ಆ್ಯಪ್ನಗರ

ದಿಗ್ವಿಜಯ್ ಸಿಂಗ್ ಅವರೇ 'ಹಿಂದೂ ಭಯೋತ್ಪಾದನೆ' ಸುಳ್ಳು ಪ್ರತಿಪಾದನೆಯ 'ಸಂಚುಕೋರ': ಸಾಧ್ವಿ ಪ್ರಜ್ಞಾ ಸಿಂಗ್

ವಿಕ ಸೋದರ ಸಂಸ್ಥೆ ಟೈಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ, 'ಹಿಂದೂ ಭಯೋತ್ಪಾದನೆ ಎಂಬ ಸುಳ್ಳು ಕಲ್ಪನೆಯ ಹಿಂದೂ ಸೂತ್ರಧಾರ ಈ ದಿಗ್ವಿಜಯ್ ಸಿಂಗ್. ಒಬ್ಬ ಮಹಿಳೆ, ಸಾಧ್ವಿ, ದೇಶಪ್ರೇಮಿಯನ್ನು ಅವರು ಅವಮಾನಿಸಿದ್ದಾರೆ' ಎಂದು ದೂಷಿಸಿದರು. 'ಈ ಕೇಸರಿ ಬಣ್ಣ ತ್ಯಾಗದ ಸಂಕೇತ. ಆದರೆ ಇದನ್ನು ಭಯೋತ್ಪಾದನೆಯ ಸಂಕೇತವೆಂದು ಬಿಂಬಿಸುವುದನ್ನು ನಮಗೆ, ಭಾರತಕ್ಕೆ ಮತ್ತು ಸನಾತನ ಹಿಂದೂ ಧರ್ಮಕ್ಕೆ ಎಷ್ಟು ಮಾತ್ರಕ್ಕೂ ಸಹಿಸಲಾಗದು' ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದರು.

Vijaya Karnataka Web 7 May 2019, 1:26 pm
ಭೋಪಾಲ್: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಕೇಸರಿ ಬಣ್ಣವನ್ನು ಭಯೋತ್ಪಾದನೆಯ ಸಂಕೇತವಾಗಿ ಬಿಂಬಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.
Vijaya Karnataka Web Sadhvi Pragya Singh


ವಿಕ ಸೋದರ ಸಂಸ್ಥೆ ಟೈಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ, 'ಹಿಂದೂ ಭಯೋತ್ಪಾದನೆ ಎಂಬ ಸುಳ್ಳು ಕಲ್ಪನೆಯ ಹಿಂದೂ ಸೂತ್ರಧಾರ ಈ ದಿಗ್ವಿಜಯ್ ಸಿಂಗ್. ಒಬ್ಬ ಮಹಿಳೆ, ಸಾಧ್ವಿ, ದೇಶಪ್ರೇಮಿಯನ್ನು ಅವರು ಅವಮಾನಿಸಿದ್ದಾರೆ' ಎಂದು ದೂಷಿಸಿದರು.

'ಈ ಕೇಸರಿ ಬಣ್ಣ ತ್ಯಾಗದ ಸಂಕೇತ. ಆದರೆ ಇದನ್ನು ಭಯೋತ್ಪಾದನೆಯ ಸಂಕೇತವೆಂದು ಬಿಂಬಿಸುವುದನ್ನು ನಮಗೆ, ಭಾರತಕ್ಕೆ ಮತ್ತು ಸನಾತನ ಹಿಂದೂ ಧರ್ಮಕ್ಕೆ ಎಷ್ಟು ಮಾತ್ರಕ್ಕೂ ಸಹಿಸಲಾಗದು' ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದರು.

'ಹಿಂದೂ ಸಂಸ್ಕೃತಿ ಎಲ್ಲವನ್ನೂ ಒಳಗೊಳ್ಳುವ ದಾರ್ಶನಿಕ ತತ್ವವನ್ನು ಪ್ರತಿಪಾದಿಸುತ್ತದೆ. ಅವರು ಮಹಿಳೆಯನ್ನು ಅವಮಾನಿಸಿದ್ದಾರೆ. ಅವರೇ ಈ ಎಲ್ಲದರ ಸೂತ್ರಧಾರ. ಅವರು ಒಬ್ಬ ಮಹಿಳೆ, ಸಾಧ್ವಿ ಹಾಗೂ ದೇಶಭಕ್ತೆಯನ್ನು ಅವಮಾನಿಸಿದ್ದಾರೆ' ಎಂದು ಪ್ರಜ್ಞಾ ಸಿಂಗ್ ದೂರಿದರು.

ತಾವೊಬ್ಬ 'ಆಸ್ತಿಕ ಹಿಂದೂ' ಎಂದು ತಮ್ಮನ್ನು ಬಣ್ಣಿಸಿಕೊಂಡ ದಿಗ್ವಿಜಯ್ ಸಿಂಗ್, ಸಾಧ್ವಿ ಆರೋಪವನ್ನು ತಳ್ಳಿಹಾಕಿದರು. ತಾವು ಎಂದೂ 'ಹಿಂದೂ ಭಯೋತ್ಪಾದನೆ' ಎಂಬ ಪದ ಬಳಸಿಲ್ಲ ಎಂದು ದಿಗ್ವಿಜಯ್ ಹೇಳಿಕೊಂಡರು.

ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್‌ಗೆ ಎದುರಾಳಿಯಾಗಿ ಬಿಜೆಪಿಯಿಂದ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ರೋಚಕ ಕದನವೇ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ