ಆ್ಯಪ್ನಗರ

ಮೋದಿ ಅಲೆಗೆ ಕೊಚ್ಚಿಹೋದ ಮಹಾಘಟಬಂಧನ್: 2022ರ ವರೆಗೂ ಅಸ್ತಿತ್ವ ಉಳಿದೀತೆ?

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ- ಆರ್‌ಎಲ್‌ಡಿ ಜತೆಗೂಡಿ ರಚಿಸಿಕೊಂಡ ಮಹಾಘಟಬಂಧನ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮುಂದೆ ಮಂಕಾಗಿದ್ದು ತೀವ್ರ ಹಿನ್ನಡೆ ಅನುಭವಿಸಿದೆ. ಹೀಗಾಗಿ 2022ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ವರೆಗೂ ಅದು ಅಸ್ತಿತ್ವ ಉಳಿಸಿಕೊವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

Vijaya Karnataka Web 23 May 2019, 7:36 pm
ಹೊಸದಿಲ್ಲಿ: ಲೋಕಸಭಾ ಚುನಾವಣೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ ಬಿಜೆಪಿ ದೇಶಾದ್ಯಂತ ಭಾರೀ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, ಬಹುಚರ್ಚಿತ ಮಹಾಘಟಬಂಧನ್ ಅಸ್ತಿತ್ವ ಉಳಿಸಿಕೊಳ್ಳಲಿದೆಯೇ ಎಂಬ ಸಂದೇಹ ಈಗ ಕಾಡಲಾರಂಭಿಸಿದೆ.
Vijaya Karnataka Web Akhilesh-Mayawati


ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ- ಆರ್‌ಎಲ್‌ಡಿ ಜತೆಗೂಡಿ ರಚಿಸಿಕೊಂಡ ಮಹಾಘಟಬಂಧನ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿನ ಮುಂದೆ ಮಂಕಾಗಿದ್ದು ತೀವ್ರ ಹಿನ್ನಡೆ ಅನುಭವಿಸಿದೆ. ಹೀಗಾಗಿ 2022ರಲ್ಲಿ ನಡೆಯುವ ವಿಧಾನಸಭಾ ಚುನಾವಣೆ ವರೆಗೂ ಅದು ಅಸ್ತಿತ್ವ ಉಳಿಸಿಕೊವ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.

ಮಾಯಾವತಿ ರಾಷ್ಟ್ರ ರಾಜಕಾರಣಕ್ಕೆ ತೆರಳಿ ಪ್ರಧಾನಿ ಹುದ್ದೆಗೇರುವ ಕನಸು ಕಂಡಿದ್ದರೆ, ಅಖಿಲೇಶ್ ಯಾದವ್ ರಾಜ್ಯ ರಾಜಕಾರಣದಲ್ಲಿ ಅನಭಿಷಿಕ್ತ ದೊರೆಯಾಗುವ ಕನಸು ಕಂಡಿದ್ದರು. ಆದರೆ ಅವೆಲ್ಲವೂ ಈಗ ನುಚ್ಚುನೂರಾಗಿರುವ ಕಾರಣ ಮುಂಬರುವ ತಿಂಗಳುಗಳಲ್ಲಿ ಘಟಬಂಧನದ ಭವಿಷ್ಯ ನಿರ್ಧಾರವಾಗಲಿದೆ.

ಬಿಜೆಪಿ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ 59 ಸ್ಥಾನಗಳನ್ನು ಗೆದ್ದಿದ್ದು, ಎಸ್‌ಪಿ-ಬಿಎಸ್ಪಿ ಘಟಬಂಧನ ಒಟ್ಟಾರೆ 12 ಸೀಟುಗಳಿಗಷ್ಟೇ ಸೀಮಿತವಾಗಿದೆ. ಇದೇ ವೇಳೆ ಬಿಜೆಪಿ ಮತಗಳಿಕೆ ಪ್ರಮಾಣ ಕಳೆದ ಬಾರಿಗಿಂತಲೂ ಹೆಚ್ಚಾಗಿದೆ. ಒಂದು ವೇಳೆ ಘಟಬಂಧನದ ಹೆಸರಲ್ಲಿ ಎರಡೂ ಪಕ್ಷಗಳು ಒಗ್ಗೂಡದಿದ್ದರೆ ಅವುಗಳ ಸ್ಥಿತಿ ಇನ್ನೂ ಚಿಂತಾಜನಕವಾಗಿರುತ್ತಿತ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

ಪ್ರಧಾನಿ ಮೋದಿ ಅವರು ಮಹಾಘಟಬಂಧನವನ್ನು 'ಮಹಾಮಿಲಾವಟ್‌' ಎಂದು ಲೇವಡಿ ಮಾಡುವ ಮೂಲಕ ಯಶಸ್ವಿಯಾಗಿ ತಾವು ಹೇಳಬೇಕಿದ್ದ ಸಂದೇಶವನ್ನು ಮತದಾರರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ