ಆ್ಯಪ್ನಗರ

ರಾಯ್‌ಬರೇಲಿ: ಸೋನಿಯಾ ವಿರುದ್ಧ ದಿನೇಶ್ ಪ್ರತಾಪ್‌ ಸಿಂಗ್‌ ಫೈಟ್‌

ಈಶಾನ್ಯ ಮುಂಬೈನಲ್ಲಿ ಕಿರಿತ್‌ ಸೋಮಯ್ಯ ಬದಲಿಗೆ ಮನೋಜ್‌ ಕೋಟಕ್‌ರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಕಿರಿತ್‌ ಸೋಮಯ್ಯ ವಿರುದ್ಧ ಶಿವಸೇನೆ ಕಿರಿಕ್‌ ತೆಗೆದ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

Vijaya Karnataka Web 3 Apr 2019, 7:39 pm
ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯ 16ನೇ ಪಟ್ಟಿ ಬಿಡುಗಡೆಯಾಗಿದೆ.
Vijaya Karnataka Web ಸೋನಿಯಾ ಗಾಂಧಿ
ಸೋನಿಯಾ ಗಾಂಧಿ


ಇದರಲ್ಲಿ ಪ್ರಮುಖವಾಗಿ ಸೋನಿಯಾಗಾಂಧಿ ವಿರುದ್ಧ ರಾಯ್ ಬರೇಲಿಯಲ್ಲಿ ಯಾರು ಸ್ಪರ್ಧಿಸುತ್ತಾರೆ ಎಂಬುದು ಗೊತ್ತಾಗಿದೆ.

ಉತ್ತರ ಪ್ರದೇಶದ ರಾಯ್‌ ಬರೇಲಿಯಲ್ಲಿ ಸೋನಿಯಾಗಾಂಧಿ ವಿರುದ್ಧ ಬಿಜೆಪಿಯ ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು ಕಣಕ್ಕಿಳಿಸಲಾಗಿದೆ.

ಇದಲ್ಲದೇ ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಮುಲಾಯುಂ ಸಿಂಗ್‌ ಯಾದವ್ ವಿರುದ್ಧ ಪ್ರೇಮ್‌ ಸಿಂಗ್ ಶಕ್ಯಾ ಕಣಕ್ಕಿಳಿಸಲಾಗಿದೆ.


ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್ ವಿರುದ್ಧ ಭೋಜ್‌ಪುರಿ ಸೂಪರ್‌ ಸ್ಟಾರ್‌ ದಿನೇಶ್‌ ಲಾಲ್‌ ಯಾದವ್‌ ನಿರ್ಹುವಾಗೆ ಟಿಕೆಟ್‌ ನೀಡಲಾಗಿದೆ.

ಈ ಬಾರಿಯ ಪಟ್ಟಿಯಲ್ಲಿ ಬಿಜೆಪಿಯ ಹಾಲಿ ಸಂಸದರಿಗೆ ಶಾಕ್‌ ಆಗಿದೆ.

ಈಶಾನ್ಯ ಮುಂಬೈನಲ್ಲಿ ಕಿರಿತ್‌ ಸೋಮಯ್ಯ ಬದಲಿಗೆ ಮನೋಜ್‌ ಕೋಟಕ್‌ರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.

ಕಿರಿತ್‌ ಸೋಮಯ್ಯ ವಿರುದ್ಧ ಶಿವಸೇನೆ ಕಿರಿಕ್‌ ತೆಗೆದ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌