ಲಖನೌ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ 'ಚೌಕಿದಾರ'ನ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಲಿದೆ ಎಂದು ಬಹುಜನ ಸಮಾಜ ಪಾರ್ಟಿ ವರಿಷ್ಠ ನಾಯಕಿ ಮಾಯಾವತಿ ಲೇವಡಿ ಮಾಡಿದ್ದಾರೆ. ''ಈ ಬಾರಿ ಬಿಜೆಪಿ ಸೋಲುವುದು ಖಚಿತ, ಆ ನಂತರ ಅವರಿಗೆ ಬೇರೇನೂ ಕೆಲಸವಿಲ್ಲದ ಕಾರಣ 'ಚೌಕಿದಾರ'ರ ಕೆಲಸ ಮಾಡುವುದು ಅನಿವಾರ್ಯವಾಗುತ್ತದೆ,'' ಎಂದು ಸರಣಿ ಟ್ವೀಟ್ಗಳಲ್ಲಿ ವ್ಯಂಗ್ಯವಾಡಿದ್ದಾರೆ. ಪ್ರಧಾನಿ, ಉತ್ತರ ಪ್ರದೇಶ ಸಿಎಂ, ಡಿಸಿಎಂ ಸೇರಿದಂತೆ ಬಿಜೆಪಿ ಮುಖಂಡರು ಏನೇ ಮಾಡಲು, ತಮ್ಮನ್ನು ತಾವು ಟೀಕಿಸಿಕೊಳ್ಳಲು ಸ್ವತಂತ್ರರು. ಆದರೆ ಅವರು ದೇಶಕ್ಕೆ ಅವಮಾನ ಮಾಡಕೂಡದು. ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಹುದ್ದೆಯಲ್ಲಿ ಇರುವವರೆಗೆ ಸಂವಿಧಾನದ ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಗೆ ಚೌಕಿದಾರನ ಕೆಲಸವೇ ಕಾಯಂ: ಮಾಯಾವತಿ ಟೀಕೆ
ಸಂವಿಧಾನಾತ್ಮಕ ಹುದ್ದೆಗಳಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಹುದ್ದೆಯಲ್ಲಿ ಇರುವವರೆಗೆ ಸಂವಿಧಾನದ ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ ವರಿಷ್ಠ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
Vijaya Karnataka 23 Mar 2019, 5:00 am