ಆ್ಯಪ್ನಗರ

ಮೋದಿಯವರೇ ನಾವೇನು ನೆನಪಿನ ಶಕ್ತಿ ಕಳೆದುಕೊಂಡ ಮೂರ್ಖರೇ?: ಚಿದಂಬರಮ್‌

ಪ್ರಧಾನಿ ಮೋದಿ ಅವರು ನಮ್ಮನ್ನು ಏನೆಂದುಕೊಂಡಿದ್ದಾರೆ? ತುಂಬಾ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ಮೂರ್ಖರು ಎಂದುಕೊಂಡಿದ್ದಾರೆಯೇ? ಎಂದು ಟ್ವೀಟ್‌ ಮೂಲಕ ತಾರಟೆಗೆ ತೆಗೆದುಕೊಂಡ ಪಿ ಚಿದಂಬರಮ್‌.

Vijaya Karnataka Web 28 Apr 2019, 2:48 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನಮ್ಮನ್ನೇನು ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ಮೂರ್ಖರ ಗುಂಪು ಎಂದುಕೊಂಡಿದ್ದಾರೆಯೇ? ಎಂದು ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್‌ ನಾಯಕ ಪಿ. ಚಿದಂಬರಮ್‌ ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web P Chidambaram


ಕನೌಜ್‌ನಲ್ಲಿ ನರೇಂದ್ರ ಮೋದಿ 'ಜಾತಿ ರಾಜಕೀಯದಲ್ಲಿ ತಮಗೆ ನಂಬಿಕೆ ಇಲ್ಲ' ಎಂದು ನೀಡಿದ ಹೇಳಿಕೆಗೆ ಸಂಬಂಧಿಸಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಚಿದಂಬರಮ್‌, ನಾನು ಒಬಿಸಿ ಎನ್ನುತ್ತ ತೋಳದಲ್ಲಿ ಜಾತಿಯನ್ನು ಅಂಟಿಸಿಕೊಂಡು ಪ್ರಚಾರ ನಡೆಸಿ ಪ್ರಧಾನಿಯಾದ ಮೊದಲ ವ್ಯಕ್ತಿ ನರೇಂದ್ರ ಮೋದಿ ಎಂದು ವಾಗ್ದಾಳಿ ನಡೆಸಿದ್ದಾರೆ.

2014ರ ನಂತರ ಚಾಯ್‌ವಾಲಾನನ್ನು ಪ್ರಧಾನಿಯಾಗಿ ಜನತೆ ಆಯ್ಕೆ ಮಾಡಿತು ಎಂದು ನಿರಂತರವಾಗಿ ಹೇಳುತ್ತ ಬಂದರು. ಆದರೆ ಮೋದಿ ಯಾವತ್ತು ತಮ್ಮ ಪೂರ್ವಜರು ಚಾಯ್‌ವಾಲಾಗಳು ಎಂದು ಹೇಳಲಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ನಮ್ಮನ್ನು ಏನೆಂದುಕೊಂಡಿದ್ದಾರೆ? ತುಂಬಾ ನೆನಪಿನ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ಮೂರ್ಖರು ಎಂದುಕೊಂಡಿದ್ದಾರೆಯೇ? ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.


ನನ್ನ ವಿರೋಧಿಗಳು ನಿಂಧಿಸುವ ವರೆಗೆ ಈ ರಾಷ್ಟ್ರಕ್ಕೆ ನನ್ನ ಜಾತಿ ಯಾವುದು ಎಂದು ಗೊತ್ತಿರಲಿಲ್ಲ. ನನ್ನ ಜಾತಿಯ ಬಗ್ಗೆ ಚರ್ಚಿಸಿದ್ದಕ್ಕೆ ಮಾಯಾವತಿ, ಅಖಿಲೇಶ್‌ ಯಾದವ್‌, ಕಾಂಗ್ರೆಸ್‌ ನಾಯಕರಿಗೆ ಮತ್ತು ಮಹಾಮಿಲಾವತಿಗಳಿಗೆ ಧನ್ಯವಾದಗಳು. ಹಿಂದುಳಿತ ಸಮುದಾಯದಿಂದ ಜನಿಸಿದ್ದರಿಂದಲೇ ಈ ದೇಶಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ನಂಬುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌