ಆ್ಯಪ್ನಗರ

ಸ್ಪರ್ಧೆ ಆಯ್ಕೆ ಪ್ರಿಯಾಂಕಾ ಕೈಯ್ಯಲ್ಲೇ ಇದೆ: ರಾಹುಲ್ ಗಾಂಧಿ

ಚುನಾವಣೆಗೆ ಸ್ಪರ್ಧಿಸಬೇಕೆ ಬೇಡವೆ ಎಂಬುದನ್ನು ನಿರ್ಧರಿಸುವ ಆಯ್ಕೆ ಪ್ರಿಯಾಂಕಾ ಅವರಲ್ಲೇ ಇದೆ ಎಂದು ರಾಹುಲ್ ನುಡಿದರು. ಅದೇ ವೇಳೆಗೆ, ತಾವು ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆ ಎಂಬುದನ್ನು ಪಕ್ಷ ಶೀಘ್ರವೇ ನಿರ್ಧರಿಸಲಿದೆ ಎಂದೂ ರಾಹುಲ್ ಹೇಳಿದರು.

Vijaya Karnataka Web 29 Mar 2019, 8:20 pm
ಅಯೋಧ್ಯಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಬೇಕೆ ಬೇಡವೆ ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ ಕೆಲವೇ ದಿನಗಳ ಬಳಿಕ, ಆ ಆಯ್ಕೆ ಪ್ರಿಯಾಂಕಾ ಕೈಯಲ್ಲೇ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
Vijaya Karnataka Web Rahul Gandhi


ಚುನಾವಣೆಗೆ ಸ್ಪರ್ಧಿಸಬೇಕೆ ಬೇಡವೆ ಎಂಬುದನ್ನು ನಿರ್ಧರಿಸುವ ಆಯ್ಕೆ ಪ್ರಿಯಾಂಕಾ ಅವರಲ್ಲೇ ಇದೆ ಎಂದು ರಾಹುಲ್ ನುಡಿದರು. ಅದೇ ವೇಳೆಗೆ, ತಾವು ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕೆ ಎಂಬುದನ್ನು ಪಕ್ಷ ಶೀಘ್ರವೇ ನಿರ್ಧರಿಸಲಿದೆ ಎಂದೂ ರಾಹುಲ್ ಹೇಳಿದರು.

ಫೈಜಾಬಾದ್‌-ಅಯೋಧ್ಯೆ ನಡುವೆ 50 ಕಿ.ಮೀ ದೂರಕ್ಕೆ ಮೂರು ದಿನಗಳ ಬೃಹತ್ ರೋಡ್‌ ಶೋ ನಡೆಸುತ್ತಿರುವ ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆಡಳಿತ ಪಕ್ಷ ಬಡವರು ಮತ್ತು ರೈತರನ್ನು ಕಡೆಗಣಿಸುತ್ತಿದ್ದು, ಉದ್ಯಮಿಗಳನ್ನು ಮಾತ್ರ ಬೆಂಬಲಿಸುತ್ತಿದೆ ಎಂದು ಪ್ರಿಯಾಂಕಾ ವಾದ್ರಾ ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌