ಆ್ಯಪ್ನಗರ

ತುಕಡೆ ತುಕಡೆ ಗ್ಯಾಂಗ್ ಕನ್ಹಯ್ಯಗೆ ಹೀನಾಯ ಸೋಲು

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ, ತುಕಡೆ ತುಕಡೆ ಗ್ಯಾಂಗ್ ಸದಸ್ಯ ಕನ್ಹಯ್ಯ ಕುಮಾರ್ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

Vijaya Karnataka Web 23 May 2019, 4:44 pm
ಪಟನಾ: ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರಿಂದ ಹೀನಾಯ ಸೋಲುಂಡಿದ್ದಾರೆ.
Vijaya Karnataka Web Singh-Kumar


3,94,000 ಮತಗಳ ಭಾರಿ ಅಂತರದಿಂದ ಅವರು ಮಣ್ಣುಮುಕ್ಕಿದ್ದಾರೆ.

56% ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಸಿಂಗ್ ಒಟ್ಟು 5,74,671 ಮತಗಳನ್ನು ಬುಟ್ಟಿಗೆ ಹಾಕಿಕೊಂಡರೆ, 2,23,770 ಮತಗಳು ಕನ್ಹಯ್ಯ ಪಾಲಿಗೆ ದೊರೆತವು.

ದೇಶದ್ರೋಹ ಪ್ರಕರಣ ಎದುರಿಸುತ್ತಿರುವ, ತುಕಡೆ ತುಕಡೆ ಗ್ಯಾಂಗ್ ಸದಸ್ಯ ಕನ್ಹಯ್ಯ ಕುಮಾರ್ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

2014ರ ಲೋಕಸಭಾ ಚುನಾವಣೆಯಲ್ಲಿ ಗಿರಿರಾಜ್‌ ಸಿಂಗ್‌ ನವಡಾ ಕ್ಷೇತ್ರದಿಂದ ಗೆದ್ದಿದ್ದರು. ಆದರೆ ಈ ಬಾರಿ ಅವರಿಗೆ ನವಡಾ ಕ್ಷೇತ್ರದಿಂದ ಟಿಕೆಟ್‌ ನೀಡದೆ, ಬೇಗುಸರಾಯ್‌ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ನವಡಾ ಕ್ಷೇತ್ರವನ್ನು ಮಿತ್ರಪಕ್ಷ ಎಲ್‌ಜೆಪಿಗೆ ಬಿಟ್ಟುಕೊಡಲಾಗಿತ್ತು. ಪಕ್ಷದ ವರಿಷ್ಠರ ಈ ನಡೆಯು ಗಿರಿರಾಜ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಅಸಮಧಾನದ ನಡುವೆಯೂ ಅವರು ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಪರ್ಧೆಗೆ ಬಿಜೆಪಿ ನಾಯಕನ ಹಿಂಜರಿಕೆ ಬಗ್ಗೆ ವ್ಯಂಗ್ಯವಾಡಿದ್ದ ಕನ್ಹಯ್ಯ ಕುಮಾರ್‌, ಗಿರಿರಾಜ್‌ ಸಿಂಗ್‌ ಅವರನ್ನು ಶಾಲೆಗೆ ಹೋಗೆನೆಂದು ಚಂಡಿ ಹಿಡಿಯುವ ಹುಡುಗನಿಗೆ ಹೋಲಿಸಿದ್ದರು.

ಮತ್ತೀಗ ಗಿರಿರಾಜ್ ಸಿಂಗ್ ವಿರುದ್ಧ ಲಕ್ಷಾಂತರ ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಸೋಲುಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌