ಆ್ಯಪ್ನಗರ

ಸಾಧ್ವಿ ಪ್ರಜ್ಞಾ ಸಿಂಗ್ ನಾಮಪತ್ರ ಸಲ್ಲಿಕೆ

'ತಿಹಾರ್‌ ಜೈಲಿನಲ್ಲಿರುವ ಯಾಸಿನ್ ಮಲಿಕ್ ಆರೋಗ್ಯ ಹದಗೆಡುತ್ತಿದೆ. ಆ ಬಗ್ಗೆ ಆತನ ಕುಟುಂಬದವರು ಆತಂಕಿತರಾಗಿದ್ದಾರೆ. ಬಿಜೆಪಿಯ ಕೋಮುವಾದಿ ಅಜೆಂಡಾಗೆ ತುಪ್ಪ ಸುರಿಯುವ ಸಾಧ್ವಿಯಂತಹ ಧರ್ಮಾಂಧರಿಗೆ ಸರಕಾರ ಜಾಮೀನು ನೀಡಿ ಬಿಡುಗಡೆ ಮಾಡುತ್ತಿದೆ. ಆದರೆ ಯಾಸಿನ್ ಮಲಿಕ್‌ರನ್ನು ಜೈಲಿಗೆ ತಳ್ಳಿದೆ' ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

Vijaya Karnataka Web 22 Apr 2019, 3:02 pm
ಹೊಸದಿಲ್ಲಿ: ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೋಮವಾರ ನಾಮಪತ್ರ ಸಲ್ಲಿಸಿದರು.
Vijaya Karnataka Web Sadhvi Pragya


ಇದೇ ವೇಳೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜೈಲಿನಲ್ಲಿರುವ ಪ್ರತ್ಯೇಕತಾವಾದಿ ಜೆಕೆಎಲ್‌ಎಫ್‌ ನಾಯಕ ಯಾಸಿನ್ ಮಲಿಕ್ ಪರ ವಕಾಲತು ವಹಿಸಿ ಟ್ವೀಟ್ ಮಾಡಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಮಲಿಕ್‌ಗೆ ಹೋಲಿಸಿದ್ದಾರೆ.

'ತಿಹಾರ್‌ ಜೈಲಿನಲ್ಲಿರುವ ಯಾಸಿನ್ ಮಲಿಕ್ ಆರೋಗ್ಯ ಹದಗೆಡುತ್ತಿದೆ. ಆ ಬಗ್ಗೆ ಆತನ ಕುಟುಂಬದವರು ಆತಂಕಿತರಾಗಿದ್ದಾರೆ. ಬಿಜೆಪಿಯ ಕೋಮುವಾದಿ ಅಜೆಂಡಾಗೆ ತುಪ್ಪ ಸುರಿಯುವ ಸಾಧ್ವಿಯಂತಹ ಧರ್ಮಾಂಧರಿಗೆ ಸರಕಾರ ಜಾಮೀನು ನೀಡಿ ಬಿಡುಗಡೆ ಮಾಡುತ್ತಿದೆ. ಆದರೆ ಯಾಸಿನ್ ಮಲಿಕ್‌ರನ್ನು ಜೈಲಿಗೆ ತಳ್ಳಿದೆ' ಎಂದು ಮೆಹಬೂಬಾ ಟ್ವೀಟ್ ಮಾಡಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್‌ ತಮ್ಮನ್ನು ಜೈಲಿಗೆ ತಳ್ಳಿದ್ದ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ 26/11ರ ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದು ತಮ್ಮ ಶಾಪದಿಂದಾಗಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದನ್ನು ನೆನಪಿಸಿಕೊಳ್ಳಬಹುದು. 'ನಿನ್ನ ಅಂತ್ಯ ಶೀಘ್ರವೇ ಬರಲಿದೆ ಎಂದು ನಾನು ಹೇಳಿದ್ದೆ. ಹಾಗೆಯೇ ಎರಡು ತಿಂಗಳೊಳಗೆ ಭಯೋತ್ಪಾದಕರಿಂದ ಆತ ಹತನಾದ' ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿದ್ದರು. ಬಳಿಕ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌