ಆ್ಯಪ್ನಗರ

ಮಂಡ್ಯದಲ್ಲಿ ಗಾಂಧಿನಗರ ವರ್ಸಸ್‌ ಪದ್ಮನಾಭನಗರ ನಡುವೆ ಫೈಟ್‌

ಅಂಬಿ ಮನೆ ಮಕ್ಕಳಂತೆ ಬೆಳೆದಿರುವ ಯಶ್‌ ಮತ್ತು ದರ್ಶನ್‌ ಖುದ್ದಾಗಿ ಸುಮಲತಾ ಜತೆಯಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ಬೆಂಬಲವನ್ನು ಬಹಿರಂಗಪಡಿಸಿದ್ದಾರೆ. ಇದಲ್ಲದೇ ಚಿತ್ರರಂಗದ ಹಲವಾರು ಗಣ್ಯರು ಸುಮಲತಾಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Vijaya Karnataka Web 18 Mar 2019, 4:49 pm
ಬೆಂಗಳೂರು: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಚುನಾವಣೆ ಕಣ ಕೂಡ ಬಿಸಿಯೇರತೊಡಗಿದೆ. ಅದರಲ್ಲೂ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರ ಅತ್ಯಂತ ಪ್ರತಿಷ್ಠಿತ ಕಣವಾಗಿ ಹೊರಹೊಮ್ಮಲಿದೆ.
Vijaya Karnataka Web ಸುಮಲತಾ
ಸುಮಲತಾ


ಮಂಡ್ಯದ ಗಂಡು, ರೆಬೆಲ್‌ ಸ್ಟಾರ್‌ ಅಂಬರೀಷ್‌ ಪತ್ನಿ ಸುಮಲತಾ ಈಗ ಚುನಾವಣೆ ಅಖಾಡಕ್ಕೆ ಧುಮುಕುವುದು ಪಕ್ಕಾ ಆಗಿದೆ. ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಈಗಾಗಲೇ ಮಂಡ್ಯ ಅಭ್ಯರ್ಥಿ ಎಂದು ಪ್ರಧಾನಿ ಎಚ್‌ಡಿ ದೇವೇಗೌಡ ಘೋಷಣೆ ಮಾಡಿದ್ದಾರೆ.

ಹೀಗಾಗಿ ಮಂಡ್ಯದಲ್ಲಿ ಸ್ಟಾರ್‌ ವಾರ್‌ಗೆ ವೇದಿಕೆ ಸಜ್ಜಾಗಿದೆ.

ಇಬ್ಬರೂ ಈಗ ಸಿನಿಮಾ ಹಿನ್ನೆಲೆಯುಳ್ಳವರು. ಅದರಲ್ಲೂ ಸುಮಲತಾ ಅಂಬರೀಷ್‌ ಅನುಭವಿ. ಅಂಬರೀಷ್‌ ಸ್ನೇಹಿತರೆಲ್ಲರೂ ಈಗ ಸುಮಲತಾ ಬೆನ್ನಿಗೆ ನಿಂತಿದ್ದಾರೆ.

ಅದರಲ್ಲೂ ಮನೆ ಮಕ್ಕಳಂತೆ ಬೆಳೆದಿರುವ ಯಶ್‌ ಮತ್ತು ದರ್ಶನ್‌ ಖುದ್ದಾಗಿ ಸುಮಲತಾ ಜತೆಯಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ಬೆಂಬಲವನ್ನು ಬಹಿರಂಗಪಡಿಸಿದ್ದಾರೆ.

ಇದಲ್ಲದೇ ಚಿತ್ರರಂಗದ ಹಲವಾರು ಗಣ್ಯರು ಸುಮಲತಾಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಹೀಗಾಗಿ ಇಡೀ ಗಾಂಧಿನಗರವೇ ಮಂಡ್ಯದಲ್ಲಿ ಸುಮಲತಾ ಪರವಾಗಿ ನಿಲ್ಲಲಿದೆ.

ಇನ್ನು ದೇವೇಗೌಡರ ಕುಟುಂಬದವರು ಬೆಂಗಳೂರಿನ ಪದ್ಮನಾಭನಗರದಲ್ಲಿ ನೆಲೆಸಿರುವುದು.

ಮಂಡ್ಯದಲ್ಲಿ ಈಗ ಗಾಂಧಿನಗರ ವರ್ಸಸ್‌ ಪದ್ಮನಾಭನಗರ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಕ್ಲೈಮ್ಯಾಕ್‌ನಲ್ಲಿ ಯಾರಿಗೆ "ಯಶ'ಸ್ಸಿನ "ದರ್ಶನ' ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌