ಆ್ಯಪ್ನಗರ

ಚಾಯ್‌ವಾಲರನ್ನು ಮರೆತು ಚೌಕಿದಾರರನ್ನು ನೆನಪಿಸಿಕೊಂಡ ಮೋದಿ: ಕಪಿಲ್‌ ಸಿಬಲ್‌ ಕುಟುಕು

PTI 24 Mar 2019, 2:08 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚಾಯ್‌ವಾಲರನ್ನು ಮರೆತಿದ್ದಾರೆ. ಈಗ ಚೌಕಿದಾರರನ್ನು ನೆನಪಿಸಿಕೊಂಡಿದ್ದಾರೆ. ರಾಜಕೀಯಕ್ಕಾಗಿ ಮುಂದೆ ಯಾರನ್ನಾದರು ಹೀಗೆ ಹಿಡಿದುಕೊಳ್ಳುತ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌ ಪ್ರಧಾನಿ ಮೋದಿ ಅವರ ಮೈ ಭೀ ಚೌಕಿದಾರ ಅಭಿಯಾನವನ್ನು ಕುಟುಕಿದ್ದಾರೆ.
Vijaya Karnataka Web Kapil Sibal


ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌, ಪ್ರಧಾನಿ ನರೇಂದ್ರ ಮೋದಿ ಬಾಲಾಕೋಟ್‌ ವಾಯು ದಾಳಿಯನ್ನು ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಗುರುದಾಸಪುರ, ಪಠಾಣ್‌ಕೋಟ್‌, ಉರಿ, ಬಾರಾಮುಲ್ಲಾ ಮತ್ತು ಪುಲ್ವಾಮದಲ್ಲಿ ಉಗ್ರರು ದಾಳಿ ನಡೆಸಿದಾಗ ಚೌಕಿದಾರ ನಿದ್ರೆ ಮಾಡುತ್ತಿದ್ದರೆ? ಎಂದು ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ.

ಪಿಟಿಐ ಸದರ್ಶನದಲ್ಲಿ ಮಾತನಾಡಿದ 70 ವರ್ಷದ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌, ಸೇನೆ ದಾಳಿಯನ್ನು ರಾಜಕಾರಣಕ್ಕೆ ಮೊದಲು ಎಳೆದು ತಂದವರು ಬಿಜೆಪಿಗರು. ಮೋದಿ ತಮ್ಮ ಭಾಷಣಗಳಲ್ಲಿ ಹುತಾತ್ಮ ಯೋಧರನ್ನು ಪೋಸ್ಟರ್‌ಗಳಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನೀರವ್‌ ಮೋದಿ ಮತ್ತು ಮೆಹುಲ್‌ ಚೋಸ್ಕಿ ರಾಷ್ಟ್ರ ಬಿಟ್ಟು ಪಲಾಯನ ಮಾಡುವಾಗ ಚೌಕಿದಾರ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌