ಆ್ಯಪ್ನಗರ

ಒಡಿಶಾಗೆ ವಿಶೇಷ ಸ್ಥಾನಮಾನ ಬೇಡಿಕೆ ಒಪ್ಪಿದರೆ ಎನ್‌ಡಿಎಗೆ ಬೆಂಬಲ: ಬಿಜೆಡಿ

ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಮತ್ತೆ ಸರಕಾರ ರಚಿಸಿದರೆ ಒಡಿಶಾದ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಸೂಕ್ತ ಮೈತ್ರಿಕೂಟದ ಜತೆ ಕೈಜೋಡಿಸುವುದಾಗಿ ಬಿಜೆಡಿ ವಕ್ತಾರ ಅಮರ್ ಪಟ್ನಾಯಕ್ ಹೇಳಿದ್ದಾರೆ.

Vijaya Karnataka Web 20 May 2019, 6:38 pm
ಭುವನೇಶ್ವರ: ಕೇಂದ್ರದಲ್ಲಿ ಬಿಜೆಪಿ ಸರಕಾರ ರಚಿಸಿದಲ್ಲಿ ಅದರ ಜತೆ ಕೈಜೋಡಿಸುವ ಇಂಗಿತವನ್ನು ಒಡಿಶಾದ ಬಿಜು ಜನತಾ ದಳ ವ್ಯಕ್ತಪಡಿಸಿದೆ.
Vijaya Karnataka Web BJD


ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಮತ್ತೆ ಸರಕಾರ ರಚಿಸಿದರೆ ಒಡಿಶಾದ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಸೂಕ್ತ ಮೈತ್ರಿಕೂಟದ ಜತೆ ಕೈಜೋಡಿಸುವುದಾಗಿ ಬಿಜೆಡಿ ವಕ್ತಾರ ಅಮರ್ ಪಟ್ನಾಯಕ್ ಹೇಳಿದ್ದಾರೆ.

'ವಿಶೇಷ ಸ್ಥಾನಮಾನದ ನಮ್ಮ ಬೇಡಿಕೆಯನ್ನು ಬೆಂಬಲಿಸುವ ಮೈತ್ರಿಕೂಟಕ್ಕೆ ಮಾತ್ರ ನಾವು ಬೆಂಬಲ ನೀಡುತ್ತೇವೆ. ಯಾವುದೇ ಮೈತ್ರಿಕೂಟವನ್ನು ಬೆಂಬಲಿಸಿದರೂ ಈ ಅಂಶವನ್ನು ಗಮನದಲ್ಲಿರಿಸಿಕೊಂಡೇ ಮುಂದುವರಿಯುತ್ತೇವೆ' ಎಂದು ಪಟ್ನಾಯಕ್ ತಿಳಿಸಿದರು.

'ಮತಗಟ್ಟೆ ಸಮೀಕ್ಷೆಗಳನ್ನು ನಂಬುವುದಾದರೆ ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚನೆಯಾಗುತ್ತದೆ. ವಿಶೇಷ ಸ್ಥಾನಮಾನದಂತಹ ನಮ್ಮ ಸಮಸ್ಯೆಗಳನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರ ಜತೆ ನಾವಿರುತ್ತೇವೆ' ಎಂದು ಪಟ್ನಾಯಕ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ