ಆ್ಯಪ್ನಗರ

ಹಿಂದೂಗಳ ಮತದಾನಕ್ಕೆ ಟಿಎಂಸಿ ಅಡ್ಡಿ ಹಿನ್ನೆಲೆ: 3 ಮತಗಟ್ಟೆಗಳಲ್ಲಿ ನಾಳೆ ಮರುಮತದಾನ

ಟಿಎಂಸಿ ಗೂಂಡಾಗಳು ಹಿಂದೂ ಮತದಾರರಿಗೆ ಬೆದರಿಕೆಯೊಡ್ಡಿ ಮತದಾನ ಮಾಡದಂತೆ ಅಡ್ಡಿಪಡಿಸಿದ್ದರು. ಈ ಅಕ್ರಮವನ್ನು ಟೈಮ್ಸ್ ನೌ ಚಾನೆಲ್ ದಾಖಲೆ ಸಮೇತ ಬಯಲಿಗೆಳೆದಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಮರುಮತದಾನ ನಡೆಯುತ್ತಿದೆ.

Vijaya Karnataka Web 28 Apr 2019, 2:53 pm
[This story originally published in Timesnownews.com on April 28, 2019]
Vijaya Karnataka Web Hindus blocked from votinng


ಕೋಲ್ಕತ:
ಪಶ್ಚಿಮ ಬಂಗಾಳದ ರಾಯಗಂಜ್ ಲೋಕಸಭಾ ಕ್ಷೇತ್ರದ ಮೂರು ಮತಗಟ್ಟೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದನ್ನು ಟೈಮ್ಸ್ ನೌ ಚಾನೆಲ್ ಬಯಲಿಗೆಳೆದ ಬಳಿಕ ನಾಳೆ (ಏಪ್ರಿಲ್ 29ರಂದು) ಮರುಮತದಾನ ನಡೆಸುವುದಾಗಿ ಚುನಾವಣೆ ಅಧಿಕಾರಿಗಳು ಪ್ರಕಟಿಸಿದ್ದಾರೆ.

ನಾಲ್ಕನೇ ಹಂತದ ಚುನಾವಣೆ ನಾಳೆ ನಡೆಯಲಿದ್ದು, ಅದರ ಜತೆಗೇ ಈ ಮೂರು ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಯಲಿದೆ.

ಧೋಲೋಗಚ್‌ ಎಸ್‌ಎಸ್‌ಕೆಯ 19ನೇ ಮತಗಟ್ಟೆ, ಇಸ್ಲಾಂಪುರದ ಪಟಗೋರಾ ಬಾಲಿಕಾ ವಿದ್ಯಾಲಯದ 37ನೇ ಮತಗಟ್ಟೆ ಗೋಲ್‌ಪೋಖರ್ ವಿಧಾನಸಭೆ ಕ್ಷೇತ್ರದ ಬಸಿಪಾಡ ಗಚ್ಛಿ ಆದಿ 191ನೇ ಮತಗಟ್ಟೆಯಲ್ಲಿ ಮರು ಮತದಾನ ನಡೆಸುವುದಾಗಿ ಮುಖ್ಯ ಚುನಾವಣೆ ಅಧಿಕಾರಿ ಪ್ರಕಟಿಸಿದ್ದಾರೆ.

ರಾಯಗಂಜ್ ಕ್ಷೇತ್ರದಲ್ಲಿ ಏಪ್ರಿಲ್ 18ರಂದು ಮತದಾನ ನಡೆದಿತ್ತು. 18 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಬಿಜೆಪಿ ಪತ್ರ ಬರೆದು ಆಗ್ರಹಿಸಿದ್ದರೆ, 30 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಎಡಪಕ್ಷ ಆಗ್ರಹಿಸಿತ್ತು.

ಟಿಎಂಸಿ ಗೂಂಡಾಗಳು ಹಿಂದೂ ಮತದಾರರಿಗೆ ಬೆದರಿಕೆಯೊಡ್ಡಿ ಮತದಾನ ಮಾಡದಂತೆ ಅಡ್ಡಿಪಡಿಸಿದ್ದರು. ಈ ಅಕ್ರಮವನ್ನು ಟೈಮ್ಸ್ ನೌ ಚಾನೆಲ್ ದಾಖಲೆ ಸಮೇತ ಬಯಲಿಗೆಳೆದಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಮರುಮತದಾನ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ