ಆ್ಯಪ್ನಗರ

ದುರ್ಬಲ ನಾಯಕರಿಗೆ ಪ್ರಧಾನಿ ಕನಸು

ಬಿಜೆಪಿ ಮಣಿಸಲು ಅನುಕೂಲ ಸಿಂಧು ಹೊಂದಾಣಿಕೆ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮಹಾಮೈತ್ರಿ ಕೂಟದ ಎಕ್ಸ್‌ಪೈರಿ ಡೇಟ್‌ ಹತ್ತಿರ ಬಂದಿದೆ. ಮೇ 23ರ ನಂತರ ಈ ಕೂಟದ ನಾಯಕರು ಪರಸ್ಪರ ಕತ್ತುಪಟ್ಟಿ ಹಿಡಿದು ಕಿತ್ತಾಡಲಿದ್ದಾರೆ ಎಂದು ಮೋದಿ ಭವಿಷ್ಯ ನುಡಿದರು.

Vijaya Karnataka 1 May 2019, 5:00 am
ಲಖನೌ: ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಗಿಟ್ಟಿಸಲೂ ಯೋಗ್ಯತೆ ಇಲ್ಲದ ಎದುರಾಳಿ ಪಕ್ಷಗಳು ಈಗ ಪ್ರಧಾನಿ ಪಟ್ಟಕ್ಕೇರುವ ಕನಸಿನಲ್ಲಿ ಕೋಟು ಹೊಲಿಸುವ ಗಡಿಬಿಡಿ ಶುರು ಮಾಡಿರುವುದು ವಿಪರ್ಯಾಸ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
Vijaya Karnataka Web modi


ದಿಲ್ಲಿ ಗದ್ದುಗೆ ಏರಲು ನಿರ್ಣಾಯಕ ರಾಜ್ಯ ಎನಿಸಿರುವ ಉತ್ತರ ಪ್ರದೇಶದಲ್ಲಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ, ''ಈಗ ನಾಲ್ಕು ಹಂತಗಳ ಮತದಾನ ಮುಗಿದಿದ್ದು ಇದರಲ್ಲಿ 50-55 ಸೀಟು ಕೂಡ ಪ್ರತಿಪಕ್ಷಗಳಿಗೆ ದಕ್ಕುವುದಿಲ್ಲ. ಆದರೂ ಅವರಿಗೆ ಪ್ರಧಾನಿ ಪಟ್ಟದ ಕನಸು. ಅದಕ್ಕಾಗಿ ಕೋಟು ಹೊಲಿಸುವ ಗಡಿಬಿಡಿ ಶುರುವಾಗಿದೆ. ಹೇಗಾದರೂ ಮಾಡಿ 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನವರಿಕೆ ಅವರಲ್ಲಿದೆ. ಸರದಿಯಲ್ಲಿ ಪ್ರಧಾನಿ ಪಟ್ಟ ಬದಲಾಯಿಸಿಕೊಳ್ಳುವುದು ಅವರ ಹುನ್ನಾರ. ಇದಕ್ಕೆಲ್ಲ ನೀವು ಅವಕಾಶ ನೀಡುತ್ತೀರಾ?,'' ಎಂದು ಜನರನ್ನು ಪ್ರಶ್ನಿಸಿದರು.

ಬಿಜೆಪಿ ಮಣಿಸಲು ಅನುಕೂಲ ಸಿಂಧು ಹೊಂದಾಣಿಕೆ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮಹಾಮೈತ್ರಿ ಕೂಟದ ಎಕ್ಸ್‌ಪೈರಿ ಡೇಟ್‌ ಹತ್ತಿರ ಬಂದಿದೆ. ಮೇ 23ರ ನಂತರ ಈ ಕೂಟದ ನಾಯಕರು ಪರಸ್ಪರ ಕತ್ತುಪಟ್ಟಿ ಹಿಡಿದು ಕಿತ್ತಾಡಲಿದ್ದಾರೆ ಎಂದು ಭವಿಷ್ಯ ನುಡಿದರು.

ಸೋಲಿನ ಅಂತರವಷ್ಟೇ ಬಾಕಿ:

ಬಿಹಾರದ ಮುಜಫ್ಫರ್‌ಪುರ ರಾರ‍ಯಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ''ಈಗ ಮುಗಿದಿರುವ ನಾಲ್ಕು ಹಂತಗಳ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿಯಾಗಿದೆ. ಉಳಿದ ಮೂರು ಹಂತಗಳು ಪ್ರತಿಗಳ ಸೋಲಿನ ಅಂತರವನ್ನು ನಿರ್ಧರಿಸಲಿವೆ,'' ಎಂದರು. ಕಂಬಿ ಎಣಿಸುತ್ತಿರುವ ದುರ್ಬಲ ನಾಯಕರಿಂದ ದಿಲ್ಲಿಯಲ್ಲಿ ಸುಭದ್ರ ಸರಕಾರ ನೀಡಲು ಸಾಧ್ಯವೇ ಇಲ್ಲ ಎಂದು ಲಾಲು ಪ್ರಸಾದ್‌ ಯಾದವ್‌ ಅವರನ್ನು ಗುರಿಯಾಗಿಟ್ಟುಕೊಂಡು ಪರೋಕ್ಷ ಪ್ರಹಾರ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌