ಆ್ಯಪ್ನಗರ

ಎಸ್ಪಿಯಿಂದಲೇ ಮುಲಾಯಂ ಸ್ಪರ್ಧೆ

ಈ ಸಲ ಮುಲಾಯಂ ಅವರು ಇನ್ನೊಬ್ಬ ಸಹೋದರ ಶಿವಪಾಲ ಸಿಂಗ್‌ ಯಾದವ್‌ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ(ಲೋಹಿಯಾ) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹವಿತ್ತು.

Vijaya Karnataka 9 Mar 2019, 5:00 am
ಲಖನೌ: ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗೆ ಎಂಟು ಅಭ್ಯರ್ಥಿಗಳ ಹೆಸರನ್ನು ಶುಕ್ರವಾರ ಪ್ರಕಟಿಸಿದ್ದು, ಪಕ್ಷದ ಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಸ್ಪರ್ಧೆ ಕುರಿತ ವದಂತಿಗಳಿಗೆ ತೆರೆ ಎಳೆದಿದೆ.
Vijaya Karnataka Web mulayam


ಈ ಸಲ ಮುಲಾಯಂ ಅವರು ಇನ್ನೊಬ್ಬ ಸಹೋದರ ಶಿವಪಾಲ ಸಿಂಗ್‌ ಯಾದವ್‌ ಅವರ ಪ್ರಗತಿಶೀಲ ಸಮಾಜವಾದಿ ಪಾರ್ಟಿ(ಲೋಹಿಯಾ) ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹವಿತ್ತು. ಮೊದಲ ಪಟ್ಟಿಯಯಲ್ಲಿ ಮುಲಾಯಂ ಸೇರಿದಂತೆ ಕುಟುಂಬದ ಮೂವರು ಸದಸ್ಯರ ಹೆಸರು ಇದೆ. ಮುಲಾಯಂ ಅವರು 'ಸುರಕ್ಷಿತ ಕ್ಷೇತ್ರ' ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ. ಮುಲಾಯಂ ಸಹೋದರ ರಾಮ್‌ಗೋಪಾಲ್‌ ಯಾದವ್‌ ಅವರ ಪುತ್ರ ಧಮೇಂದ್ರ ಯಾದವ್‌ ಬದೌನ್‌ನಿಂದ ಹಾಗೂ ಕುಟುಂಬದ ಮತ್ತೊಬ್ಬ ಸದಸ್ಯ ಅಕ್ಷಯ್‌ ಯಾದವ್‌ ಫಿರೋಜಾಬಾದ್‌ನಿಂದ ಮತ್ತೆ ಕಣಕ್ಕೆ ಇಳಿಯಲಿದ್ದಾರೆ. ಇಬ್ಬರೂ ತಾವು ಹಾಲಿ ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲೇ ಪುನರಾಯ್ಕೆ ಬಯಸಿದ್ದಾರೆ. ಕಮಲೇಶ್‌ ಕಟಾರಿಯಾ, ಭೈಲಾಲ್‌ ಕೋಲ್‌, ಶಬ್ಬೀರ್‌ ಅಹಮದ್‌, ಪೂರ್ವಿ ವರ್ಮಾ ಹಾಗೂ ಉಷಾ ವರ್ಮಾ ಇತರ ಅಭ್ಯರ್ಥಿಗಳು. ಮೊದಲ ಪಟ್ಟಿಯಲ್ಲಿ ಆರು ಮಂದಿ ಪುರುಷರು ಹಾಗೂ ಎರಡನೇ ಪಟ್ಟಿಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಕಳೆದ ಲೋಕಸಭೆಯಲ್ಲಿ ತಂದೆ ಮುಲಾಯಂ ಪ್ರತಿನಿಧಿಸಿದ್ದ ಅಜಂಗಢದಿಂದ ಹಾಗೂ ಅವರ ಪತ್ನಿ ಡಿಂಪಲ್‌ ಯಾದವ್‌ ಕನೌಜ್‌ನಿಂದ ಹಾಲಿ ಪ್ರತಿನಿಧಿಸುತ್ತಿರುವ ಕನೌಜ್‌ನಿಂದ ಸ್ಪರ್ಧಿಸುವ ಸಂಭವ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌