ಆ್ಯಪ್ನಗರ

ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಸರಿಸಲೇ ಬೇಕಾದ ನಿಯಮಗಳಿವು

ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ದಿನಾಂಕಗಳನ್ನು ರಾಜ್ಯ ಚುನಾವಣೆ ಆಯೋಗ ಈಗಾಗಲೇ ಪ್ರಕಟ ಮಾಡಿದೆ. ಜತೆಗೆ ರಾಜ್ಯದಲ್ಲಿ ನಿತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಪಟ್ಟಿ ಇಲ್ಲಿದೆ.

Vijaya Karnataka Web 17 Mar 2019, 11:27 am
ಏನೇನು ಮಾಡಬಹುದು?
Vijaya Karnataka Web here are the rules and regulations of code of conduct in karnataka 2019
ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಸರಿಸಲೇ ಬೇಕಾದ ನಿಯಮಗಳಿವು

  1. ಚುನಾವಣಾ ಪೂರ್ವ ಆರಂಭಗೊಂಡಿರುವ ಯೋಜನೆಗಳನ್ನು ಮುಂದುವರಿಸಬಹುದು.
  2. ಅತಿವೃಷ್ಟಿ, ಅನಾವೃಷ್ಟಿ ಪ್ರದೇಶಗಳಿಗೆ ಪರಿಹಾರ ಕ್ರಮ ಕೈಗೊಳ್ಳಲು ಯಾವುದೇ ತೊಂದರೆ ಇಲ್ಲ
  3. ಯೋಜನೆಗಳು ಪೂರ್ಣಗೊಂಡಿದ್ದರೆ ಸಾರ್ವಜನಿಕರು ಬಳಕೆ ಮಾಡಬಹುದು.
  4. ಕಾರ್ಯಕ್ರಮ ನಡೆಸುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಂಡಿರಬೇಕು
  5. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಯೋಜನೆ, ನೀತಿ, ಕೆಲಸಗಳ ಬಗ್ಗೆ ಮಾತ್ರ ಟೀಕಿಸಲು ಅವಕಾಶ
  6. ಜಾಹೀರಾತು ನೀಡುವ ಮೊದಲು ಮಾಧ್ಯಮಗಳು ಪೂರ್ವ ನಿಗದಿತ ಪ್ರಮಾಣಪತ್ರ (ಪ್ರೀ ಸರ್ಟಿಫಿಕೇಷನ್‌) ಪಡೆದುಕೊಂಡಿರುವ ಬಗ್ಗೆ ಮಾಹಿತಿ ಹೊಂದಿರಬೇಕು
  7. ಮುದ್ರಣ ಮಾಧ್ಯಮಗಳು ಮತದಾನದ 24 ಗಂಟೆಗೂ ಮುನ್ನ, ದೃಶ್ಯ ಮಾಧ್ಯಮಗಳು 48 ಗಂಟೆಗೂ ಮುನ್ನ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು.
ಏನೇನು ಮಾಡಬಾರದು?
  1. ಹೊಸದಾಗಿ ಯಾವುದೇ ಯೋಜನೆ ಆರಂಭಿಸಬಾರದು, ಯಾವುದೇ ಅಶ್ವಾಸನೆ ನೀಡಬಾರದು.
  2. ತಮ್ಮ ಹೆಸರು ಇಲ್ಲದ ಮತಕೇಂದ್ರಗಳಿಗೆ ಸಚಿವರು,ಶಾಸಕರು ಪ್ರವೇಶಿಸುವಂತಿಲ್ಲ.
  3. ಬಜೆಟ್‌ನಲ್ಲಿ ಯೋಜನೆಗಳು ಅಂಗೀಕಾರವಾಗಿದ್ದರೂ ಅನುಷ್ಠಾನಗೊಳಿಸುವಂತಿಲ್ಲ.
  4. ಸರಕಾರಿ ಸಿಬ್ಬಂದಿ ಪೂರ್ಣಗೊಂಡ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದು. ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ
  5. ಯಾವುದೇ ಹೊಸ ನೇಮಕಾತಿಗಳನ್ನು ಕೆಪಿಎಸ್‌ಸಿ, ಯುಪಿಎಸ್‌ಸಿ ಮಾಡುವಂತಿಲ್ಲ.
  6. ಸರಕಾರಿ ವಾಹನಗಳನ್ನು ಜನಪ್ರತಿನಿಧಿಗಳು ಸ್ವಂತಕ್ಕೆ ಬಳಕೆ ಮಾಡುವಂತಿಲ್ಲ.
  7. ವೈಯಕ್ತಿಕ ನಿಂದನೆ, ಧಾರ್ಮಿಕ ನಿಂದನೆಯನ್ನು ಜನಪ್ರತಿನಿಧಿಗಳು ಪ್ರಚಾರದ ವೇಳೆ ಮಾಡುವಂತಿಲ್ಲ.
  8. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌