ಆ್ಯಪ್ನಗರ

ನೀತಿ ಸಂಹಿತೆ ಉಲ್ಲಂಘಿಸಿದ ಯೋಗಿ, ಮಾಯಾ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣಾ ಆಯೋಗ

ಆಯೋಗದ ಆದೇಶದ ಪ್ರಕಾರ ಯೋಗಿ ಆದಿತ್ಯನಾಥ್ ಇನ್ನು 72 ಗಂಟೆಗಳ ಕಾಲ ಮತ್ತು ಮಾಯಾವತಿ ಅವರು 48 ಗಂಟೆಗಳ ಕಾಲ ಯಾವುದೇ ಸಾರ್ವಜನಿಕ ಸಭೆ, ರೋಡ್ ಶೋ ನಡೆಸುವಂತಿಲ್ಲ ಸಂದರ್ಶನ ನೀಡುವಂತಿಲ್ಲ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಿಯೂ ಸಾರ್ವಜನಿಕ ಹೇಳಿಕೆಯನ್ನೂ ನೀಡುವಂತಿಲ್ಲ .

TIMESOFINDIA.COM 15 Apr 2019, 4:38 pm
ಹೊಸದಿಲ್ಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು, ಬಹುಜನ ಸಮಾಜದ ವರಿಷ್ಠೆ ಮಾಯಾವತಿ ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಚುನಾವಣಾ ಆಯೋಗ ಕೂಡ ಕಠಿಣ ಕ್ರಮ ಕೈಗೊಂಡಿದೆ.
Vijaya Karnataka Web Yogi- Maya


ಆಯೋಗದ ಆದೇಶದ ಪ್ರಕಾರ ಯೋಗಿ ಆದಿತ್ಯನಾಥ್ ಇನ್ನು 72 ಗಂಟೆಗಳ ಕಾಲ ಮತ್ತು ಮಾಯಾವತಿ ಅವರು 48 ಗಂಟೆಗಳ ಕಾಲ ಯಾವುದೇ ಸಾರ್ವಜನಿಕ ಸಭೆ, ರೋಡ್ ಶೋ ನಡೆಸುವಂತಿಲ್ಲ ಸಂದರ್ಶನ ನೀಡುವಂತಿಲ್ಲ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಿಯೂ ಸಾರ್ವಜನಿಕ ಹೇಳಿಕೆಯನ್ನೂ ನೀಡುವಂತಿಲ್ಲ .

ಇದರನ್ವಯ ಏಪ್ರಿಲ್ 16 ( ಮಂಗಳವಾರ) ಮುಂಜಾನೆ 6 ಗಂಟೆಯಿಂದ ಏಪ್ರಿಲ್ 17 ಮುಂಜಾನೆ 6 ಗಂಟೆಯವರೆಗೆ ಮಾಯಾವತಿ ಪ್ರಚಾರ ನಡೆಸುವಂತಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿಗೆ ಈ ಅವಧಿ ಏಪ್ರಿಲ್ 18 ಮುಂಜಾನೆ 6 ಗಂಟೆಯವರೆಗೆ ವಿಸ್ತರಿಸುತ್ತದೆ.

ಏಂದಿದ್ದರು ಯೋಗಿ?


ಉತ್ತರ ಪ್ರದೇಶದ ಮೀರತ್‍ನಲ್ಲಿ ಏಪ್ರಿಲ್ 9 ರಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತ ಯೋಗಿ ಅವರು, ಭಾರತೀಯ ಸೈನ್ಯ `ಮೋದಿ ಸೈನ್ಯ’, ಮುಸ್ಲಿಂ ಲೀಗ್ `ಗ್ರೀನ್ ವೈರಸ್’ ಎಂದು ಹೇಳಿದ್ದರು. ಅಲ್ಲದೇ ಕಾಂಗ್ರೆಸ್, ಸಮಾಜವಾದಿ ಪಕ್ಷ ,ಬಿಎಸ್‍ಪಿಗೆ ಅಲಿ ಇದ್ದರೆ, ನಮಗೆ ಭಜರಂಗಬಲಿ ಇದ್ದಾನೆ . ಲೋಕಸಭೆ ಚುನಾವಣೆಯು ಅಲಿ ಮತ್ತು ಭಜರಂಗಬಲಿ ನಡುವೆ ನಡೆಯುತ್ತಿದೆ ಎಂದಿದ್ದರು.

ಮಾಯಾ ಹೇಳಿದ್ದೇನು?

ಮುಸ್ಲಿಮರು ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ, ಮತಗಳು ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ. ಕಾಂಗ್ರೆಸ್ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಮಾಯಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಯೋಗಿ ಎರಡನೆಯ ಬಾರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಅವರಿಗೆ ಮಾಯಾವತಿಗಿಂತ ಹೆಚ್ಚಿನ ಶಿಕ್ಷೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಮಾತನಾಡುವಾಗ ಎಚ್ಚರವಿರಲಿ ಎಂದು ಆಯೋಗ ಈ ಹಿಂದೆ ಯೋಗಿ ಅವರಿಗೆ ಆದೇಶಿಸಿತ್ತು.

ಟಾಪ್ ರಾಜಕೀಯನಾಯಕರು, ಸ್ಟಾರ್ ಪ್ರಚಾರಕರು ನಿಷೇಧಕ್ಕೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಸಮಾಜವಾದಿ ನಾಯಕ ಆಜಂ ಖಾನ್ ಅವರಿಗೆ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆ ಮತ್ತು ರ‍್ಯಾಲಿ ನಡೆಸದಂತೆ ಆಯೋಗ ಆದೇಶಿಸಿತ್ತು. ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರ ಮೇಲೆ ಕೂಡ ಬಿಹಾರ್ ಮತ್ತು ಜಾರ್ಖಂಡ್‌ನಲ್ಲಿ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌