ಆ್ಯಪ್ನಗರ

ಚುನಾವಣೆ ಅಕ್ರಮ: ಸುಪ್ರೀಂ ಕೋರ್ಟಿನ ಮೇಲೇ ಆರೋಪ ಹೊರಿಸಿದ 'ಕೈ' ನಾಯಕ ಉದಿತ್ ರಾಜ್

ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಆಗಿಂದಾಗ್ಗೆ ಪ್ರತಿಪಕ್ಷ ನಾಯಕರು ಆರೋಪಗಳನ್ನು ಮಾಡುತ್ತಿದ್ದು, ಆ ಸರಣಿಗೆ ಉದಿತ್ ರಾಜ್ ಟ್ವೀಟ್ ಹೊಸ ಸೇರ್ಪಡೆಯಾಗಿದೆ. ಆದರೆ ಸುಪ್ರೀಂ ಕೋರ್ಟ್ ಹೆಸರನ್ನೂ ಎಳೆದು ತರುವ ಮೂಲಕ ಅವರು ಗಂಭೀರ ಪ್ರಮಾದ ಎಸಗಿದ್ದಾರೆ.

Vijaya Karnataka Web 22 May 2019, 11:31 am
ಹೊಸದಿಲ್ಲಿ: ಸುಪ್ರೀಂ ಕೋರ್ಟೇ ಚುನಾವಣೆ ಅಕ್ರಮಗಳನ್ನು ನಡೆಸುತ್ತಿದೆ ಎಂದು ಆರೋಪಿಸುವ ಮೂಲಕ ಕಾಂಗ್ರೆಸ್ ನಾಯಕ ಉದಿತ್ ರಾಜ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಂಡಿದೆ ಎಂದು ಟ್ವೀಟ್‌ ಮೂಲಕ ಆರೋಪಿಸಿರುವ ಅವರು, ತಮ್ಮ ಟ್ವೀಟ್‌ ಅನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಟ್ಯಾಗ್ ಮಾಡಿದ್ದಾರೆ.
Vijaya Karnataka Web Udit Raj


ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಆಗಿಂದಾಗ್ಗೆ ಪ್ರತಿಪಕ್ಷ ನಾಯಕರು ಆರೋಪಗಳನ್ನು ಮಾಡುತ್ತಿದ್ದು, ಆ ಸರಣಿಗೆ ಉದಿತ್ ರಾಜ್ ಟ್ವೀಟ್ ಹೊಸ ಸೇರ್ಪಡೆಯಾಗಿದೆ. ಆದರೆ ಸುಪ್ರೀಂ ಕೋರ್ಟ್ ಹೆಸರನ್ನೂ ಎಳೆದು ತರುವ ಮೂಲಕ ಅವರು ಗಂಭೀರ ಪ್ರಮಾದ ಎಸಗಿದ್ದಾರೆ.


ಮತಗಟ್ಟೆ ಸಮೀಕ್ಷೆಗಳೆಲ್ಲವೂ ನರೇಂದ್ರ ಮೋದಿ ಸರಕಾರ ಮತ್ತೆ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದ ಬಳಿಕ ಇವಿಎಂ ಬಗ್ಗೆ ಆರೋಪಗಳು ಮತ್ತಷ್ಟು ತೀವ್ರಗೊಂಡಿವೆ. ಹಲವು ಪ್ರತಿಪಕ್ಷಗಳ ನಾಯಕರು ಬಿಜೆಪಿ ಸೋತರೆ ಇವಿಎಂ ಸರಿಯಾಗಿದೆ, ಗೆದ್ದರೆ ಇವಿಎಂ ಸರಿಯಿಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆಗಳನ್ನೂ ನೀಡುತ್ತಿದ್ದಾರೆ.
ಬಿಜೆಪಿ ಸೋಲು ಖಚಿತ, ಗೆದ್ದರೆ ಇವಿಎಂ ಬಗ್ಗೆ ಅನುಮಾನ: ಡಿಸಿಎಂ ಪರಮೇಶ್ವರ್

ವಿದ್ಯುನ್ಮಾನ ಮತಯಂತ್ರಗಳ ಕಾರ್ಯ ವೈಖರಿ ಮೇಲೆ ಸಂಶಯ: ಮಲ್ಲಿಕಾರ್ಜುನ ಖರ್ಗೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌