ಆ್ಯಪ್ನಗರ

ಪಾಕ್‌ ವಿರುದ್ಧ 4 ಯುದ್ಧ ನಡೆದಾಗ ಮೋದಿ ಎಲ್ಲಿದ್ದರು ಎಂದ ಸಿದ್ದರಾಮಯ್ಯ

ಪಾಕಿಸ್ತಾನದ ವಿರುದ್ಧ ಈವರೆಗೂ ನಾಲ್ಕು ಯುದ್ಧಗಳಾಗಿವೆ, 12 ಬಾರಿ ಸರ್ಜಿಕಲ್‌ ದಾಳಿ ಆಗಿದ್ದು ದೇಶ ರಕ್ಷಣೆ ನನ್ನಿಂದಲೇ ಎಂದು ಹೇಳಿಕೊಳ್ಳುವ ಮೋದಿ ಆಗ ಎಲ್ಲಿದ್ದರು? ಇತಿಹಾಸ ತೆಗೆದು ನೋಡಲಿ. ಆದರೆ ವಾಜಪೇಯಿ ಸೇರಿದಂತೆ ಹಿಂದಿನ ಯಾವ ಪ್ರಧಾನಿಯೂ ಈ ವಿಷಯಗಳನ್ನು ಚುನಾವಣೆಗೆ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದರು.

Vijaya Karnataka 21 Apr 2019, 7:24 am
ವಿಕ ಸುದ್ದಿಲೋಕ ದಾವಣಗೆರೆ
Vijaya Karnataka Web Siddu


ಪಾಕಿಸ್ತಾನದ ವಿರುದ್ಧ ಈವರೆಗೂ ನಾಲ್ಕು ಯುದ್ಧಗಳಾಗಿವೆ, 12 ಬಾರಿ ಸರ್ಜಿಕಲ್‌ ದಾಳಿ ಆಗಿದ್ದು ದೇಶ ರಕ್ಷಣೆ ನನ್ನಿಂದಲೇ ಎಂದು ಹೇಳಿಕೊಳ್ಳುವ ಮೋದಿ ಆಗ ಎಲ್ಲಿದ್ದರು? ಇತಿಹಾಸ ತೆಗೆದು ನೋಡಲಿ. ಆದರೆ ವಾಜಪೇಯಿ ಸೇರಿದಂತೆ ಹಿಂದಿನ ಯಾವ ಪ್ರಧಾನಿಯೂ ಈ ವಿಷಯಗಳನ್ನು ಚುನಾವಣೆಗೆ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದರು.

ಚನ್ನಗಿರಿ ತಾಲೂಕಿನ ತ್ಯಾವಣಗಿಯಲ್ಲಿ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಮತ ಯಾಚಿಸಿ ಮಾತನಾಡಿದರು, ''ಯಾವ ಪ್ರಧಾನಮಂತ್ರಿಯೂ ಈವರೆಗೂ ಈ ವಿಷಯವನ್ನು ಚುನಾವಣೆಗೆ ಬಳಸಿರಲಿಲ್ಲ. ಆದರೆ ಈಗಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯಂಥ ನಾಚಿಕೆಗೆಟ್ಟ ಮನುಷ್ಯ ಯಾರೂ ಇಲ್ಲ. ಜೀವದ ಹಂಗು ತೊರೆದು ಹೋರಾಡುವ ಸೈನಿಕರಿಗೆ ಒಂದು ಸೆಲ್ಯೂಟ್‌ ಹೊಡೆಯುವುದನ್ನು ಬಿಟ್ಟು ತಾವ್‌ ಸ್ಟನ್‌ಗನ್‌ ತೆಗೆದುಕೊಂಡು ಯುದ್ಧ ಮಾಡಿದವರಂತೆ ಮಾತನಾಡುತ್ತಾರೆ.'' ಎಂದು ಏಕವಚನದಲ್ಲಿ ಹರಿಹಾಯ್ದರು.

ಟಿಕೆಟ್‌ ಕೊಡಿಸದ ಈಶ್ವರಪ್ಪ ಯಾವ ಲೀಡರ್‌: ರಾಜ್ಯದ 27 ಕ್ಷೇತ್ರದಲ್ಲಿ ಬಿಜೆಪಿ ಹಿಂದುಳಿದ ಸಮುದಾಯದವರಿಗೆ ಒಂದು ಟಿಕೆಟ್‌ ಕೂಡ ನೀಡಿಲ್ಲ, ದೊಡ್ಡ ಲೀಡರ್‌ ಎಂದು ನಾಲಿಗೆ ಹರಿಬಿಡುವ ಈಶ್ವರಪ್ಪನಿಗೆ ಒಂದು ಟಿಕೆಟ್‌ ಕೊಡಿಸಲು ಆಗಿಲ್ಲ, ಇವರು ಯಾವ ಸೀಮೆ ಲೀಡರ್‌ ಎಂದು ಸಿದ್ದರಾಮಯ್ಯ ಜರಿದರು. ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳಿದ್ದು ಅವರಿಗೆ ಕೊಡಲೇಬೇಕಾದ ಅನಿವಾರ್ಯತೆಯಲ್ಲಿ ಕೊಟ್ಟಿದ್ದಾರೆ. ಆದರೆ ಮೈತ್ರಿ ಪಕ್ಷ ಎಂಟು ಮಂದಿ ಹಿಂದುಳಿದವರಿಗೆ ಟಿಕೆಟ್‌ ನೀಡಿದೆ. ಸ್ವಾಭಿಮಾನ, ಮಾನ ಮರಾರ‍ಯದೆ ಇರುವವರು ಬಿಜೆಪಿಯಲ್ಲಿ ಇರಬಾರದು, ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳು ಈ ಪಕ್ಷಕ್ಕೆ ಮತ ಹಾಕಬಾರದು ಎಂದರು.

ಮೇ 23ರ ಬಳಿಕ ಮೈತ್ರಿ ಅಲ್ಲ

ಮೋದಿ ಸರಕಾರ ಪತನ: ಸಿದ್ದು

ದಾವಣಗೆರೆ: ಮೇ 23ರ ಬಳಿಕ ಪತನವಾಗೋದು ರಾಜ್ಯ ಸರಕಾರ ಅಲ್ಲ. ಮೋದಿ ನೇತೃತ್ವದ ಕೇಂದ್ರ ಸರಕಾರ. ಅದನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ಇಲ್ಲಿನ ಎಂಬಿಎ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ''ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರ ಪತನವಾಗುತ್ತದೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಎರಡು ದಿನ ಮಾತ್ರ ಯಡಿಯೂರಪ್ಪ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದ್ರು. ಅಧಿಕಾರ ಹಿಡಿಯಲು ಏನೆಲ್ಲಾ ಮಾಡಿದ್ರೂ ವಿಫಲವಾಗಿದ್ದಾರೆ. ಮಾನ- ಮರ್ಯಾದೆ ಇಲ್ಲದೆ ಮಾತಾಡ್ತಿರೋ ಅವರಿಗೆ ಅಧಿಕಾರದ ಹುಚ್ಚಿದೆ,'' ಎಂದರು. ಇನ್ನು ಸಿಟಿ ರವಿ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, 'ಅವರು ಸಿಟಿ ರವಿ ಅಲ್ಲ, ಬೂಟಿ ರವಿ. ಅವನ ಬಗ್ಗೆ ನಾನು ಮಾತಾಡಲ್ಲ. ಇನ್ನು ಕೆ. ಎಸ್‌. ಈಶ್ವರಪ್ಪ, ಶೋಭಾ ಕರಂದ್ಲಾಜೆ ಬುದ್ಧಿ ಇಲ್ಲದೇ ಮಾತಾಡ್ತಾರೆ. ಇವರ ಹೇಳಿಕೆಗೂ ನಾನು ಸ್ಪಂದಿಸಲ್ಲ' ಎಂದರು.

ನಿಖಿಲ್‌ ಎಲ್ಲಿದಿಯಪ್ಪ ಸ್ಟೈಲ್‌: ನಿಖಿಲ್‌ ಎಲ್ಲಿದಿಯಪ್ಪ ಸ್ಟೈಲ್‌ನಲ್ಲೇ ಎಸ್‌.ಎಸ್‌. ಮಲ್ಲಿಕಾರ್ಜುನ್‌ರನ್ನು ಬಾರಪ್ಪ, ಎಲ್ಲಿ ನೀನು? ಪತ್ತೆನೇ ಇಲ್ವಲ್ಲಾ? ಎಂದು ಮಾಜಿ ಸಿಎಂ ತಮ್ಮ ಬಳಿ ಬರಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ