ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ಗೌಪ್ಯದ ಹೆಸರಿನಲ್ಲಿ ಹರಿದುಬರುತ್ತಿರುವ ದೇಣಿಗೆ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಅಭ್ಯರ್ಥಿಗಳು ಚುನಾವಣಾ ಖರ್ಚು-ವೆಚ್ಚಕ್ಕೆ ಪಾರದರ್ಶಕ 'ಕ್ರೌಡ್ ಫೌಂಡಿಂಗ್' (ಜನರಿಂದಲೇ ಹಣ ಸಂಗ್ರಹ) ವ್ಯವಸ್ಥೆಯ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ.
ಕೆಲವು ದಿನಗಳ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ಬಾಂಡುಗಳ (ಎಲೆಕ್ಟೊರಲ್ ಬಾಂಡ್) ಮೂಲಕ ಪಡೆದಿರುವ ದೇಣಿಗೆ ಹಣದ ಮೊತ್ತ ಹಾಗೂ ದೇಣೆಗೆದಾರರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಮೇ 30ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಒಂದು ಅಂದಾಜಿನ ಪ್ರಕಾರ 78 ಅಭ್ಯರ್ಥಿಗಳು 'ಕ್ರೌಡ್ ಫಂಡಿಂಗ್' ಮೂಲಕ ಪ್ರಚಾರಕ್ಕೆ ಹಣ ಕ್ರೋಢೀಕರಿಸಿರುವುದು ಕಂಡುಬಂದಿದೆ.ಘ್ಕಿ O್ಠ್ಟಈಛಿಞಟ್ಚ್ಟa್ಚy.ಜ್ಞಿ ವೆಬ್ಸೈಟ್ ಪ್ರಕಾರ ಏ.23ರ ಅಂತ್ಯಕ್ಕೆ ಈ 78 ಅಭ್ಯರ್ಥಿಗಳು ಕ್ರೌಡ್ ಫಂಡಿಂಗ್ ಮೂಲಕ 1.6 ಕೋಟಿ ಸಂಗ್ರಹಿಸಿರುವುದು ವರದಿಯಾಗಿದೆ. ದೇಣಿಗೆದಾರರ ಸಂಖ್ಯೆ 9 ಸಾವಿರದ ಗಡಿಗೆ ಬಂದು ನಿಂತಿದೆ. ಹೀಗೆ ಜನರಿಂದಲೇ ಹಣ ಸಂಗ್ರಹಿಸಿ 51 ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಮತ್ತು 27 ಅಭ್ಯರ್ಥಿಗಳು ಸ್ವತಂತ್ರವಾಗಿ ಕಣಕ್ಕೆ ಇಳಿದಿರುವುದು ವಿಶೇಷ.
ಕ್ರೌಡ್ ಫಂಡಿಂಗ್ ಮೂಲಕ ಭಾರಿ ಮೊತ್ತದ ದೇಣಿಗೆ ಸ್ವೀಕರಿಸಿದವರಲ್ಲಿ ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಪಿಐನ ಕನ್ಹಯ್ಯ ಕುಮಾರ್ ಮೊದಲಿಗರು. ದೇಶದ್ರೋಹ ಪ್ರಕರಣ ಎದುರಿಸಿದ ಬಿಜೆಪಿಯ ಕಟ್ಟಾ ವಿರೋಧಿ ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿಯಾಗಿರುವ ಕನ್ಹಯ್ಯ ಖಾತೆಗೆ ಇದಾಗಲೇ ಪ್ರಚಾರದ ಖರ್ಚಿಗೆ ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ್ದ ಗರಿಷ್ಠ 70 ಲಕ್ಷ ರೂ.ಗಿಂತಲೂ ಅಧಿಕ ಮೊತ್ತ ಹರಿದುಬಂದಿದೆ. ಪೂರ್ವ ದಿಲ್ಲಿಯಿಂದ ಆಪ್ನಿಂದ ಸ್ಪರ್ಧಿಸುತ್ತಿರುವ ಅತಿಶಿ ಅವರು 59.31 ಲಕ್ಷ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಆಪ್ ಅಭ್ಯರ್ಥಿ ದಿಲೀಪ್ ಕೆ.ಪಾಂಡೆ ಅವರು 6.16 ಲಕ್ಷ ರೂ. ಸಂಗ್ರಹಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ನ ನಾನಾ ಪಾಟೋಲೆ 81,75 ರೂ. ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸುದ್ದಿಯಾಗಿದ್ದ ಬಿಎಸ್ಎಫ್ ಮಾಜಿ ಜವಾನ ತೇಜ್ ಬಹದ್ದೂರ್ ಯಾದವ್ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದು, ಇವರಿಗೆ ಇದುವರೆಗೆ ಕೇವಲ 16,751 ರೂ. ಸಂಗ್ರಹಿಸಲಷ್ಟೇ ಸಾಧ್ಯವಾಗಿದೆ.
ಸ್ವತಂತ್ರ ಅಭ್ಯರ್ಥಿಗಳಿಲ್ಲ ಮನ್ನಣೆ: ಕ್ರೌಡ್ ಫಂಡಿಂಗ್ ಮೊರೆ ಹೋದ 27 ಸ್ವತಂತ್ರ ಅಭ್ಯರ್ಥಿಗಳಿಗೆ ಇದುವರೆಗೂ 4.65 ಲಕ್ಷ ರೂ. ದೇಣಿಗೆ ಬಂದಿದೆ. ಆದರೆ ವಿವಿಧ ಪಕ್ಷಗಳಿಂದ ಕಣಕ್ಕೆ ಇಳಿದಿರುವ 51 ಅಭ್ಯರ್ಥಿಗಳಿಗೆ 1.59 ಕೋಟಿ ರೂ. ದೇಣಿಗೆ ಹರಿದುಬಂದಿದೆ.
ಕೆಲವು ದಿನಗಳ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ಬಾಂಡುಗಳ (ಎಲೆಕ್ಟೊರಲ್ ಬಾಂಡ್) ಮೂಲಕ ಪಡೆದಿರುವ ದೇಣಿಗೆ ಹಣದ ಮೊತ್ತ ಹಾಗೂ ದೇಣೆಗೆದಾರರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗಕ್ಕೆ ಮೇ 30ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಒಂದು ಅಂದಾಜಿನ ಪ್ರಕಾರ 78 ಅಭ್ಯರ್ಥಿಗಳು 'ಕ್ರೌಡ್ ಫಂಡಿಂಗ್' ಮೂಲಕ ಪ್ರಚಾರಕ್ಕೆ ಹಣ ಕ್ರೋಢೀಕರಿಸಿರುವುದು ಕಂಡುಬಂದಿದೆ.ಘ್ಕಿ O್ಠ್ಟಈಛಿಞಟ್ಚ್ಟa್ಚy.ಜ್ಞಿ ವೆಬ್ಸೈಟ್ ಪ್ರಕಾರ ಏ.23ರ ಅಂತ್ಯಕ್ಕೆ ಈ 78 ಅಭ್ಯರ್ಥಿಗಳು ಕ್ರೌಡ್ ಫಂಡಿಂಗ್ ಮೂಲಕ 1.6 ಕೋಟಿ ಸಂಗ್ರಹಿಸಿರುವುದು ವರದಿಯಾಗಿದೆ. ದೇಣಿಗೆದಾರರ ಸಂಖ್ಯೆ 9 ಸಾವಿರದ ಗಡಿಗೆ ಬಂದು ನಿಂತಿದೆ. ಹೀಗೆ ಜನರಿಂದಲೇ ಹಣ ಸಂಗ್ರಹಿಸಿ 51 ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಮತ್ತು 27 ಅಭ್ಯರ್ಥಿಗಳು ಸ್ವತಂತ್ರವಾಗಿ ಕಣಕ್ಕೆ ಇಳಿದಿರುವುದು ವಿಶೇಷ.
ಕ್ರೌಡ್ ಫಂಡಿಂಗ್ ಮೂಲಕ ಭಾರಿ ಮೊತ್ತದ ದೇಣಿಗೆ ಸ್ವೀಕರಿಸಿದವರಲ್ಲಿ ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿಪಿಐನ ಕನ್ಹಯ್ಯ ಕುಮಾರ್ ಮೊದಲಿಗರು. ದೇಶದ್ರೋಹ ಪ್ರಕರಣ ಎದುರಿಸಿದ ಬಿಜೆಪಿಯ ಕಟ್ಟಾ ವಿರೋಧಿ ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿಯಾಗಿರುವ ಕನ್ಹಯ್ಯ ಖಾತೆಗೆ ಇದಾಗಲೇ ಪ್ರಚಾರದ ಖರ್ಚಿಗೆ ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿದ್ದ ಗರಿಷ್ಠ 70 ಲಕ್ಷ ರೂ.ಗಿಂತಲೂ ಅಧಿಕ ಮೊತ್ತ ಹರಿದುಬಂದಿದೆ. ಪೂರ್ವ ದಿಲ್ಲಿಯಿಂದ ಆಪ್ನಿಂದ ಸ್ಪರ್ಧಿಸುತ್ತಿರುವ ಅತಿಶಿ ಅವರು 59.31 ಲಕ್ಷ ರೂ. ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೊಬ್ಬ ಆಪ್ ಅಭ್ಯರ್ಥಿ ದಿಲೀಪ್ ಕೆ.ಪಾಂಡೆ ಅವರು 6.16 ಲಕ್ಷ ರೂ. ಸಂಗ್ರಹಿಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ನ ನಾನಾ ಪಾಟೋಲೆ 81,75 ರೂ. ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನು ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸುದ್ದಿಯಾಗಿದ್ದ ಬಿಎಸ್ಎಫ್ ಮಾಜಿ ಜವಾನ ತೇಜ್ ಬಹದ್ದೂರ್ ಯಾದವ್ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದು, ಇವರಿಗೆ ಇದುವರೆಗೆ ಕೇವಲ 16,751 ರೂ. ಸಂಗ್ರಹಿಸಲಷ್ಟೇ ಸಾಧ್ಯವಾಗಿದೆ.
ಸ್ವತಂತ್ರ ಅಭ್ಯರ್ಥಿಗಳಿಲ್ಲ ಮನ್ನಣೆ: ಕ್ರೌಡ್ ಫಂಡಿಂಗ್ ಮೊರೆ ಹೋದ 27 ಸ್ವತಂತ್ರ ಅಭ್ಯರ್ಥಿಗಳಿಗೆ ಇದುವರೆಗೂ 4.65 ಲಕ್ಷ ರೂ. ದೇಣಿಗೆ ಬಂದಿದೆ. ಆದರೆ ವಿವಿಧ ಪಕ್ಷಗಳಿಂದ ಕಣಕ್ಕೆ ಇಳಿದಿರುವ 51 ಅಭ್ಯರ್ಥಿಗಳಿಗೆ 1.59 ಕೋಟಿ ರೂ. ದೇಣಿಗೆ ಹರಿದುಬಂದಿದೆ.