘವಗಢಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದಿದ್ದಕ್ಕೆ ಬೇಸರವಿದೆ. ಮುಂದಿನ ಬಾರಿ ಭೋಪಾಲ್ನಲ್ಲಿಯೇ ಮತದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತೇನೆ,'' ಎಂದು ಹೇಳಿದ್ದರು.
ದಿಗ್ವಿಜಯ್ ಮತ ಹಾಕದೇ ಪಾಪ ಎಸಗಿದ್ದಾರೆ ಎಂದ ಮೋದಿ
ತಮಗೆ ಮತ ಹಾಕಿ ಎಂದು ಪ್ರಚಾರ ನಡೆಸಿದ ದಿಗ್ವಿಜಯ್ ಸಿಂಗ್ ಸ್ವತಃ ಮತ ಹಾಕದೇ ಸುತ್ತಾಟದಲ್ಲಿ ಮುಳುಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
Vijaya Karnataka 14 May 2019, 5:00 am