ಆ್ಯಪ್ನಗರ

ಕಾಂಗ್ರೆಸ್‌ಗೆ ಈಗ ಅಮಿತ್ ಶಾ ರಂತಹ ವ್ಯಕ್ತಿಯ ಅಗತ್ಯವಿದೆ: ಮೆಹಬೂಬಾ ಮುಫ್ತಿ ಟ್ವೀಟ್

ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಾಂಸ್ಥಿಕ ಪರಾಕ್ರಮಕ್ಕೆ ದೊಡ್ಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ದೇಶದ ಪ್ರಮುಖ ವಿರೋಧ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್‌ಗೂ ಸಹ ಅಮಿತ್ ಶಾರಂತಹ ವ್ಯಕ್ತಿಯ ಅಗತ್ಯವಿರುವ ಸಮಯ ಬಂದಿದೆ ಎಂದಿದ್ದಾರೆ.

Vijaya Karnataka Web 23 May 2019, 8:37 pm
ಹೊಸದಿಲ್ಲಿ: ದೇಶಾದ್ಯಂತ ಬಿಜೆಪಿ ಹಾಗೂ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಮುಖವಾಗಿ ಬಿಜೆಪಿಯ ಗೆಲುವನ್ನು ಹಲವು ವಿಪಕ್ಷಗಳು ಅಭಿನಂದನೆಗಳನ್ನು ಸಲ್ಲಿಸಿರುವುದಲ್ಲದೆ ತಮ್ಮ ಸೋಲನ್ನು ಒಪ್ಪಿಕೊಂಡಿದ್ದು, ಕೇಸರಿ ಪಕ್ಷವನ್ನು ಶ್ಲಾಘಿಸಿವೆ.
Vijaya Karnataka Web mehbooba mufti


ಇದೇ ರೀತಿ, ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಾಂಸ್ಥಿಕ ಪರಾಕ್ರಮಕ್ಕೆ ದೊಡ್ಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ದೇಶದ ಪ್ರಮುಖ ವಿರೋಧ ಪಕ್ಷ ಎನಿಸಿಕೊಂಡಿರುವ ಕಾಂಗ್ರೆಸ್‌ಗೂ ಸಹ ಅಮಿತ್ ಶಾ ರಂತಹ ವ್ಯಕ್ತಿಯ ಅಗತ್ಯವಿರುವ ಸಮಯ ಬಂದಿದೆ ಎಂದಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿದ ಮೆಹಬೂಬಾ ಮುಫ್ತಿ, 'ಕೈ' ಪಕ್ಷಕ್ಕೂ ಅಮಿತ್ ಶಾ ಅವರ ಚುನಾವಣಾ ಕೌಶಲ್ಯಗಳನ್ನು ಸರಿಹೊಂದಿಸುವಂತಹ ಚುನಾವಣಾ ಯೋಜಕ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ಗೆ ಈಗ ಅಗತ್ಯವಿದೆ ಎಂದು ಮೆಹಬೂಬಾ ಮುಫ್ತಿ ಟ್ವೀಟ್‌ ಮೂಲಕ ಸಲಹೆ ನೀಡಿದ್ದಾರೆ. ಲೋಕಸಭೆ ಚುನಾವಣೆ 2019ರಲ್ಲಿ ಕಳೆದ ಬಾರಿಯಂತೆ ಹೀನಾಯವಾಗಿ ಕಾಂಗ್ರೆಸ್ ಸೋಲನುಭವಿಸಿರುವ ಹಿನ್ನೆಲೆ ಮುಫ್ತಿ ಈ ರೀತಿ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

''ಐತಿಹಾಸಿಕ ವಿಜಯ ಸಾಧಿಸಿದ ನರೇಂದ್ರ ಮೋದಿ ಜೀ ಅವರಿಗೆ ಅಭಿನಂದನೆಗಳು. ಈ ದಿನ ಬಿಜೆಪಿ ಹಾಗೂ ಮಿತ್ರಪಕ್ಷಗಳಿಗೆ ಖಂಡಿತವಾಗಿ ಸೇರಿದೆ. ಕಾಂಗ್ರೆಸ್‌ಗೆ ಅಮಿತ್‌ ಶಾ ರಂತಹ ವ್ಯಕ್ತಿ ಬೇಕಾಗಿರುವ ಸಮಯ ಬಂದಿದೆ'' ಎಂದು ಸಹ ಕಣಿವೆ ರಾಜ್ಯದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

ಇನ್ನೊಂದೆಡೆ, ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಸಹ ಅಮಿತ್ ಶಾ ಹಾಗೂ ಮೋದಿ ನಾಯಕತ್ವವನ್ನು ಹೊಗಳಿದ್ದು, ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಇಬ್ಬರೂ ಸೇರಿ ಗೆಲ್ಲುವ ಮೈತ್ರಿಕೂಟ ಹಾಗೂ ವೃತ್ತಿಪರ ಪ್ರಚಾರವನ್ನು ನಡೆಸಿದ್ದರು ಎಂದು ಟ್ವೀಟ್‌ ಮಾಡಿದ್ದರು.

ಈ ಸುದ್ದಿಗಳನ್ನೂ ಓದಿ:
https://vijaykarnataka.indiatimes.com/elections/constituency-map/karnataka
Mandya, Hassan Tumkuru Result 2019: ಮಂಡ್ಯ, ಹಾಸನ, ತುಮಕೂರಿನ ತಾಜಾ ಸ್ಥಿತಿಗತಿ: ಇಲ್ಲಿ ನೋಡಿ.

Karnataka Results 2019: ಕರ್ನಾಟಕದ 28 ಕ್ಷೇತ್ರಗಳಲ್ಲಿ ಏನಾಗಿದೆ?: ಮುಖ್ಯಾಂಶಗಳು ಇಲ್ಲಿವೆ

undefinedLok Sabha Elections Result: ದೇಶಾದ್ಯಂತ ಹೇಗಿದೆ ಹವಾ?: ಮುಖ್ಯಾಂಶಗಳು ಇಲ್ಲಿವೆ

ಲೋಕಸಭೆ ಚುನಾವಣೆ ಫಲಿತಾಂಶ: ಎಲ್ಲೆಡೆ ಏನೇನಾಯ್ತು? ಇಲ್ಲಿ ನೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ