ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಮತ್ತು ರಾಜ್ಯದ 25 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದ ಬೆನ್ನಲ್ಲೇ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಮ್ಮ ನಾಯಕ ವೈ.ಎಸ್.ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದಂತೆ ಸಂಭ್ರಮಿಸುತ್ತಿದ್ದಾರೆ. ಜಗನ್ ಅವರ ಅಭಿಮಾನಿಗಳು ಸಿದ್ಧಪಡಿಸಿರುವ, 'ವೈ.ಎಸ್.ಜಗನ್ ಮೋಹನ್ ರೆಡ್ಡಿ, ಗೌರವಾನ್ವಿತ ಮುಖ್ಯಮಂತ್ರಿ' ಎಂಬ ನಾಮಫಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಪ್ಪುಬಣ್ಣದ ಗ್ರಾನೈಟ್ ಮೇಲೆ ಎಂಬೋಸ್ ಮಾಡಲಾದ ಇಂಗ್ಲಿಷ್ ಅಕ್ಷರಗಳಿಗೆ ಬಂಗಾರದ ವರ್ಣದ ಲೇಪನ ಮಾಡಲಾಗಿದೆ. ''ನಮ್ಮ ಪಕ್ಷ ಈ ರೀತಿ ನಾಮಫಲಕ ಸಿದ್ಧಪಡಿಸಲು ಆದೇಶ ನೀಡಿಲ್ಲ. ಬಹುಶಃ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಹೀಗೆ ಮಾಡಿರಬಹುದು,'' ಎಂದು ಪಕ್ಷದ ಮುಖಂಡರೊಬ್ಬರು ಸ್ಪಷ್ಟೀಕರಣ ನೀಡಿದ್ದಾರೆ. ತೆಲುಗು ದೇಶಂ ಪಾರ್ಟಿ ಮುಖಂಡರು, ''ಇದು ಹುಚ್ಚುತನದ ಪರಮಾವಧಿ,'' ಎಂದು ಟೀಕಿಸಿದ್ದಾರೆ. ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
ಅಭಿಮಾನಿಗಳ ಪಾಲಿಗೆ ಜಗನ್ ಆಂಧ್ರಪ್ರದೇಶದ ಮುಖ್ಯಮಂತ್ರಿ!
'ವೈ.ಎಸ್.ಜಗನ್ ಮೋಹನ್ ರೆಡ್ಡಿ, ಗೌರವಾನ್ವಿತ ಮುಖ್ಯಮಂತ್ರಿ' ಎಂಬ ನಾಮಫಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
Vijaya Karnataka 16 Apr 2019, 5:00 am