ಆ್ಯಪ್ನಗರ

ಜಮ್ಮು-ಲಡಾಖ್‌ನ ಮೂರೂ ಸ್ಥಾನಗಳು ಬಿಜೆಪಿ ಖಚಿತ: ರಾಮ್ ಮಾಧವ್ ಭರವಸೆ

2014ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆಗಿಂತಲೂ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ ಎಂದು ರಾಮ್ ಮಾಧವ್ ತಿಳಿಸಿದರು. ಪಕ್ಷದ ಅಭ್ಯರ್ಥಿಗಳು ಮತ್ತು ಕಣಿವೆ ರಾಜ್ಯದ ಪದಾಧಿಕಾರಿಗಳ ಜತೆ ಚರ್ಚಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದರು. 'ಇಲ್ಲಿನ ಕೆಲವರು ನೀಡುವ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ಯಾವ ಪಕ್ಷಕ್ಕೆ ಯಾವ ಅಜೆಂಡಾ ಇದೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಕಾಶ್ಮೀರಿ ಜನತೆಗೂ ಅದು ಗೊತ್ತಿದೆ. ಅವರೂ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಬಿಜೆಪಿ ನಾಯಕ ನುಡಿದರು.

Vijaya Karnataka Web 27 Mar 2019, 5:40 pm
ಶ್ರೀನಗರ: ಜಮ್ಮು ಮತ್ತು ಲಡಾಖ್‌ನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ಮೂರೂ ಸ್ಥಾನಗಳನ್ನು ಗೆದ್ದುಕೊಳ್ಳುವ ಭರವಸೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
Vijaya Karnataka Web Ram Madhav


2014ರ ಲೋಕಸಭಾ ಚುನಾವಣೆಯಲ್ಲಿ ಮಾಡಿದ ಸಾಧನೆಗಿಂತಲೂ ಈ ಬಾರಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ ಎಂದು ರಾಮ್ ಮಾಧವ್ ತಿಳಿಸಿದರು. ಪಕ್ಷದ ಅಭ್ಯರ್ಥಿಗಳು ಮತ್ತು ಕಣಿವೆ ರಾಜ್ಯದ ಪದಾಧಿಕಾರಿಗಳ ಜತೆ ಚರ್ಚಿಸಿ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದರು.

ರಾಜ್ಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟದ ಸೀಟು ಹಂಚಿಕೆಯನ್ನು 'ನಾಟಕ' ಎಂದು ಬಣ್ಣಿಸಿದ ಅವರು, 'ಈ ಡ್ರಾಮಾ ಕಂಪನಿ ಜಮ್ಮುವಿನಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ, ಕಾಶ್ಮೀರದಲ್ಲಿ ಪರಸ್ಪರ ಸೆಣಸುತ್ತಿವೆ. ಮೋದಿ ಮತ್ತು ಬಿಜೆಪಿ ವಿರುದ್ಧ ನಾನಾ ತೆರನಾದ ನಾಟಕಗಳನ್ನು ಈ ಕಂಪನಿ ಮಾಡುತ್ತಿದೆ. ಅವರೇನು ಬೇಕಾದರೂ ಮಾಡಿಕೊಳ್ಳಲಿ. ಕಮ್ಮುವಿನಲ್ಲಿ ಎರಡು ಸ್ಥಾನಗಳು ಹಾಗೂ ಲಡಾಖ್‌ನ ಒಂದು ಸ್ಥಾನವನ್ನು ನಾಔಉ ಗೆಲ್ಲುವುದು ಖಚಿತ. ಕಾಶ್ಮೀರ ಕಣಿವೆಯಲ್ಲೂ ನಾವು ಗರಿಷ್ಠ ಪ್ರಯತ್ನ ನಡೆಸುತ್ತೇವೆ' ಎಂದು ರಾಮ್ ಮಾಧವ್ ಹೇಳಿದರು.

'ದೇಶವನ್ನು ಒಗ್ಗೂಡಿಸುವವರು ಕಣಿವೆಯ ಎಲ್ಲ ಸ್ಥಾನಗಳನ್ನೂ ಗೆಲ್ಲಬೇಕು. ದ್ವಂದ್ವ ನಿಲುವಿನ ಬೂಟಾಟಿಕೆಯ ಮಾತುಗಳನ್ನಾಡುವ ರಾಜಕಾರಣಿಗಳನ್ನು ಕಾಶ್ಮೀರ ಕಣಿವೆಯ ಜನತೆ ದೂರವಿಡಬೇಕು' ಎಂದು ಅವರು ಒತ್ತಾಯಿಸಿದರು.

'ಇಲ್ಲಿನ ಕೆಲವರು ನೀಡುವ ಹೇಳಿಕೆಗಳನ್ನು ಜನ ಗಮನಿಸುತ್ತಿದ್ದಾರೆ. ಯಾವ ಪಕ್ಷಕ್ಕೆ ಯಾವ ಅಜೆಂಡಾ ಇದೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಕಾಶ್ಮೀರಿ ಜನತೆಗೂ ಅದು ಗೊತ್ತಿದೆ. ಅವರೂ ಅರ್ಥ ಮಾಡಿಕೊಳ್ಳುತ್ತಾರೆ' ಎಂದು ಬಿಜೆಪಿ ನಾಯಕ ನುಡಿದರು.

ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠಕ್ಕೆ ತೀರ್ಥಯಾತ್ರೆಗೆ ಪ್ರತ್ಯೇಕ ಕಾರಿಡಾರ್ ಒದಗಿಸಲು ಪಾಕಿಸ್ತಾನ ಸಿದ್ಧವಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಅವರು, 'ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲಿದೆ. ಯಾವುದಕ್ಕೂ ಮೊದಲು ಭಯೋತ್ಪಾದನೆಯೇ ದೊಡ್ಡ ಸವಾಲಾಗಿದೆ. ಭಯೋತ್ಪಾದನೆ ನಿರ್ಮೂಲನಗೊಂಡರೆ ಉಳಿದವೆಲ್ಲ ತಾನಾಗಿಯೇ ಆಗುತ್ತವೆ' ಎಂದು ರಾಮ್ ಮಾಧವ್ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌