ಆ್ಯಪ್ನಗರ

ಮೊದಲ ಭಯೋತ್ಪಾದಕ ಹಿಂದೂ ಎಂದ ಕಮಲ್‌ ನಾಲಗೆ ಕತ್ತರಿಸಬೇಕು: ತಮಿಳುನಾಡು ಸಚಿವ

ಉಗ್ರವಾದಕ್ಕೆ ಯಾವುದೇ ಧರ್ಮ ಲೇಪನ ಸರಿಯಲ್ಲ. ತೆರೆಯ ಮೇಲೆ ನಟಿಸುವ ಕಮಲ್‌ ರಾಜಕೀಯ ರಂಗದಲ್ಲಿಯೂ ನಾಟಕ ಆಡಲು ಪ್ರಯತ್ನಿಸುತ್ತಿದ್ದಾರೆ. ಅವರ ನಾಗಲೆ ಕಟ್‌ ಮಾಡಿದರೆ ಸರಿ ಹೋಗುತ್ತೆ ಎಂದು ಸಚಿವರು ತಿಳಿಸಿದರು.

Vijaya Karnataka Web 13 May 2019, 9:44 pm
ಚೆನ್ನೈ: ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ನಟ, ರಾಜಕಾರಣಿ ಕಮಲ್‌ ಹಾಸನ್‌ ನಾಲಗೆ ಕತ್ತರಿಸಬೇಕು ಎಂದು ತಮಿಳುನಾಡು ಸಚಿವ ಕೆಟಿ ರಾಜೇಂದ್ರ ಬಾಲಾಜಿ ಹೇಳಿದ್ದಾರೆ.
Vijaya Karnataka Web ಕಮಲ್‌ ಹಾಸನ್‌
ಕಮಲ್‌ ಹಾಸನ್‌


ಈ ರೀತಿಯ ಹೇಳಿಕೆಯನ್ನು ನೀಡಿರುವ ಕಮಲ್‌ ಹಾಸನ್‌ ಮಕ್ಕಳ್‌ ನೀದಿ ಮಯ್ಯ ಪಕ್ಷವನ್ನು ನಿಷೇಧಿಸಬೇಕು ಹಾಗೂ ಕಮಲ್‌ ಅವರಿಗೆ ಚುನಾವಣೆ ಪ್ರಚಾರ ಮಾಡದಂತೆ ನಿಷೇಧ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉಗ್ರವಾದಕ್ಕೆ ಯಾವುದೇ ಧರ್ಮ ಲೇಪನ ಸರಿಯಲ್ಲ. ತೆರೆಯ ಮೇಲೆ ನಟಿಸುವ ಕಮಲ್‌ ರಾಜಕೀಯ ರಂಗದಲ್ಲಿಯೂ ನಾಟಕ ಆಡಲು ಪ್ರಯತ್ನಿಸುತ್ತಿದ್ದಾರೆ. ಅವರ ನಾಗಲೆ ಕಟ್‌ ಮಾಡಿದರೆ ಸರಿ ಹೋಗುತ್ತೆ ಎಂದು ಸಚಿವರು ತಿಳಿಸಿದರು.

ಅಲ್ಪಸಂಖ್ಯತ ಮತ ಸೆಳೆಯಲು ಈ ರೀತಿ ಡೈಲಾಗ್‌ ಹೊಡೆಯುತ್ತಿದ್ದಾರೆ ಎಂದು ಸಚಿವ ರಾಜೇಂದ್ರ ಬಾಲಾಜಿ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ