ಆ್ಯಪ್ನಗರ

ರಾಜಸ್ಥಾನದಲ್ಲಿ ಸಟ್ಟಾಬಾಜಿ: ಬಿಜೆಪಿ ಪರ ನಿಂತಿರುವ ಬಾಜಿದಾರರು

ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತದ ವಾಯುದಾಳಿಯು ಮತದಾರರ ಮೇಲೆ ಪರಿಣಾಮ ಬೀರಿದ್ದು, ವಾತಾವರಣ ಪ್ರಧಾನಿ ಮೋದಿ ಪರವಾಗಿ ಬದಲಾಗಿದೆ ಎಂದು ಬುಕ್ಕಿಗಳು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 18 Mar 2019, 9:19 pm
ಜೈಸಲ್ಮೇರ್‌: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಸಮೀಕ್ಷೆಗಳು ಜೋರಾಗಿ ಸಾಗುತ್ತಿವೆ.
Vijaya Karnataka Web ಸಟ್ಟಾ ಬಾಜಿ
ಸಟ್ಟಾ ಬಾಜಿ


ಈ ನಿಟ್ಟಿನಲ್ಲಿ ಮಾಧ್ಯಮಗಳು ವಾರಕ್ಕೊಂದು, ಹದಿನೈದು ದಿನಕ್ಕೊಂದು, ತಿಂಗಳಿಗೊಂದು ಸಮೀಕ್ಷೆಗಳನ್ನು ನಡೆಸುತ್ತಲೇ ಇದೆ.

ಸಮೀಕ್ಷೆ ನಾನಾ ರೀತಿಯ ವರದಿಗಳನ್ನು ನೀಡುತ್ತಿವೆ.

ಇದರ ಬೆನ್ನಲ್ಲೇ ಸಟ್ಟಾ ಬಜಾರ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಬೆಟ್ಟಿಂಗ್‌ ಸಾಗುತ್ತಿದೆ.

ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಮೇಲಂತೂ ಬೆಟ್ಟಿಂಗ್‌ ದಂಧೆಯೂ ಜೋರಾಗಿದ್ದು, ಬಿಜೆಪಿ ಗೆಲುವಿನ ಮೇಲೆ ಭಾರಿ ಬಾಜಿ ಕಟ್ಟಲಾಗುತ್ತಿದೆ.

ರಾಜಸ್ಥಾನದ ಜೋಧ್‌ಪುರ ಬಳಿ ಇರುವ ಫಲೋಡಿಯಲ್ಲಿ ಬಾಜಿ ಮಾರುಕಟ್ಟೆಯಲ್ಲಿ ಬಾಜಿ ಜೋರಾಗಿದೆ.

''ಈ ಬಾರಿ ಕೇಂದ್ರದಲ್ಲಿ ಎನ್‌ಡಿಎ ಸರಕಾರ ರಚನೆ ಮಾಡಲಿದೆ. ಬಿಜೆಪಿ 250 ಸ್ಥಾನಗಳು ಮತ್ತು ಎನ್‌ಡಿಎ ಮೈತ್ರಿಕೂಟ 300 ರಿಂದ 310 ಸ್ಥಾನಗಳನ್ನು ಪಡೆಯಲಿದೆ. 25 ಕ್ಷೇತ್ರಗಳ ರಾಜಸ್ಥಾನದಲ್ಲಿ ಬಿಜೆಪಿ 18-20 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ,'' ಎಂದು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತದ ವಾಯುದಾಳಿಯು ಮತದಾರರ ಮೇಲೆ ಪರಿಣಾಮ ಬೀರಿದ್ದು, ವಾತಾವರಣ ಪ್ರಧಾನಿ ಮೋದಿ ಪರವಾಗಿ ಬದಲಾಗಿದೆ ಎಂದು ಬುಕ್ಕಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾಲಾಕೋಟ್‌ ದಾಳಿಗೆ ಮುನ್ನ, ಬಿಜೆಪಿ 200 ಮತ್ತು ಎನ್‌ಡಿಎ ಮೈತ್ರಿಕೂಟ 280 ಸ್ಥಾನಗಳನ್ನು ಗಳಿಸಬಹುದೆಂದು ಅಂದಾಜಿಸಲಾಗಿತ್ತು. ಈ ಮಧ್ಯೆ, ಕಾಂಗ್ರೆಸ್‌ನ ಸೀಟು ಗಳಿಕೆ ಸಾಧ್ಯತೆಯನ್ನು ಬುಕ್ಕಿಗಳು 100 ರಿಂದ 72-74ಕ್ಕೆ ಇಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ