ಆ್ಯಪ್ನಗರ

ದೇಶದ ಗೆಲುವು; ಮೋದಿ ಆಡಿದ ಮೊದಲ ಮಾತು

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬೃಹತ್ ಮುನ್ನಡೆಯತ್ತ ಸಾಗುತ್ತಿರುವಂತೆಯೇ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಇದು ದೇಶದ ಗೆಲುವು ಎಂದು ನುಡಿದಿದ್ದಾರೆ.

Vijaya Karnataka Web 23 May 2019, 3:19 pm
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಗೆಲುವಿನತ್ತ ಮುನ್ನಡೆದಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ಪ್ರಧಾನ ಮಂತ್ರಿಯಾಗುವುದು ಬಹುತೇಕ ನಿಚ್ಚಳವೆನಿಸಿದೆ.
Vijaya Karnataka Web narendra-modi


2014ನೇ ಸಾಲಿಗೆ ಹೋಲಿಸಿದಾಗ ಎನ್‌ಡಿಎ 350ರ ಅಸುಪಾಸಿನಲ್ಲಿ ಸೀಟು ಗೆಲ್ಲುವುದು ಖಚಿತವೆನಿಸಿದೆ. ಈ ಮೂಲಕ ನರೇಂದ್ರ ಮೋದಿ ಸರಕಾರ ಸ್ಪಷ್ಟ ಬಹುಮತ್ತ ಮುನ್ನಡೆದಿದೆ.

ಈ ನಡುವೆ ಐತಿಹಾಸಿಕ ಗೆಲುವಿನ ಬಳಿಕ ಟ್ವಿಟರ್‌ನಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ದೇಶ ಮಗದೊಂದು ಬಾರಿ ಗೆಲುವು ದಾಖಲಿಸಿದೆ ಎಂದಿದ್ದಾರೆ.

ತಮ್ಮ ಎಂದಿನ ಶೈಲಿಯಲ್ಲಿ ಟ್ವೀಟ್ ಮಾಡಿರುವ ಮೋದಿ, ನಾವೆಲ್ಲರೂ ಜತೆಯಾಗಿ ಏಳಿಗೆಯನ್ನು ಕಾಣಲಿದ್ದೇವೆ. ಈ ಮೂಲಕ ಸುಭದ್ರ ಭಾರತವನ್ನು ನಿರ್ಮಾಣ ಮಾಡಲಿದ್ದೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

ಹಿಂದಿ ಹಾಗೂ ಆಂಗ್ಲ ಭಾಷೆಯ ಮಿಶ್ರಣದಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ. ಎಲ್ಲರ ಜತೆ, ಎಲ್ಲರ ವಿಕಾಸ, ಎಲ್ಲರ ನಂಬಿಕೆ ಸೇರಿಕೊಂಡು ವಿಜಯಿ ಭಾರತ ಪಥದತ್ತ ಮುನ್ನಡೆಯಲಿದ್ದೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ