ಆ್ಯಪ್ನಗರ

ಬಿಜೆಪಿ ಸಿದ್ಧಾಂತಕ್ಕೆ 'ಗಂಭೀರ' ಗೆಲುವು

ಲೋಕಸಭಾ ಚುಣಾವಣೆಯಲ್ಲಿ ಪೂರ್ವ ದಿಲ್ಲಿಯಿಂದ ಸ್ಪರ್ಧಿಸಿರುವ ಗೌತಮ್ ಗಂಭೀರ್ ಮೂರು ವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ದಾಖಲಿಸಿದ್ದಾರೆ. ಈ ಮೂಲಕ ರಾಜಕೀಯ ರಂಗದಲ್ಲೂ ಗೆಲುವಿನ ಸಿಹಿ ಅನುಭವಿಸಿದ್ದಾರೆ.

Vijaya Karnataka Web 23 May 2019, 7:21 pm
ಹೊಸದಿಲ್ಲಿ: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಸಕ್ರಿಯ ರಾಜಕೀಯ ರಂಗಕ್ಕೆ ಧುಮುಕಿರುವ ಭಾರತದ 2011 ವಿಶ್ವಕಪ್ ವಿಜೇತ ಹೀರೊ ಗೌತಮ್ ಗಂಭೀರ್, ಲೋಕಸಭಾ ಚುನಾವಣೆಯಲ್ಲಿ ಚೊಚ್ಚಲ ಸ್ಪರ್ಧೆಯಲ್ಲೇ ಗೆಲುವಿನ ಸಿಕ್ಸರ್ ಬಾರಿಸಿದ್ದಾರೆ.
Vijaya Karnataka Web gautam-gambhir


ದಿಲ್ಲಿಯ ಏಳು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿದೆ. ಈ ಪೈಕಿ ಈಸ್ಟ್ ದಿಲ್ಲಿಯಿಂದ ಸ್ಪರ್ಧಿಸಿದ ಗಂಭೀರ್ ಮೂರು ವರೆ ಲಕ್ಷಕ್ಕೂ ಹೆಚ್ಚು ಬಹುಮತದಿಂದ ಗೆಲುವು ದಾಖಲಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಅತೀಶಿ ಮರ್ಲೆನಾ ಹಾಗೂ ಕಾಂಗ್ರೆಸ್‌ನ ಅರ್ವಿಂದರ್ ಸಿಂಗ್ ಲವ್ಲಿ ವಿರುದ್ಧ ಗೆಲುವು ಮೊಳಗಿಸಿರುವ ಗಂಭೀರ್ ಒಟ್ಟು 695109 ಮತಗಳನ್ನು ಕಲೆ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಗೌತಿ, ಇದು ಬಿಜೆಪಿ ಸಿದ್ಧಾಂತಕ್ಕೆ ದೊರಕಿರುವ ಗಂಭೀರವಾದ ಗೆಲುವಾಗಿದೆ ಎಂದಿದ್ದಾರೆ.

ತಮ್ಮ ಎಂದಿನ ಕ್ರಿಕೆಟ್ ಶೈಲಿಯಲ್ಲೇ ಎದುರಾಳಿ ಅಭ್ಯರ್ಥಿಗಳಿಗೆ ಟಾಂಗ್ ನೀಡಿರುವ ಗಂಭೀರ್, ಇದು 'ಲವ್ವಿ' ಕವರ್ ಡ್ರೈವ್ ಅಥವಾ 'ಅತೀಶಿ' ಬ್ಯಾಟಿಂಗ್ ಅಲ್ಲ! ಬದಲಾಗಿ ಜನರು ಬಿಜೆಪಿ ಸಿದ್ಧಾಂತಕ್ಕೆ ನೀಡಿದ ಗಂಭೀರವಾದ ಬೆಂಬಲವಾಗಿದೆ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಅಂತ:ಸತ್ವ ಮತ್ತು ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. 8 ತಿಂಗಳಲ್ಲಿ ತಮ್ಮ ಅಧಿಕಾರವನ್ನು ಸಹ ಕಳೆದುಕೊಳ್ಳಲಿದ್ದಾರೆ. ದಿಲ್ಲಿಯಾದ್ಯಂತ ಅವರೆಷ್ಟು ಕೆಸರನ್ನು ಹರಡಿದ್ದಾರೋ ಅಷ್ಟೇ ಕಮಲ ಅರಳಲಿದೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ