ಆ್ಯಪ್ನಗರ

ವಿಪಕ್ಷಗಳ ಬೇಡಿಕೆಗಿಲ್ಲ ಮನ್ನಣೆ, ಪ್ಲಾನ್‌ನಂತೇ ಮತಗಣನೆ

Times Now 22 May 2019, 4:54 pm
ಹೊಸದಿಲ್ಲಿ: ವಿವಿಪ್ಯಾಟ್‌ ಪೇಪರ್‌ಗಳನ್ನು ಫಲಿತಾಂಶ ಘೋಷಣೆಗೂ ಮುನ್ನ ಲೆಕ್ಕ ಹಾಕಿ ಇವಿಎಂ ಮತಗಣನೆ ಜತೆ ತಾಳೆ ಹಾಕಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ತಳ್ಳಿ ಹಾಕಿರುವ ಚುನಾವಣೆ ಆಯೋಗ ಮೊದಲು ಅಂದುಕೊಂಡಂತೆ ಮತಗಣನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ.

22 ವಿಪಕ್ಷಗಳು ಇವಿಎಂ ಮತ್ತು ವಿವಿಪ್ಯಾಟ್‌ ಪೇಪರ್‌ಗಳ ಮತಗಣನೆ ಮಾಡಬೇಕು. ಎರಡನ್ನು ತಾಳೆ ಹಾಕಿದ ನಂತರ ಫಲಿತಾಂಶವನ್ನು ಘೋಷಣೆ ಮಾಡಬೇಕು ಎಂದು ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದವು.

ಮತಗಣನೆ ಮೇ 23ಕ್ಕೆ ನಡೆಯಲಿದೆ. ಕೊನೆಯ ಹಂತದ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅಸ್ವಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ