ಆ್ಯಪ್ನಗರ

ಸ್ಪರ್ಧೆ ನಿರಾಕರಣೆ ಸಂದೇಹಗಳನ್ನು ಆಡ್ವಾಣಿಯವರೇ ಬಗೆಹರಿಸಬೇಕು

91ವರ್ಷದ ಮುತ್ಸದ್ದಿ ರಾಜಕಾರಣಿ ಬಗ್ಗೆ ಮುಕ್ತ ಕಂಠದ ಪ್ರಶಂಸೆ ವ್ಯಕ್ತಪಡಿಸಿದ ಸಚಿವೆ ಉಮಾಭಾರತಿ, ಪಕ್ಷವನ್ನು ಅಧಿಕಾರಕ್ಕೆ ತಂದಿರುವುದರ ಹಿಂದೆ ಅವರ ಅಗಾಧ ಪಾತ್ರ ಇದೆ ಎಂದು ಕೊಂಡಾಡಿದರು.

Vijaya Karnataka 25 Mar 2019, 5:00 am
ಹೊಸದಿಲ್ಲಿ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ತಮ್ಮ ಹೆಸರು ಕೈ ಬಿಟ್ಟಿರುವುದರಿಂದ ಹುಟ್ಟಿಕೊಂಡಿರುವ ಸಂದೇಹಗಳಿಗೆ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರೇ ಉತ್ತರ ನೀಡಬೇಕಿದೆ ಎಂದು ಕೇಂದ್ರ ಸಚಿವೆ ಉಮಾಭಾರತಿ ಅಭಿಪ್ರಾಯಪಟ್ಟಿದ್ದಾರೆ. ಇದೇವೇಳೆ, ಚುನಾವಣೆಗೆ ಸ್ಪರ್ಧಿಸಲೀ ಅಥವಾ ಸ್ಪರ್ಧಿಸದೇ ಇರಲಿ ಆಡ್ವಾಣಿ ಅವರ ಮೇರು ನಾಯಕನ ವರ್ಚಸ್ಸಿಗೆ ಯಾವುದೇ ಧಕ್ಕೆಯಿಲ್ಲ ಎಂದಿದ್ದಾರೆ.
Vijaya Karnataka Web uma


91ವರ್ಷದ ಮುತ್ಸದ್ದಿ ರಾಜಕಾರಣಿ ಬಗ್ಗೆ ಮುಕ್ತ ಕಂಠದ ಪ್ರಶಂಸೆ ವ್ಯಕ್ತಪಡಿಸಿದ ಸಚಿವೆ, ಪಕ್ಷವನ್ನು ಅಧಿಕಾರಕ್ಕೆ ತಂದಿರುವುದರ ಹಿಂದೆ ಅವರ ಅಗಾಧ ಪಾತ್ರ ಇದೆ. ನರೇಂದ್ರ ಮೋದಿ ಅಂಥವರು ಪ್ರಧಾನಿ ಆಗುವ ವಾತಾವರಣ ಸೃಷ್ಟಿಯಾಗಿದ್ದರ ಹಿಂದೆಯೂ ಆಡ್ವಾಣಿಯವರ ಕೊಡುಗೆ ಇತ್ತು ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅವರ ತಮ್ಮ ರಾಜಕೀಯ ಬದುಕಿನಲ್ಲಿ ಎಂದೂ ಅಧಿಕಾರಕ್ಕಾಗಿ ಹಪಾಹಪಿಸಲಿಲ್ಲ ಎಂದು ಕೊಂಡಾಡಿದರು.

''ಈಗ ಅಂತಹ ಮೇರು ನಾಯಕನ ರಾಜಕೀಯ ದಿಕ್ಕು ದೆಸೆಗಳ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆ. ಆ ಗೊಂದಲವನ್ನು ಅವರ ವಿನಾ ಬೇರೆ ಯಾರೂ ನಿವಾರಣೆ ಮಾಡಲು ಸಾಧ್ಯವಿಲ್ಲ,'' ಎಂದರು.

75 ವರ್ಷ ದಾಟಿದವರಿಗೆ ಪಕ್ಷ ನಿವೃತ್ತಿ ನೀಡುವ ನೀತಿಯನ್ನು ಅನುಸರಿಸುತ್ತಿದೆ. ಈ ಕಾರಣಕ್ಕಾಗಿಯೇ ಶಾಂತಕುಮಾರ್‌, ಬಿ.ಸಿ.ಖಂಡೂರಿ ಮತ್ತು ಕರಿಯಾ ಮುಂಡಾ ಅವರಂಥ ಹಿರಿಯರೂ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನುವ ವಾದಗಳ ಬಗ್ಗೆಯೂ ಉಮಾಭಾರತಿ ಪ್ರಸ್ತಾಪಿಸಿದರು. ''ಅಂತಹ ಯಾವುದೇ ಘೋಷಿತ ನೀತಿ ಇಲ್ಲ. ಹಲವು ಕಿರಿಯರಿಗೂ ಟಿಕೆಟ್‌ ನಿರಾಕರಿಸಲಾಗಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌