ಪದೇಪದೆ ಕುದಿಸಿದ ಟೀ ಹಾನಿಕರ, ಹಾಗಾಗಿ ಚಾಯ್ವಾಲಾ ಈಗ ಚೌಕಿದಾರ್ ಆಗಿದ್ದಾರೆ ಎಂದ ಮಮತಾ
ಕೋಲ್ಕೊತಾ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸುವ ಯಾವುದೇ ಅವಕಾಶವನ್ನು ಕೈಚೆಲ್ಲದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಮೋದಿ ಅವರಿಗೆ ಉತ್ತಮ ಮೈಕಟ್ಟು ಇದೆ. ಅದು ಇನ್ನೂ ಹೆಚ್ಚು ಉತ್ತಮವಾಗಲಿ ಎಂದು ಬಯಸುವೆ. ಅವರ 56 ಇಂಚಿನ ಎದೆ, 112 ಇಂಚಿಗೆ ಹೆಚ್ಚಿದರೆ ಖುಷಿಪಡುವೆ. ಒಟ್ಟಿನಲ್ಲಿ ಎಲ್ಲರೂ ಆರೋಗ್ಯವಾಗಿರಬೇಕು' ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಶ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ವೇಳೆ ರಾರಯಲಿಯೊಂದಲ್ಲಿ ಮಾತನಾಡಿರುವ ಮಮತಾ, ಪ್ರಧಾನಿ ಮೋದಿ ಅವರ ಚಾಯ್ವಾಲಾ ಹಿನ್ನೆಲೆಯನ್ನು ಕೆಣಕಿದ್ದಾರೆ. ಪದೇಪದೆ ಕುದಿಸಿದ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಮೋದಿಗೆ ಗೊತ್ತಿದೆ. ಹಾಗಾಗಿ ಅವರು ಈಗ ಟೀ ನೀಡುತ್ತಿಲ್ಲ. ಚಾಯ್ವಾಲಾ ಬದಲಾಗಿ ಅವರು ಈಗ ಚೌಕಿದಾರ್ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಟೋಲ್ಬಾಜಿಗೆ ತಿರುಗೇಟು : ''ಬಂಗಾಳದಲ್ಲಿ ದೀದಿ ಆಡಳಿತ ಮೂರು 'ಟಿ'ಗಾಗಿ ಹೆಸರುವಾಸಿ. ತೃಣಮೂಲ, ಟೋಲ್ಬಾಜಿ, ಟ್ಯಾಕ್ಸಿ,'' ಎಂಬ ಪ್ರಧಾನಿ ಟೀಕೆಗೂ ತಿರುಗೇಟು ನೀಡಿದ ಮಮತಾ, ''ಟಿಎಂಸಿಯನ್ನು ಟೀಕಿಸುವ ಮುನ್ನ ನೋಟು ಅಮಾನ್ಯೀಕರಣದಿಂದಾಗಿ ಎಷ್ಟು ಸಂಪಾದಿಸಿದರು ಎಂಬುದನ್ನು ಮೋದಿ ಬಹಿರಂಗಪಡಿಸಲಿ,'' ಎಂದು ಸವಾಲು ಹಾಕಿದ್ದಾರೆ. ಟಿಎಂಸಿ ಜಾತ್ಯತೀತ ಸಿದ್ಧಾಂತ ಪಾಲಿಸುತ್ತದೆ. ಟೆಂಪಲ್, ಮಾಸ್ಕ್ , ಚರ್ಚ್ನ್ನು ಟಿಎಂಸಿ ಅಕ್ಷರಗಳು ಪ್ರತಿನಿಧಿಸುತ್ತವೆ ಎಂದಿದ್ದಾರೆ.
ಸಿಬಿಐ ಮತ್ತು ಐಟಿ ಇಲಾಖೆಯ ದಾಳಿಯ ಭಯದಿಂದ ಯಾರೂ ಕೂಡ ಮೋದಿ ವಿರುದ್ಧ ಮುಕ್ತವಾಗಿ ಮಾತನಾಡುತ್ತಿಲ್ಲ. ಅವರ ಆಡಳಿತ ಕೇವಲ ರಫೇಲ್ ಹಗರಣ ಮತ್ತು ಕಡು ಭ್ರಷ್ಟಾಚಾರದಿಂದ ಕೂಡಿತ್ತು ಎಂದಿದ್ದಾರೆ.
ಕೋಲ್ಕೊತಾ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸುವ ಯಾವುದೇ ಅವಕಾಶವನ್ನು ಕೈಚೆಲ್ಲದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, 'ಮೋದಿ ಅವರಿಗೆ ಉತ್ತಮ ಮೈಕಟ್ಟು ಇದೆ. ಅದು ಇನ್ನೂ ಹೆಚ್ಚು ಉತ್ತಮವಾಗಲಿ ಎಂದು ಬಯಸುವೆ. ಅವರ 56 ಇಂಚಿನ ಎದೆ, 112 ಇಂಚಿಗೆ ಹೆಚ್ಚಿದರೆ ಖುಷಿಪಡುವೆ. ಒಟ್ಟಿನಲ್ಲಿ ಎಲ್ಲರೂ ಆರೋಗ್ಯವಾಗಿರಬೇಕು' ಎಂದು ಟಾಂಗ್ ಕೊಟ್ಟಿದ್ದಾರೆ.
ಬಿಶ್ಣುಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ವೇಳೆ ರಾರಯಲಿಯೊಂದಲ್ಲಿ ಮಾತನಾಡಿರುವ ಮಮತಾ, ಪ್ರಧಾನಿ ಮೋದಿ ಅವರ ಚಾಯ್ವಾಲಾ ಹಿನ್ನೆಲೆಯನ್ನು ಕೆಣಕಿದ್ದಾರೆ. ಪದೇಪದೆ ಕುದಿಸಿದ ಟೀ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು ಮೋದಿಗೆ ಗೊತ್ತಿದೆ. ಹಾಗಾಗಿ ಅವರು ಈಗ ಟೀ ನೀಡುತ್ತಿಲ್ಲ. ಚಾಯ್ವಾಲಾ ಬದಲಾಗಿ ಅವರು ಈಗ ಚೌಕಿದಾರ್ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಟೋಲ್ಬಾಜಿಗೆ ತಿರುಗೇಟು : ''ಬಂಗಾಳದಲ್ಲಿ ದೀದಿ ಆಡಳಿತ ಮೂರು 'ಟಿ'ಗಾಗಿ ಹೆಸರುವಾಸಿ. ತೃಣಮೂಲ, ಟೋಲ್ಬಾಜಿ, ಟ್ಯಾಕ್ಸಿ,'' ಎಂಬ ಪ್ರಧಾನಿ ಟೀಕೆಗೂ ತಿರುಗೇಟು ನೀಡಿದ ಮಮತಾ, ''ಟಿಎಂಸಿಯನ್ನು ಟೀಕಿಸುವ ಮುನ್ನ ನೋಟು ಅಮಾನ್ಯೀಕರಣದಿಂದಾಗಿ ಎಷ್ಟು ಸಂಪಾದಿಸಿದರು ಎಂಬುದನ್ನು ಮೋದಿ ಬಹಿರಂಗಪಡಿಸಲಿ,'' ಎಂದು ಸವಾಲು ಹಾಕಿದ್ದಾರೆ. ಟಿಎಂಸಿ ಜಾತ್ಯತೀತ ಸಿದ್ಧಾಂತ ಪಾಲಿಸುತ್ತದೆ. ಟೆಂಪಲ್, ಮಾಸ್ಕ್ , ಚರ್ಚ್ನ್ನು ಟಿಎಂಸಿ ಅಕ್ಷರಗಳು ಪ್ರತಿನಿಧಿಸುತ್ತವೆ ಎಂದಿದ್ದಾರೆ.
ಸಿಬಿಐ ಮತ್ತು ಐಟಿ ಇಲಾಖೆಯ ದಾಳಿಯ ಭಯದಿಂದ ಯಾರೂ ಕೂಡ ಮೋದಿ ವಿರುದ್ಧ ಮುಕ್ತವಾಗಿ ಮಾತನಾಡುತ್ತಿಲ್ಲ. ಅವರ ಆಡಳಿತ ಕೇವಲ ರಫೇಲ್ ಹಗರಣ ಮತ್ತು ಕಡು ಭ್ರಷ್ಟಾಚಾರದಿಂದ ಕೂಡಿತ್ತು ಎಂದಿದ್ದಾರೆ.