ಆ್ಯಪ್ನಗರ

ಪುಲ್ವಾಮ ದಾಳಿ ನಂತರ ಮೋದಿ ರಾಜೀನಾಮೆ ನೀಡಬೇಕಿತ್ತು: ಛಗನ್‌ ಭುಜಬಲ

ಸುಪ್ರೀಂ ಕೋರ್ಟ್‌ ಜಜ್‌ಗಳು ಹೊರಬಂದು ಧ್ವನಿಯೆತ್ತಿದರು. ಸಿಬಿಐಗೆ ಏನಾಯಿತು? ಆರ್‌ಬಿಐಗೆ ಏನಾಯಿತು? ವಿತ್ತ ತಜ್ಞರಾದ ರಘುರಾಮ್‌ ರಾಜನ್‌, ಉರ್ಜಿತ್‌ ಪಟೇಲ್‌ ಮತ್ತಿತರರು ಏನು ಹೇಳಿದರು? - ಛಗನ್‌ ಭುಜಬಲ

Times Now 27 Apr 2019, 3:16 pm
ಪಟನಾ: ಮೋದಿ ಅಲೆ ಎಲ್ಲಿದೆ? ಇಲ್ಲೆಲ್ಲೂ ಮೋದಿ ಅಲೆ ಇಲ್ಲ. ನಾನು ಮಹಾರಾಷ್ಟ್ರದಾದ್ಯಂತ ಓಡಾಡಿದ್ದೇನೆ. ಜನವರಿ 10 ರಿಂದ ಇಲ್ಲಿಯ ವರೆಗೆ ಸುಮಾರು 200 ದೊಡ್ಡ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ(ಎನ್‌ಸಿಪಿ) ನಾಯಕ ಛಗನ್‌ ಭುಜಬಲ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Vijaya Karnataka Web NCP leader Chhagan Bhujbal


ಟೈಮ್ಸ್‌ ನೌ.ಕಾಮ್‌ ಜತೆ ಮಾತನಾಡಿದ ಭಜಬಲ, ರೈತರು ಮೋದಿಯನ್ನು ಕಟುವಾಗಿ ವಿರೋಧಿಸುತ್ತಿದ್ದಾರೆ. ದೇವೇಂದ್ರ ಫಡ್ನವಿಸ್‌ ಅವರ ಪಾಲಿಸಿಗಳಿಂದ ಜನ ಬೇಸತ್ತಿದ್ದಾರೆ. ನೋಟ್‌ ಬ್ಯಾನ್‌ ಮಾಡಿದ ಪರಿಣಾಮ ನಗರದಲ್ಲಿ ಸಣ್ಣ ಉದ್ಯಮಗಳು ಮುಚ್ಚಿ ಹೋದವು. ಅವುಗಳಿಗೆ ಮತ್ತೆ ಏಳಲು ಸಾಧ್ಯವಾಗುತ್ತಿಲ್ಲ. ಕುಶಲ ಕಾರ್ಮಿಕರನ್ನು ಗಮನಿಸಿ. ಶೇ.50ರಷ್ಟು ಕುಶಲಕರ್ಮಿಗಳು ನಾಸಿಕ್‌ ಬಿಟ್ಟು ತೆರಳಿದ್ದಾರೆ. ಯಾಕೆಂದರೆ ಅಲ್ಲಿ ಕೆಲಸವೇ ಇಲ್ಲ. ಜಿಎಸ್‌ಟಿ ನೀತಿಯಿಂದ ಜನ ಕಷ್ಟ ಪಡುತ್ತಿದ್ದಾರೆ ಎಂದರು.

ಸುಪ್ರೀಂ ಕೋರ್ಟ್‌ ಜಜ್‌ಗಳು ಹೊರಬಂದು ಧ್ವನಿಯೆತ್ತಿದರು. ಸಿಬಿಐಗೆ ಏನಾಯಿತು? ಆರ್‌ಬಿಐಗೆ ಏನಾಯಿತು? ವಿತ್ತ ತಜ್ಞರಾದ ರಘುರಾಮ್‌ ರಾಜನ್‌, ಉರ್ಜಿತ್‌ ಪಟೇಲ್‌ ಮತ್ತಿತರರು ಏನು ಹೇಳಿದರು? ಇವತ್ತು ಇತಿಹಾಸದಲ್ಲಿ ಡಿಗ್ರಿ ಪಡೆದ ವ್ಯಕ್ತಿ ಶಕ್ತಿಕಾಂತ್‌ ದಾಸ್‌ ಆರ್‌ಬಿಐ ಗವರ್ನರ್‌ ಆಗಿದ್ದಾರೆ ಎಂದು ಸಂಸದೀಯ ಕಚೇರಿಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದರು.

ಒಬ್ಬ ಮಂತ್ರಿ ರಸ್ತೆಯಲ್ಲಿ ಹೋಗುತ್ತಾನೆ ಎಂದಾದರೆ ಎಲ್ಲಾ ಖಾಸಗಿ ವಾಹನಗಳನ್ನು ನಿಲ್ಲಿಸಲಾಗುತ್ತದೆ. 70 ಯೋಧರು ಇರುವ ಬಸ್‌ಗಳು ಸಂಚರಿಸುತ್ತಿದ್ದಾಗ, ಆರ್‌ಡಿಎಕ್ಸ್‌ ತುಂಬಿದ ಕಾರೊಂದು ಬಂದು ಗುದ್ದುತ್ತದೆ ಮತ್ತು 43 ಜವಾನರು ಹುತಾತ್ಮರಾಗುತ್ತಾರೆ. ಇದಕ್ಕೆ ಯಾರು ಜವಾಬ್ದಾರಿ? ಇದಕ್ಕೆ ಮೋದಿಯೇ ನೇರ ಹೊಣೆ. ಹಾಗಾಗಿ, ಮೋದಿ ರಾಜೀನಾಮೆ ನೀಡಬೇಕು ಎಂದು ಭುಜಬಲ ನೇರವಾಗಿ ಆಗ್ರಹಿಸದರು.

ಇವತ್ತು ಮೋದಿ ಯೋಧರ ಪರಾಕ್ರಮವನ್ನು ಮತ ಗಳಿಕೆಗೆ ಬಳಕೆ ಮಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಅವರನ್ನು ನೋಡಿ. ಅಜ್ಜಿಯ ದೇಹಕ್ಕೆ 30ಕ್ಕೂ ಹೆಚ್ಚು ಬುಲೆಟ್‌ಗಳು ಹೊಕ್ಕು, ಸ್ಥಳದಲ್ಲೇ ಮೃತರಾದರು. ತಂದೆ ರಾಜೀವ್‌ ಗಾಂಧಿ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಮೃತರಾದರು. ಇದುವರೆಗೆ ರಾಹುಲ್‌ ಗಾಂಧಿ ತಮ್ಮ ತಂದೆ ಮತ್ತು ಅಜ್ಜಿಯರ ಬಲಿದಾನವನ್ನು ಮತಗಳಿಸಲು ಬಳಕೆ ಮಾಡಲಿಲ್ಲ ಎಂದು ಭುಜಬಲ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಶ್ಲಾಘಿಸಿದರು.

(ವರದಿಯು ಟೈಮ್ಸ್‌ನೌ.ಕಾಮ್‌ ಡಿಜಿಟಲ್‌ ಚೀಫ್‌ ಎಡಿಟರ್‌ ಅವರ ಲೇಖನದಿಂದ ಆಯ್ದ ಭಾಗವಾಗಿದೆ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌