ಆ್ಯಪ್ನಗರ

ಅಂಟುಪಟ್ಟಿ ಹಚ್ಚಿ ಮೋದಿ ಬಾಯಿ ಮುಚ್ಚಿಸಬೇಕೆಂದ ಮಮತಾ

​​''ಮಮತಾ ಬ್ಯಾನರ್ಜಿ ಅವರಿಗೆ ಮೋದಿ ಭಯ ಹುಟ್ಟಿಕೊಂಡಿದೆ,'' ಎಂದು ಪ್ರಧಾನಿ ಭಾನುವಾರ ಕೂಚ್‌ಬಿಹಾರ್‌ನಲ್ಲಿ ಹೇಳಿದ್ದನ್ನು ಪ್ರಸ್ತಾಪಿಸಿದಿ ದೀದಿ, ''ನನ್ನನ್ನು ಹೆದರಿಸಲು ಯತ್ನಿಸುವ ಮೂಲಕ ಬಹುದೊಡ್ಡ ತಪ್ಪು ಮಾಡುತ್ತಿದ್ದೀರಿ,'' ಎಂದು ಎಚ್ಚರಿಕೆ ನೀಡಿದರು.

Vijaya Karnataka 9 Apr 2019, 7:56 am
ಕೋಲ್ಕೊತಾ: ಶಸ್ತ್ರಚಿಕಿತ್ಸೆಗಳಲ್ಲಿ ಬಳಸುವ ಅಂಟುಪಟ್ಟಿ (ಸರ್ಜಿಕಲ್‌ ಅಡ್ಹೆಸ್ಸೀವ್‌ ಟೇಪ್‌) ಅಂಟಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಾಯಿ ಮುಚ್ಚಿಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Vijaya Karnataka Web mamata banerjee


ನಾಗ್ರಾಕಟಾದಲ್ಲಿ ಸೋಮವಾರ ತೃಣಮೂಲ ಕಾಂಗ್ರೆಸ್‌ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಸುಳ್ಳು ಹೇಳುವ ಸ್ಪರ್ಧೆ ಇದ್ದರೆ ಮೋದಿ ಅವರಿಗೆ ಮೊದಲನೇ ಬಹುಮಾನ ಸಿಗುವುದು ಖಚಿತ. ವಿದೇಶ ಪ್ರಯಾಣದಲ್ಲೇ ಐದು ವರ್ಷ ಕಳೆದ ಪ್ರಧಾನಿ ದೇಶ ಹಾಗೂ ರೈತರಿಗಾಗಿ ಏನೂ ಮಾಡಲಿಲ್ಲ. ದೇಶದ ಹಿತಕ್ಕಾಗಿ ಈ ಸಲ ಮತದಾರರು ಮೋದಿ ಅವರನ್ನು ಅಧಿಕಾರದಿಂದ ಕಿತ್ತೊಗೆಯುವುದು ಮಾತ್ರವಲ್ಲ, ರಾಜಕಾರಣದಿಂದಲೇ ದೂರ ಇಡಬೇಕು,'' ಎಂದು ಹೇಳಿದರು.

''ಮಮತಾ ಬ್ಯಾನರ್ಜಿ ಅವರಿಗೆ ಮೋದಿ ಭಯ ಹುಟ್ಟಿಕೊಂಡಿದೆ,'' ಎಂದು ಪ್ರಧಾನಿ ಭಾನುವಾರ ಕೂಚ್‌ಬಿಹಾರ್‌ನಲ್ಲಿ ಹೇಳಿದ್ದನ್ನು ಪ್ರಸ್ತಾಪಿಸಿದಿ ದೀದಿ, ''ನನ್ನನ್ನು ಹೆದರಿಸಲು ಯತ್ನಿಸುವ ಮೂಲಕ ಬಹುದೊಡ್ಡ ತಪ್ಪು ಮಾಡುತ್ತಿದ್ದೀರಿ,'' ಎಂದು ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ