ಆ್ಯಪ್ನಗರ

ಬಿಎಸ್ಪಿಯಿಂದ ಟಿಕೆಟ್‌ ಹರಾಜು ಆರೋಪ

ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷ ದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಮಹೇಶ್‌ ಶರ್ಮಾ ವಾಗ್ದಾಳಿ ನಡೆಸಿದರು.

Vijaya Karnataka 31 Mar 2019, 5:00 am
ಬುಲಂದ್‌ಶಹರ್‌: ಬಹುಜನ ಸಮಾಜವಾದಿ ಪಕ್ಷ ವು(ಬಿಎಸ್ಪಿ) ಬಿಡ್ಡಿಂಗ್‌ ನಡೆಸಿ ಲೋಕಸಭೆ ಚುನಾವಣೆಯ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ಸಚಿವ ಮಹೇಶ್‌ ಶರ್ಮಾ ಆರೋಪಿಸಿದ್ದಾರೆ.
Vijaya Karnataka Web maya


ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಿಎಸ್ಪಿ ವರಿಷ್ಠೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷ ದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ವಾಗ್ದಾಳಿ ನಡೆಸಿದರು.

''ಬಿಎಸ್ಪಿ ಬಿಡ್ಡಿಂಗ್‌ ನಡೆಸಿ ಟಿಕೆಟ್‌ ಮಾರುತ್ತಿದೆ. 20 ಕೋಟಿಗೆ ರೂ.ಗೆ ಒಂದು ಟಿಕೆಟ್‌ ಮಾರುತ್ತಿರುವ ಪಕ್ಷ ವು ದೇಶವನ್ನು ಮುನ್ನಡೆಸಲು ಹೇಗೆ ಸಾಧ್ಯ? ಒಂದು ವೇಳೆ ಮಾಯಾವತಿ ಹಾಗೂ ಅವರ ಮಿತ್ರ ಪಕ್ಷ ಬ ಎಸ್ಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, 1995ರ ಕುಖ್ಯಾತ ಪ್ರವಾಸಿ ಮಂದಿರ ಪ್ರಕರಣ ಮರುಕಳಿಸಲಿದೆ,'' ಎಂದು ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ವಿರುದ್ಧವೂ ಹರಿಹಾಯ್ದ ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಲ್ಲ, ಅದು ತಾಯಿ ಮಗನ ಪಕ್ಷ ,'' ಎಂದು ಕುಟುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ