ಆ್ಯಪ್ನಗರ

ಪ್ರಿಯಾಂಕಾ ಇಟಲಿಗೆ ಹೋಗಿ ಪಾಠ ಮಾಡಲಿ ಎಂದು ಯೋಗಿ

''ಪ್ರಿಯಾಂಕಾ ಅವರಿಗೆ ಕೆಟ್ಟದ್ದನ್ನು ಬೋಧಿಸಲೇ ಬೇಕೆಂದಿದ್ದರೆ ಇಟಲಿಗೆ ಹೋಗಿ ಬೋಧಿಸಿಎಂದು ಯೋಗಿ ಸಲಹೆ ಮಾಡಿದ್ದಾರೆ.

Vijaya Karnataka 8 May 2019, 5:00 am
ಹೊಸದಿಲ್ಲಿ: ಅಮೇಠಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲು ಮಕ್ಕಳನ್ನು ಹುರಿದುಂಬಿಸಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ 'ಇಟಲಿ ಬೋಧನೆ' ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಲಹೆ ಮಾಡಿದ್ದಾರೆ.
Vijaya Karnataka Web yogi

''ಪ್ರಿಯಾಂಕಾ ಅವರು ಮುಗ್ಧ ಮಕ್ಕಳ ಮನಸ್ಸಿನಲ್ಲಿ ದ್ವೇಷದ ರಾಜಕಾರಣದ ಬೀಜ ಬಿತ್ತುವ ಪ್ರಯತ್ನ ಮಾಡಿದ್ದಾರೆ. ಅದು ಕೆಟ್ಟ ಪ್ರವೃತ್ತಿ. ಅಂತಹ ಕೆಟ್ಟದ್ದನ್ನು ಬೋಧಿಸಲೇ ಬೇಕೆಂದಿದ್ದರೆ ಇಟಲಿಗೆ ಹೋಗಿ ಬೋಧಿಸಿ,'' ಎಂದು ಯೋಗಿ ಬಹಿರಂಗ ರಾರ‍ಯಲಿಯಲ್ಲಿ ಬುದ್ಧಿವಾದ ಮಾಡಿದರು.
''ಕಾಂಗ್ರೆಸ್‌ ಒಂದು ವಿಫಲ ಪಕ್ಷ, ಅದು ಈ ಬಾರಿ ರಾಹುಲ್‌ ಗಾಂಧಿ ಸ್ಪರ್ಧಿಸಿರುವ ತನ್ನ ಮೂಲ ನೆಲೆ ಅಮೇಠಿ ಕ್ಷೇತ್ರದಲ್ಲಿಯೇ ಮುಗ್ಗರಿಸಲಿದೆ,'' ಎಂದು ಆದಿತ್ಯನಾಥ್‌ ಭವಿಷ್ಯ ನುಡಿದಿದರು. ''ಕಾಂಗ್ರೆಸ್‌ ವಿಫಲಗೊಳ್ಳಲು ಅದರ ನಕಾರಾತ್ಮಕ ರಾಜಕಾರಣವೇ ಕಾರಣ. ರಾಜಕುಮಾರ (ರಾಹುಲ್‌ ಗಾಂಧಿ) ಠುಸ್‌ ಆದ ಬಳಿಕ ರಾಜಕುಮಾರಿ (ಪ್ರಿಯಾಂಕಾ ಗಾಂಧಿ ವಾದ್ರಾ) ಅವರನ್ನು ಪಕ್ಷ ಅಖಾಡಕ್ಕೆ ಇಳಿಸಿದೆ. ಇದಾಗಿಯೂ ಆ ಪಕ್ಷದ ದುಸ್ಥಿತಿ ಸುಧಾರಿಸಿಲ್ಲ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ