ಆ್ಯಪ್ನಗರ

ಪಾಕ್ ಒಂದು ಬುಲೆಟ್ ಹಾರಿಸಿದರೆ ನಾವು ಬಾಂಬ್ ಎಸೆಯುತ್ತೇವೆ: ಅಮಿತ್ ಶಾ

ಬಿಹಾರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಅವರು, ಭಯೋತ್ಪಾದನೆಯನ್ನು ಖಂಡಿಸುತ್ತ ಗಡಿ ಭದ್ರತೆ ಮೋದಿ ಸರಕಾರದ ಮೊದಲ ಆದ್ಯತೆ. ಪಾಕಿಸ್ತಾನ ಒಂದು ಗುಂಡು ಹಾರಿಸಿದರೆ, ನಾವು ಬಾಂಬ್ ಎಸೆಯುತ್ತೇವೆ. ಎಂದರು.

Times Now 29 Apr 2019, 7:55 am
ಹೊಸದಿಲ್ಲಿ: ಪಾಕಿಸ್ತಾನ ಒಂದು ಬುಲೆಟ್ ಹಾರಿಸಿದರೆ, ಅದಕ್ಕೆ ಪ್ರತಿಯಾಗಿ ಭಾರತ ಬಾಂಬ್ ಹಾಕುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
Vijaya Karnataka Web Amith Shah 2


ಬಿಹಾರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಅವರು, ಭಯೋತ್ಪಾದನೆಯನ್ನು ಖಂಡಿಸುತ್ತ ಗಡಿ ಭದ್ರತೆ ಮೋದಿ ಸರಕಾರದ ಮೊದಲ ಆದ್ಯತೆ. ಪಾಕಿಸ್ತಾನ ಒಂದು ಗುಂಡು ಹಾರಿಸಿದರೆ, ನಾವು ಬಾಂಬ್ ಎಸೆಯುತ್ತೇವೆ. ಎಂದರು.

ಹಿಂದಿನ ಯುಪಿವಿಎ ಸರಕಾರನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ರಾಷ್ಟ್ರೀಯ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿಲ್ಲ. ಹೀಗಾಗಿ ಶತ್ರುಗಳು ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಕಾರ್ಯರೂಪಕ್ಕೆ ತಂದರು. ಆದರೆ ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಕಿಡಿಕಾರಿದರು.

ಇಸ್ರೇಲ್ ಮತ್ತು ಯು.ಎಸ್.ನ ನಂತರ ಭಯೋತ್ಪಾದಕತೆ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಏಕೈಕ ರಾಷ್ಟ್ರ ಭಾರತ. ಕೇಸರಿ ಪಕ್ಷಕ್ಕೆ ಸದಾ ದೇಶವೇ ಮೊದಲು ಎಂದು ಶಾ ಹೇಳಿದ್ದಾರೆ.

ಪ್ರಧಾನಿಯವರನ್ನು ಹಾಡಿ ಹೊಗಳಿದ ಅವರು, ದೇಶದ ಜನರಿಗಾಗಿ ಮೋದಿ ಅವರು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದು, ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ ಎಂದಿದ್ದಾರೆ.

ದೇಶದ ಮೂಲೆ ಮೂಲೆಯಲ್ಲಿ ಜನರು ಪ್ರಧಾನಿ ಮೋದಿ ಹೆಸರನ್ನು ಜಪಿಸುತ್ತಿದ್ದಾರೆ. ಏನೂ ಕಾರಣವಿಲ್ಲದೆ ಜನರ ಬಾಯಲ್ಲಿ ಪ್ರಧಾನಿ ಹೆಸರು ಕೇಳಿ ಬರುತ್ತಿಲ್ಲ. ಅವರು ಪ್ರಾಮಾಣಿಕತೆ ಮತ್ತು ಉತ್ತಮ ಉದ್ದೇಶದೊಂದಿಗೆ ಬಡವರಿಗಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರವರನ್ನು ಮೆಚ್ಚುತ್ತಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಅವರು ಒಂದು ದಿನ ಕೂಡ ರಜೆಯನ್ನೇ ತೆಗೆದುಕೊಂಡಿಲ್ಲ. ದಿನಕ್ಕೆ 18 ತಾಸು ಕೆಲಸ ಮಾಡುವ ಪ್ರಧಾನಿ ದೇಶದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

ಬಿಹಾರದಲ್ಲಿ ಈಗಾಗಲೇ ಮೂರು ಹಂತದ ಚುನಾವಣೆಗಳು ಮುಗಿದಿದ್ದು ಏಪ್ರಿಲ್ 29, ಮೇ 6, 12 ಮತ್ತು 19ಕ್ಕೆ ಇನ್ನುಳಿದ ಹಂತಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ