ಆ್ಯಪ್ನಗರ

Party History: ದಳದಿಂದ ವಿ.ಪಿ.ಸಿಂಗ್, ದೇವೇಗೌಡ, ಗುಜ್ರಾಲ್ ಪ್ರಧಾನಿಯಾದ್ರು

ಹರಿದು ಹಂಚಿ ಹೋಗಿದ್ದ ಜನತಾ ಪರಿವಾರವನ್ನು ಜನತಾ ದಳದ ಹೆಸರಲ್ಲಿ ಒಂದೂಗೂಡಿಸಿದ ಕೀರ್ತಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರಿಗೆ ಸಲ್ಲುತ್ತದೆ. ಲೋಕದಳ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌(ಜಗಜ್ಜೀವನ್‌), ಜನಮೋರ್ಚಾ ಹಾಗೂ ಇತರ ಪಕ್ಷ ಗಳನ್ನು ಒಗ್ಗೂಡಿಸಿ 1988ರ ಅಕ್ಟೋಬರ್‌ 11ರಂದು (ಜಯಪ್ರಕಾಶ್‌ ನಾರಾಯಣ ಜಯಂತಿ) ಜನತಾ ದಳವನ್ನು ಆರಂಭಿಸಲಾಯಿತು.

Vijaya Karnataka 26 Mar 2019, 11:03 pm
ಹರಿದು ಹಂಚಿ ಹೋಗಿದ್ದ ಜನತಾ ಪರಿವಾರವನ್ನು ಜನತಾ ದಳದ ಹೆಸರಲ್ಲಿ ಒಂದೂಗೂಡಿಸಿದ ಕೀರ್ತಿ ಮಾಜಿ ಪ್ರಧಾನಿ ವಿ.ಪಿ.ಸಿಂಗ್‌ ಅವರಿಗೆ ಸಲ್ಲುತ್ತದೆ. ಲೋಕದಳ, ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌(ಜಗಜ್ಜೀವನ್‌), ಜನಮೋರ್ಚಾ ಹಾಗೂ ಇತರ ಪಕ್ಷ ಗಳನ್ನು ಒಗ್ಗೂಡಿಸಿ 1988ರ ಅಕ್ಟೋಬರ್‌ 11ರಂದು (ಜಯಪ್ರಕಾಶ್‌ ನಾರಾಯಣ ಜಯಂತಿ) ಜನತಾ ದಳವನ್ನು ಆರಂಭಿಸಲಾಯಿತು. ರಾಜೀವ್‌ ಗಾಂಧಿ ಸಂಪುಟದಲ್ಲಿ ಹಣಕಾಸು ಹಾಗೂ ರಕ್ಷ ಣಾ ಖಾತೆ ನಿರ್ವಹಿಸಿದ್ದ ವಿ.ಪಿ.ಸಿಂಗ್‌ ನಂತರ ಅವರ ಕುಟು ಟೀಕಾಕಾರರಾಗಿ ಬದಲಾಗಿದ್ದು ರಾಜಕೀಯ ವೈಶಿಷ್ಟ್ಯ. ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಜನತಾ ದಳ ರಚಿಸಿದ್ದ ವಿ.ಪಿ.ಸಿಂಗ್‌ ನ್ಯಾಷನಲ್‌ ಫ್ರಂಟ್‌ ಹೆಸರಿನಲ್ಲಿ ಪ್ರಾದೇಶಿಕ ಪಕ್ಷ ಗಳಾದ ತೆಲುಗು ದೇಶಂ ಪಾರ್ಟಿ, ಡಿಎಂಕೆ, ಅಸ್ಸಾಮ್‌ ಗಣಪರಿಷತ್‌ ಮತ್ತಿತರ ಪಕ್ಷ ಗಳನ್ನು ಸೇರಿಸಿದರು. ಎಡಪಕ್ಷ ಗಳು ಮತ್ತು ಭಾರತೀಯ ಜನತಾ ಪಾರ್ಟಿ ಕೂಡ ಸಪೋರ್ಟ್‌ ಮಾಡಿದವು. 1989ರ ಸಾರ್ವತ್ರಿಕ ಚುನಾವಣೆಯಲ್ಲಿ ನ್ಯಾಷನಲ್‌ ಫ್ರಂಟ್‌ ಕಾಂಗ್ರೆಸ್‌ಗೆ ಸೋಲುಣಿಸಿತು. ವಿ.ಪಿ.ಸಿಂಗ್‌ ಪ್ರಧಾನಿಯಾದರೆ, ಚೌಧರಿ ದೇವಿ ಲಾಲ್‌ ಚೌಟಲಾ ಉಪ ಪ್ರಧಾನಿಯಾದರು. ಲಾಲು ಪ್ರಸಾದ್‌ ಯಾದವ್‌ ಅವರು 1990ರ ನವೆಂಬರ್‌ನಲ್ಲಿ ಆಡ್ವಾಣಿಯ ರಥಯಾತ್ರೆಯನ್ನು ತಡೆದರು. ಇದರ ಪರಿಣಾಮ ಜನತಾ ದಳ ನೇತೃತ್ವದ ಸರಕಾರ ಪತನವಾಯಿತು. ದಳದಲ್ಲೇ ಇದ್ದ ಚಂದ್ರಶೇಖರ್‌ ಅವರು ದಳದಿಂದ ಸಿಡಿದು ಕಾಂಗ್ರೆಸ್‌ ಬೆಂಬಲದೊಂದಿಗೆ ಆರೇಳು ತಿಂಗಳ ಕಾಲ ಪ್ರಧಾನಿಯಾದರು. ಬಳಿಕ ನಡೆದ 1991ರ ಚುನಾವಣೆಯಲ್ಲಿ ದಳ 69 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತು. ಮುಂದೆ 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಸಂಸತ್ತು ನಿರ್ಮಾಣವಾಯಿತು. ಬಿಜೆಪಿ ಸರಕಾರ ರಚಿಸಿತ್ತಾದರೂ ಬಹುಮತ ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಆಗ ಯುನೈಟೆಡ್‌ ಫ್ರಂಟ್‌ ಅಡಿಯಲ್ಲಿ ಜನತಾ ದಳವು ಕಾಂಗ್ರೆಸ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದು ಕರ್ನಾಟಕದ ಸಿಎಂ ಆಗಿದ್ದ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿಯಾದರು. ಸ್ವಲ್ಪ ದಿನದ ಬಳಿಕ ಕಾಂಗ್ರೆಸ್‌ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ದೇವೇಗೌಡರ ಸರಕಾರ ಪತನವಾಗಿ ದಳದ ಮತ್ತೊಬ್ಬ ನಾಯಕ ಐ.ಕೆ.ಗುಜ್ರಾಲರ ಸರಕಾರ ಅಸ್ತಿತ್ವಕ್ಕೆ ಬಂತು. ಆದರೆ, ಈ ಸರಕಾರ ಕೂಡ ಬಹಳ ದಿನಗಳವರೆಗೆ ಬಾಳಕೆ ಬರಲಿಲ್ಲ. ಅಂತಿವಾಗಿ 1998ರಲ್ಲಿ ಮತ್ತೆ ಚುನಾವಣೆ ನಡೆಯಿತು. ಈ ಹೊತ್ತಿಗೆ ದಳ ಅನೇಕ ವಿದಳಗಳಾಯಿತು. ಈ ಪೈಕಿ ಬಿಜು ಜನತಾದಳ, ರಾಷ್ಟ್ರೀಯ ಜನತಾದಳ, ಜೆಡಿಎಸ್‌, ಜೆಡಿಯು ಪ್ರಮುಖ ಪ್ರಾದೇಶಿಕ ಪಕ್ಷ ಗಳಾಗಿ ಹೊರಹೊಮ್ಮಿದವು. 1988ರಿಂದ 1999ವರೆಗೆ 30 ವರ್ಷಗಳ ಕಾಲ ಭಾರತೀಯ ರಾಜಕಾರಣದಲ್ಲಿ ದಳ ರಾಜಕಾರಣವಿತ್ತು. ಈಗಲೂ ದಳ ಸಿದ್ಧಾಂತವೇ ಇರುವ ಪಕ್ಷ ಗಳಲ್ಲಿ ಅಲ್ಲಲ್ಲಿ ಮಿನುಗುತ್ತಿವೆ.
Vijaya Karnataka Web JANATA DAL

- ತಿಪ್ಪಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ