ಬೆಂಗಳೂರು: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 2ನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ನಾಯಕರೊಟ್ಟಿಗೆ ಜಂಟಿ ಪ್ರಚಾರ ನಡೆಸುವುದು ಅನುಮಾನ.
ಕೊನೇ ಕ್ಷಣದ ತನಕ ತುಮಕೂರು ಕ್ಷೇತ್ರ ಸುತ್ತಿರುವ ಕಾರಣ ಕಾಲು ನೋವಿನ ಸಮಸ್ಯೆ ಹೆಚ್ಚಿದೆ. ಹೀಗಾಗಿ, 2ನೇ ಹಂತದ ಪ್ರಚಾರ ಪ್ರವಾಸ ನಡೆಸುವುದು ಕಷ್ಟ ಎನ್ನಲಾಗಿದೆ. ಗುರುವಾರ ಮತದಾನ ಮುಗಿಸಿ ವಿಶ್ರಾಂತಿ ಪಡೆಯಲಿರುವ ದೇವೇಗೌಡರು ಏ.19ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯಂತೆ ಒಂದು ದಿನ ಕಲಬುರಗಿಯಲ್ಲಿ ಪ್ರಚಾರಕ್ಕೆ ಹೋಗಿಬರುವ ಸಾಧ್ಯತೆ ಇದ್ದು, ಉತ್ತರ ಕನ್ನಡ ಅಥವಾ ವಿಜಯಪುರ ಪೈಕಿ ಒಂದು ಕ್ಷೇತ್ರದಲ್ಲಿ ಪ್ರಚಾರ ಬಯಸಿದ್ದಾರೆ. ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರೊಟ್ಟಿಗೆ ಎಲ್ಲ 14 ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಕೊನೇ ಕ್ಷಣದ ತನಕ ತುಮಕೂರು ಕ್ಷೇತ್ರ ಸುತ್ತಿರುವ ಕಾರಣ ಕಾಲು ನೋವಿನ ಸಮಸ್ಯೆ ಹೆಚ್ಚಿದೆ. ಹೀಗಾಗಿ, 2ನೇ ಹಂತದ ಪ್ರಚಾರ ಪ್ರವಾಸ ನಡೆಸುವುದು ಕಷ್ಟ ಎನ್ನಲಾಗಿದೆ. ಗುರುವಾರ ಮತದಾನ ಮುಗಿಸಿ ವಿಶ್ರಾಂತಿ ಪಡೆಯಲಿರುವ ದೇವೇಗೌಡರು ಏ.19ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯಂತೆ ಒಂದು ದಿನ ಕಲಬುರಗಿಯಲ್ಲಿ ಪ್ರಚಾರಕ್ಕೆ ಹೋಗಿಬರುವ ಸಾಧ್ಯತೆ ಇದ್ದು, ಉತ್ತರ ಕನ್ನಡ ಅಥವಾ ವಿಜಯಪುರ ಪೈಕಿ ಒಂದು ಕ್ಷೇತ್ರದಲ್ಲಿ ಪ್ರಚಾರ ಬಯಸಿದ್ದಾರೆ. ನಿರೀಕ್ಷೆಯಂತೆ ಸಿದ್ದರಾಮಯ್ಯ ಅವರೊಟ್ಟಿಗೆ ಎಲ್ಲ 14 ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.