ಆ್ಯಪ್ನಗರ

ಪ್ರತಿಪಕ್ಷಗಳು ಒಗ್ಗೂಡದಿದ್ದರೆ ಉಳಿಗಾಲ ಇಲ್ಲವೆಂದ ಸಿನ್ಹಾ

ವಾಸ್ತವದ ಕಠೋರ ಸವಾಲನ್ನು ಅರ್ಥ ಮಾಡಿಕೊಂಡು ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಬಿಜೆಪಿ ಮಾಜಿ ನಾಯಕರೂ ಆಗಿರುವ ಸಿನ್ಹಾ ಸಲಹೆ ಮಾಡಿದ್ದಾರೆ.

Vijaya Karnataka 21 Mar 2019, 5:00 am
ಹೊಸದಿಲ್ಲಿ: ಈ ಲೋಕಸಭೆ ಚುನಾವಣೆ ಪ್ರತಿಪಕ್ಷಗಳ ಪಾಲಿಗೆ ಕಠಿಣ ಸವಾಲನ್ನು ಒಡ್ಡಿದ್ದು, ಕಾಂಗ್ರೆಸ್‌ ನೇತೃತ್ವದಲ್ಲಿ ಒಗ್ಗೂಡಿ ಹೋರಾಡದೇ ಹೋದರೆ ಯಶಸ್ಸು ಅಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಎಚ್ಚರಿಸಿದ್ದಾರೆ.
Vijaya Karnataka Web sinha1


ರಾಷ್ಟ್ರೀಯ ಪಕ್ಚವಾಗಿರುವ ಕಾಂಗ್ರೆಸ್‌ ಇನ್ನಷ್ಟು ಹೆಚ್ಚು ಸ್ಫುಟವಾಗಿ ನಾಯಕತ್ವ ಗುಣ ಪ್ರದರ್ಶಿಸಬೇಕು. ಕಾಂಗ್ರೆಸ್‌ವೊಂದೇ ತಮ್ಮ ಪಾಳಯದಲ್ಲಿ ರಾಷ್ಟ್ರೀಯ ಪಕ್ಷ ಎನ್ನುವುದನ್ನು ಎಸ್ಪಿ-ಬಿಎಸ್ಪಿ ಸೇರಿದಂತೆ ಇತರ ಪ್ರಾದೇಶಿಕಗಳೂ ಅರ್ಥ ಮಾಡಿಕೊಳ್ಳಬೇಕು. ವಾಸ್ತವದ ಕಠೋರ ಸವಾಲನ್ನು ಅರ್ಥ ಮಾಡಿಕೊಂಡು ಪ್ರತಿಪಕ್ಷಗಳು ಒಗ್ಗೂಡಬೇಕು ಎಂದು ಬಿಜೆಪಿ ಮಾಜಿ ನಾಯಕರೂ ಆಗಿರುವ ಸಿನ್ಹಾ ಸಲಹೆ ಮಾಡಿದ್ದಾರೆ.

ಬಿಜೆಪಿ ಮಿತ್ರಪಕ್ಷಗಳನ್ನು ಚೆನ್ನಾಗಿ ಸಂಭಾಳಿಸಬಲ್ಲದು. ಅಲ್ಲದೇ ಪಕ್ಷದಲ್ಲಿ ಚುನಾವಣಾ ರಣತಂತ್ರಗಳನ್ನು ಹೆಣೆಯುವ ನಿಪುಣರಿದ್ದಾರೆ. ಪ್ರತಿಪಕ್ಷಗಳು ಒಗ್ಗಟ್ಟಿನ ಹೋರಾಟ ನಡೆಸದಿದ್ದರೆ ಈ ಸಲವೂ ಬಿಜೆಪಿಯನ್ನು ಮಣಿಸುವುದು ಅಸಾಧ್ಯ ಎಂದು ಸಿನ್ಹಾ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌