ಆ್ಯಪ್ನಗರ

ಸಾರ್ವಜನಿಕ ಸಭೆಯಲ್ಲಿಯೇ ಹಾರ್ದಿಕ್‌ಗೆ ಕಪಾಳಮೋಕ್ಷ

ಹಾರ್ದಿಕ್‌ ಕೆನ್ನೆಗೆ ಬಾರಿಸಿದ ವ್ಯಕ್ತಿಯನ್ನು ತರುಣ್‌ ಗಜ್ಜರ್‌ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ತರುಣ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಾರ್ದಿಕ್‌ ಪಟೇಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Vijaya Karnataka 20 Apr 2019, 5:00 am
ಸುರೇಂದ್ರನಗರ (ಗುಜರಾತ್‌): ಪಾಟೀದಾರ್‌ ಮೀಸಲು ಹೋರಾಟದ ಮೂಲಕ ಸದ್ದು ಮಾಡಿ ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೇರಿದ ಯುವ ನಾಯಕ ಹಾರ್ದಿಕ್‌ ಪಟೇಲ್‌ ಅವರಿಗೆ ಸಾರ್ವಜನಿಕ ಸಭೆಯಲ್ಲಿಯೇ ವ್ಯಕ್ತಿಯೊಬ್ಬ ಕಪಾಳ ಮೋಕ್ಷ ಮಾಡಿದ್ದಾರೆ.
Vijaya Karnataka Web hardik


ಹಾರ್ದಿಕ್‌ ಕೆನ್ನೆಗೆ ಬಾರಿಸಿದ ವ್ಯಕ್ತಿಯನ್ನು ತರುಣ್‌ ಗಜ್ಜರ್‌ ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ತರುಣ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹಾರ್ದಿಕ್‌ ಪಟೇಲ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಗುಜರಾತಿನ ಸೌರಾಷ್ಟ್ರ ವಲಯದ ಸುರೇಂದ್ರನಗರದಲ್ಲಿ ಕಾಂಗ್ರೆಸ್‌ ಶುಕ್ರವಾರ ಆಯೋಜಿಸಿದ್ದ ಜನಾಕ್ರೋಶ ರಾರ‍ಯಲಿಯಲ್ಲಿ ಹಾರ್ದಿಕ್‌ ಭರ್ಜರಿ ಭಾಷಣ ಮಾಡುತ್ತಿದ್ದರು. ''ಮೀಸಲು ಸೌಲಭ್ಯಕ್ಕಾಗಿ ಆಗ ನನ್ನ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಗೆ ನೀವೆಲ್ಲಾ ಬೆಂಬಲ ನೀಡಿದ್ದೀರಿ. ಈಗ ಚುನಾವಣೆ ನಡೆಯುತ್ತಿದೆ. ಈಗಲೂ ನೀವು ಅದೇ ರೀತಿಯ ಬೆಂಬಲ ಸೂಚಿಸುವ ವಿಶ್ವಾಸ ನನಗಿದೆ,'' ಎಂದು ಹೇಳಿದರು. ಈ ಮಾತುಗಳಿಂದ ಕುಪಿತಗೊಂಡ ತರುಣ್‌ ಗಜ್ಜರ್‌ ದಿಢೀರನೇ ವೇದಿಕೆಗೆ ಬಂದು ಹಾರ್ದಿಕ್‌ ಕಪಾಳಕ್ಕೆ ಬಾರಿಸಿದರು. ''ನಿನ್ನಿಂದಲೇ 14 ಜನ ಸತ್ತರು. ರಾಜ್ಯವನ್ನು ಬೇಕೆಂದಾಗ ಬಂದ್‌ ಮಾಡಿಸುತ್ತಿದ್ದ ನೀನೊಬ್ಬ ಹಿಟ್ಲರ್‌,'' ಎಂದು ಬೈಗುಳದ ಮಳೆಯನ್ನೂ ಸುರಿಸಿದ್ದಾರೆ.

''ಪಾಟೀದಾರ್‌ ಮೀಸಲು ಆಂದೋಲನದ ವೇಳೆ ಗುಜರಾತ್‌ ಸ್ತಬ್ಧಗೊಂಡಿತ್ತು. ಒಂದು ದಿನ ನನ್ನ ಗರ್ಭಿಣಿ ಪತ್ನಿಗೆ, ಅಸ್ವಸ್ಥ ಮಗುವಿಗೆ ಚಿಕಿತ್ಸೆ ಕೊಡಿಸಲು, ಅಗತ್ಯ ಔಷಧಿ ತರಲು ವಿಪರೀತ ಪರದಾಡಿದ್ದೆ. ಅಂದೇ ನಾನು ಈ ಮನುಷ್ಯನಿಗೆ ನಾಲ್ಕು ಬಾರಿಸಿ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದೆ. ಅದನ್ನೀಗ ಮಾಡಿದ್ದೇನೆ. ಪೊಲೀಸ್‌ ದೂರಿನ ಬಗ್ಗೆ ಅಳುಕಿಲ್ಲ. '' ಎಂದು ತರುಣ್‌ ಹೇಳಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ಘಟನೆ. ನನ್ನ ಕಪಾಳಕ್ಕೆ ಬಾರಿಸಿದ ವ್ಯಕ್ತಿ ಬಿಜೆಪಿಗೆ ಸೇರಿದವರು. ಇಂತಹ ಬೆದರಿಕೆಗಳಿಗೆ ಬಗ್ಗುವ ಜಾಯಮಾನ ನನ್ನದಲ್ಲ.

- ಹಾರ್ದಿಕ್‌ ಪಟೇಲ್‌, ಕಾಂಗ್ರೆಸ್‌ ಯುವ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌