ಹೊಸದಿಲ್ಲಿ: ಮತಗಟ್ಟೆ ಸಮೀಕ್ಷೆಯ ವ್ಯತಿರಿಕ್ತ ವರದಿಗಳಿಂದ ಎದೆಗುಂದದಿರುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಧೈರ್ಯ ತುಂಬಿದ್ದಾರೆ. ''ನಕಲಿ ಮತಕಟ್ಟೆ ಸಮೀಕ್ಷೆಗಳನ್ನು ನಂಬಿ ಸ್ಥೈರ್ಯ ಕಳೆದುಕೊಳ್ಳಬೇಡಿ. ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದಂತೆ ಏನೂ ಆಗಲ್ಲ. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಕಾಂಗ್ರೆಸ್ ಅನ್ನು ನಂಬಿ. ಒಂದು ದಿನ ಕಳೆದರೆ ನೈಜತೆ ಹೊರ ಬೀಳುತ್ತದೆ. ಅಲ್ಲಿಯವರೆಗೆ ಇವಿಎಂ ಮೇಲೆ ನಿಗಾ ಇರಲಿ, ಎಚ್ಚರದಿಂದ ಇರಿ,'' ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇಂತಹದ್ದೇ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ.
ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿದ ರಾಹುಲ್ ಗಾಂಧಿ
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ಕಾಂಗ್ರೆಸ್ ಅನ್ನು ನಂಬಿ. ಒಂದು ದಿನ ಕಳೆದರೆ ನೈಜತೆ ಹೊರ ಬೀಳುತ್ತದೆ.
Vijaya Karnataka 23 May 2019, 5:00 am