ಆ್ಯಪ್ನಗರ

ಸೋಮವಾರ ಮಾಯಾ, ಗುರುವಾರ ಗೌಡ ಪಿಎಂ!

ಪ್ರತಿಪಕ್ಷಗಳು ಲೋಕಸಮರದಲ್ಲಿ ಜಯಿಸಿದಲ್ಲಿ ದಿನಕ್ಕೊಬ್ಬರು ಪ್ರಧಾನಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಾಗ್ದಾಳಿ

Vijaya Karnataka 5 May 2019, 5:00 am
ಭೋಪಾಲ್‌: ''ಮಹಾಘಟಬಂಧನ್‌ ರಚಿಸಿಕೊಂಡಿರುವ ಪ್ರತಿಪಕ್ಷಗಳು ಲೋಕಸಮರದಲ್ಲಿ ಜಯಿಸಿದಲ್ಲಿ ದಿನಕ್ಕೊಬ್ಬರು ಪ್ರಧಾನಿಯಾಗುತ್ತಾರೆ,'' ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಗೋವಿಂದ್‌ಘರ್‌ನಲ್ಲಿ ಶನಿವಾರ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ''ಬಿಜೆಪಿ ಕಾರ್ಯಕರ್ತರೊಬ್ಬರು ನನಗೆ ವಾಟ್ಸ್ಯಾಪ್‌ ಸಂದೇಶವೊಂದನ್ನು ಕಳಿಸಿದ್ದಾರೆ. ಮಹಾಘಟಬಂಧನ್‌ ಸರಕಾರ ರಚನೆಯಾದರೆ ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್‌, ಬುಧವಾರ ಶರದ್‌ ಪವಾರ್‌, ಗುರುವಾರ ಎಚ್‌.ಡಿ. ದೇವೇಗೌಡ, ಶುಕ್ರವಾರ ಚಂದ್ರಬಾಬು ನಾಯ್ಡು, ಶನಿವಾರ ಮಮತಾ ಬ್ಯಾನರ್ಜಿ ಪ್ರಧಾನಿ ಆಗಲಿದ್ದಾರೆ. ಭಾನುವಾರ ರಜಾದಿನವಾದ ಕಾರಣ ದೇಶಕ್ಕೆ ಪ್ರಧಾನಿ ಇರುವುದಿಲ್ಲ,'' ಎಂದು ಶಾ ಟೀಕಿಸಿದರು. ಈ ಥರದ ಸರಕಾರ ನಡೆಸಿದರೆ ಪಾಕಿಸ್ತಾನದ ಕಿತಾಪತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
Vijaya Karnataka Web monday mayawati thursday devegowda pm
ಸೋಮವಾರ ಮಾಯಾ, ಗುರುವಾರ ಗೌಡ ಪಿಎಂ!


ಪುಲ್ವಾಮಾದಲ್ಲಿ ನಮ್ಮ 40 ಯೋಧರನ್ನು ಹತ್ಯೆಗೈದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಿ ಎಂದು ರಾಹುಲ್‌ ಗಾಂಧಿ ಗುರುಗಳಾದ ಸ್ಯಾಮ್‌ ಪಿತ್ರೋಡಾ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಪ್ರತಿದಾಳಿ ಮೂಲಕ ತಕ್ಕ ಪ್ರತ್ಯುತ್ತರ ನೀಡುವ ಬದಲು ಮಾತುಕತೆ ನಡೆಸುತ್ತಾ ಕೂರಬೇಕೆ ಎಂದು ಶಾ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌