ಆ್ಯಪ್ನಗರ

ಮೂರನೇ ದಿನವೂ ಐಟಿ ದಾಳಿ

ಸ್ವಯಂ ಸೇವಾ ಸಂಸ್ಥೆಯೊಂದರ ವ್ಯವಸ್ಥಾಪಕರಾಗಿರುವ ಶರ್ಮಾ ಅವರು ಕಮಲ್‌ನಾಥ್‌ ಜತೆಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ನಿವಾಸದಿಂದ ಕೆಲವು ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka 10 Apr 2019, 5:00 am
ಹೊಸದಿಲ್ಲಿ: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಆಪ್ತರ ಮೇಲೆ 'ಐಟಿ ಪ್ರಹಾರ' ಸತತ ಮೂರನೇ ದಿನವೂ ಮುಂದುವರಿದಿದೆ. ಸಿಎಂ ಅವರ ವಿಶೇಷಾಧಿಕಾರಿ ಪ್ರವೀಣ್‌ ಕಕ್ಕರ್‌ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ 10 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
Vijaya Karnataka Web kamalnath


ಹಲವು ವ್ಯವಹಾರಗಳಲ್ಲಿ ಕಕ್ಕರ್‌ ಹಾಗೂ ಅಶ್ವಿನಿ ಶರ್ಮಾ ಪಾಲುದಾರರೂ ಆಗಿದ್ದಾರೆ. ಸ್ವಯಂ ಸೇವಾ ಸಂಸ್ಥೆಯೊಂದರ ವ್ಯವಸ್ಥಾಪಕರಾಗಿರುವ ಶರ್ಮಾ ಅವರು ಕಮಲ್‌ನಾಥ್‌ ಜತೆಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ನಿವಾಸದಿಂದ ಕೆಲವು ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಕ್ಕರ್‌ ಅವರ ಇಂದೋರ್‌ ನಿವಾಸ ಮತ್ತು ಕಮಲ್‌ನಾಥ್‌ ಅವರ ಮಾಜಿ ಸಲಹೆಗಾರ ಆರ್‌.ಕೆ.ಮಲ್ಕಾನಿ ಅವರ ದಿಲ್ಲಿ ನಿವಾಸದ ಮೇಲೆ ಭಾನುವಾರಷ್ಟೇ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ನಗದು ವಶಪಡಿಸಿಕೊಂಡಿದ್ದರು. ಇಂದೋರ್‌, ಭೋಪಾಲ್‌, ಗೋವಾ ಮತ್ತು ಎನ್‌ಸಿಆರ್‌ನ ವಿವಿಧ 50 ಕಡೆಗಳಲ್ಲಿ ಆದಾಯ ತೆರಿಗೆ ದಾಳಿ ನಡೆದಿದೆ. ಈವರೆಗೆ ಸೂಕ್ತ ದಾಖಲೆ ಇಲ್ಲದ 281 ಕೋಟಿ ರೂ. ವಶಪಡಿಸಿಕೊಳ್ಳಲಾಗಿದ್ದು, ರಾಜಕೀಯ ಪಕ್ಷವೊಂದರ ದಿಲ್ಲಿ ಕೇಂದ್ರ ಕಚೇರಿಗೆ ರವಾನಿಸಲು ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ನಗದು ಹಣದ ಜತೆಗೆ ಭಾರಿ ಬೆಲೆಬಾಳುವ ಚಿನ್ನಾಭರಣಗಳನ್ನು ಕೂಡ ಕಕ್ಕರ್‌ ನಿವಾಸಗಳಿಂದ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ದಾಖಲೆಪತ್ರಗಳೂ ಪತ್ತೆಯಾಗಿವೆ ಎಂದು ಐಟಿ ಪ್ರಕಟಣೆ ತಿಳಿಸಿದೆ.

ಐಟಿ ಅಧಿಕಾರಿಗಳು ಹೇಳಿಕೊಳ್ಳುವ ಪ್ರಕಾರ ತಮ್ಮ ನಿವಾಸಗಳಲ್ಲಿ ಯಾವುದೇ ಅಕ್ರಮ ನಗ-ನಾಣ್ಯ ಪತ್ತೆಯಾಗಿಲ್ಲ. ಸಂಶಯಾಸ್ಪದ ದಾಖಲೆ ಪತ್ರಗಳೂ ಲಭಿಸಿಲ್ಲ. ಅದೆಲ್ಲವೂ ಕಟ್ಟುಕತೆ. ಇಡೀ ದಾಳಿಯ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ ಎಂದು ದಾಳಿಗೊಳಗಾದ ಕಮಲ್‌ನಾಥ್‌ ಆಪ್ತರು ಹೇಳಿದ್ದಾರೆ. ಕಮಲ್‌ನಾಥ್‌ ಈವರೆಗೂ ದಾಳಿ ಕುರಿತು ತುಟಿ ಬಿಚ್ಚಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌