ಆ್ಯಪ್ನಗರ

ಕಾಂಗ್ರೆಸ್‌ನ ‘ಚೌಕಿದಾರ್‌ ಚೋರ್‌ ಹೈ’ ಆಂದೋಲನಕ್ಕೆ ಆಯೋಗ ನಿಷೇಧ

ರಫೇಲ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಸ್ವಾಗತಿಸುವ ಭರದಲ್ಲಿ ನ್ಯಾಯಾಲಯ 'ಚೌಕಿದಾರ ಕಳ್ಳ'ನೆಂದು ಹೇಳಿದೆ ಎಂದು ತಪ್ಪಾಗಿ ವ್ಯಾಖ್ಯಾನಿಸಿ ಕೋರ್ಟ್‌ನಿಂದ ರಾಹುಲ್‌ ಗಾಂಧಿ ತರಾಟೆಗೆ ಒಳಗಾದ ನಂತರ ಈಗ ಕಾಂಗ್ರೆಸ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

Vijaya Karnataka 19 Apr 2019, 5:00 am
ಭೋಪಾಲ್‌: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಉದ್ದೇಶವಿಟ್ಟುಕೊಂಡು ಮಧ್ಯಪ್ರದೇಶ ಕಾಂಗ್ರೆಸ್‌ ಸಮಿತಿ ಆಡಿಯೊ ಹಾಗೂ ವಿಡಿಯೊ ರೂಪದಲ್ಲಿ ನಡೆಸುತ್ತಿದ್ದ 'ಚೌಕಿದಾರ್‌ ಚೋರ್‌ ಹೈ' ಪ್ರಚಾರಾಂದೋಲನಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದೆ.
Vijaya Karnataka Web election commission


ಬಿಜೆಪಿ ನೀಡಿದ ದೂರಿನ ಮೇರೆಗೆ ಆಯೋಗ ಈ ನಿರ್ಧಾರ ಕೈಗೊಂಡಿದೆ. ರಫೇಲ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪನ್ನು ಸ್ವಾಗತಿಸುವ ಭರದಲ್ಲಿ ನ್ಯಾಯಾಲಯ 'ಚೌಕಿದಾರ ಕಳ್ಳ'ನೆಂದು ಹೇಳಿದೆ ಎಂದು ತಪ್ಪಾಗಿ ವ್ಯಾಖ್ಯಾನಿಸಿ ಕೋರ್ಟ್‌ನಿಂದ ರಾಹುಲ್‌ ಗಾಂಧಿ ತರಾಟೆಗೆ ಒಳಗಾದ ನಂತರ ಈಗ ಕಾಂಗ್ರೆಸ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

''ಚೌಕಿದಾರ್‌ ಚೋರ್‌ ಹೈ ಪ್ರಚಾರಾಂದೋಲನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾವೊಬ್ಬ ವ್ಯಕ್ತಿಯನ್ನೂ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ಅನಗತ್ಯ ಹುಯಿಲು ಎಬ್ಬಿಸುತ್ತಿದೆ,'' ಎಂದು ಕಿಡಿಕಾರಿರುವ ರಾಜ್ಯ ಕಾಂಗ್ರೆಸ್‌ ಮಾಧ್ಯಮ ಘಟಕದ ವಕ್ತಾರೆ ಶೋಭಾ ಓಜಾ ಅವರು, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ