ಆ್ಯಪ್ನಗರ

ಮಮತಾ ಮುಂದೆ ಜೈ ಶ್ರೀರಾಮ್ ಎಂದಿದ್ದಕ್ಕೆ ಮೂವರ ಬಂಧನ

ರಾಧಾಬಲ್ಲಭಾಪುರದ ಬಳಿ ಮಮತಾ ಬೆಂಗಾವಲು ಪಡೆಯೊಂದಿಗೆ ಸಾಗುತ್ತಿದ್ದಾಗ ಮೂವರು ಜೈ ಶ್ರೀರಾಮ್ ಎಂದು ಕೂಗಿದರು. ಅದನ್ನು ಕೇಳಿಸಿಕೊಂಡು ವಾಹನದಿಂದ ಕೆಳಕ್ಕಿಳಿದ ಸಿಎಂ ಧೈರ್ಯವಿದ್ದರೆ ಮುಂದೆ ಬನ್ನಿ ಎನ್ನುತ್ತ ಅವರಿಗೆ ಧಮ್ಕಿ ಹಾಕಿದ್ದಾರೆ. ಆಗ ಕೆಲವರು ಆ ಸ್ಥಳದಿಂದ ಪರಾರಿಯಾಗಿದ್ದಾರೆ.

Times Now 5 May 2019, 2:07 pm
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಹನ ಹಾದು ಹೋಗುವಾಗ ಜೈ ಶ್ರೀರಾಮ್ ಎಂದಿದ್ದಕ್ಕೆ ಮೂವರನ್ನು ಬಂಧಿಸಿದ ಪ್ರಸಂಗ ಪಶ್ಚಿಮ ಬಂಗಾಳದ ಘಟ್ಕಲ್‌ ಬಳಿ ನಡೆದಿದೆ.
Vijaya Karnataka Web mamata banerjee


ರಾಧಾಬಲ್ಲಭಾಪುರದ ಬಳಿ ಮಮತಾ ಬೆಂಗಾವಲು ಪಡೆಯೊಂದಿಗೆ ಸಾಗುತ್ತಿದ್ದಾಗ ಮೂವರು ಜೈ ಶ್ರೀರಾಮ್ ಎಂದು ಕೂಗಿದರು. ಅದನ್ನು ಕೇಳಿಸಿಕೊಂಡು ವಾಹನದಿಂದ ಕೆಳಕ್ಕಿಳಿದ ಸಿಎಂ ಧೈರ್ಯವಿದ್ದರೆ ಮುಂದೆ ಬನ್ನಿ ಎನ್ನುತ್ತ ಅವರಿಗೆ ಧಮ್ಕಿ ಹಾಕಿದ್ದಾರೆ. ಆಗ ಕೆಲವರು ಆ ಸ್ಥಳದಿಂದ ಪರಾರಿಯಾಗಿದ್ದಾರೆ.

ಘೋಷಣೆ ಕೂಗಿದವರಲ್ಲಿ ಮೂವರನ್ನು ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಮಮತಾ ಅವರು ಶನಿವಾರ ಅಂತಿಮ ಹಂತದ ಪ್ರಚಾರಕ್ಕೆಂದು ತೆರಳುತ್ತಿದ್ದಾಗ ಈ ಘಟನೆ ನಡೆದಿದ್ದು, ಘೋಷಣೆ ಕೂಗಿದವರೆಲ್ಲ ಬಿಜೆಪಿ ಕಾರ್ಯಕರ್ತರೆಂದು ಹೇಳಲಾಗುತ್ತಿದೆ.

ಸೋಮವಾರ ದೇಶದಲ್ಲಿ 5ನೇ ಹಂತದ ಮತದಾನ ನಡೆಯುತ್ತಿದ್ದು, ಇದರಲ್ಲಿ ಪಶ್ಚಿಮ ಬಂಗಾಳ ಕೂಡ ಸೇರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌