ಆ್ಯಪ್ನಗರ

ದೇಶ ಅಪಾಯದಲ್ಲಿದೆ, ಹೀಗಾಗಿ ರಾಜಕೀಯಕ್ಕೆ ಬಂದೆ: ಪ್ರಿಯಾಂಕಾ ಗಾಂಧಿ

ಗಂಗಾಯಾತ್ರೆ'ಯ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ನಾನು ಮನೆಯಲ್ಲಿ ಕುಳಿತಿದ್ದೆ. ನಾನು ಮನೆಯಲ್ಲೇ ಕುಳಿತಿರಬಹುದಿತ್ತು. ಆದರೆ ನಾನಿಂದು ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದ್ದೇನೆ, ಅದಕ್ಕೆ ಕಾರಣವೇನು? ದೇಶ ಮತ್ತು ಸಂವಿಧಾನ ಅಪಾಯದಲ್ಲಿದ್ದಕ್ಕೆ ನಾನು ಮುಂದಡಿ ಇಡಬೇಕಾಯಿತು ಎಂದರು.

TIMESOFINDIA.COM 19 Mar 2019, 10:36 am
ಅಲಹಾಬಾದ್: ದೇಶ ಮತ್ತು ಸಂವಿಧಾನ ಅಪಾಯದಲ್ಲಿರುವುದರಿಂದ ನಾನು ಸಕ್ರಿಯ ರಾಜಕಾರಣಕ್ಕೆ ಬಂದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
Vijaya Karnataka Web Ganga


ಗಂಗಾಯಾತ್ರೆ'ಯ ಮೂಲಕ ಉತ್ತರ ಪ್ರದೇಶದಲ್ಲಿ ಪಕ್ಷದ ಅಧಿಕೃತ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ನಾನು ಮನೆಯಲ್ಲಿ ಕುಳಿತಿದ್ದೆ. ನಾನು ಮನೆಯಲ್ಲೇ ಕುಳಿತಿರಬಹುದಿತ್ತು. ಆದರೆ ನಾನಿಂದು ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದ್ದೇನೆ, ಅದಕ್ಕೆ ಕಾರಣವೇನು? ದೇಶ ಮತ್ತು ಸಂವಿಧಾನ ಅಪಾಯದಲ್ಲಿದ್ದಕ್ಕೆ ನಾನು ಮುಂದಡಿ ಇಡಬೇಕಾಯಿತು ಎಂದರು.

ನಿಮ್ಮ ಮತ ನಿಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುತ್ತದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪ್ರಜ್ಞಾಪೂರ್ವಕವಾಗಿ ಮತ ಚಲಾಯಿಸಿ ನಿಮಗಾಗಿ ಕೆಲಸ ಮಾಡುವ ಸರಕಾರವನ್ನು ಅಧಿಕಾರಕ್ಕೆ ತನ್ನಿ. ಇದು ಎಲ್ಲರು ಎಚ್ಚೆತ್ತುಕೊಳ್ಳಬೇಕಾದ ಸಮಯ. ದೇಶವನ್ನು ಒಡೆಯುವವರ ವಿರುದ್ಧ ರಾಹುಲ್ ಆರಂಭಿಸಿರುವ ಹೋರಾಟಕ್ಕೆ ಬಲ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ಗಂಗಾಪೂಜೆ ಮೂಲಕ ಯಾತ್ರೆ ಆರಂಭ


ಪ್ರಯಾಗ್‌ರಾಜ್‌ನ ಸಂಗಮ ಪ್ರದೇಶದಿಂದ 'ಗಂಗಾಪೂಜೆ' ಮೂಲಕ ಅವರು ಯಾತ್ರೆ ಆರಂಭಿಸಿದರು. ಇದಕ್ಕೂ ಮೊದಲು ಇಲ್ಲಿನ ಬಡೇ ಹನುಮಾನ್‌ ದೇಗುಲಕ್ಕೆ ತೆರಳಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಗಂಗೆಗೆ ಹೂವು ಹಾಗೂ ಹಾಲು ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು. ಅಲ್ಲಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಸ್ಥಳೀಯ ಜನರೊಂದಿಗೆ ಬೆರೆತು ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ವಿಶೇಷ ಭದ್ರತಾ ಪಡೆಯ ಬೆಂಗಾವಲನ್ನು ತ್ಯಜಿಸಿ ಪ್ರಿಯಾಂಕಾ ಸ್ಥಳೀಯರ ಜತೆ ಬೆರೆತಿದ್ದು ವಿಶೇಷವಾಗಿತ್ತು. ಥೇಟ್‌ ಇಂದಿರಾ ಗಾಂಧಿ ಸ್ಟೈಲ್‌ನಲ್ಲೇ ಸೀರೆಯುಟ್ಟಿದ್ದ ಅವರ ಹಾವಭಾವವೂ ಇಂದಿರಾ ಅವರಂತೆಯೇ ಇತ್ತು.

ಆ ನಂತರ ದಡದಲ್ಲಿ ನಿಂತಿದ್ದ ಮೋಟರ್‌ ಬೋಟ್‌ನತ್ತ ಹೆಜ್ಜೆ ಹಾಕಿದ ಪ್ರಿಯಾಂಕಾ ಲೈಫ್‌ ಜಾಕೆಟ್‌ ಸಹ ತೊಡದೆ ಸೀದಾ ಬೋಟ್‌ ಏರಿ ಕುಳಿತುಬಿಟ್ಟರು. ದಡದಲ್ಲೇ ನಿಂತಿದ್ದ ಇತರ ನಾಯಕರಿಗೂ ಬೋಟ್‌ ಹತ್ತುವಂತೆ ಕೈಸನ್ನೆ ಮಾಡಿದರು. ದೋಣಿಯ ಮೂಲಕ ಏರಿಯಲ್‌ ಘಾಟ್‌, ಮನಾಯಿಯಾ ಘಾಟ್‌ಗೆ ತೆರಳಿದ ಅವರು ಅಲಹಾಬಾದ್‌ ವಿವಿ ವಿದ್ಯಾರ್ಥಿಗಳೊಂದಿಗೆ 'ಬೋಟ್‌ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

3 ದಿನಗಳ ಯಾತ್ರೆ: ಪ್ರಿಯಾಂಕಾ ಅವರು ಪ್ರಯಾಗ್‌ರಾಜ್‌ನಿಂದ ಜಲಮಾರ್ಗದ ಮೂಲಕ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿ ತಲುಪಲಿದ್ದಾರೆ. 140 ಕಿ.ಮೀ. ಪ್ರಯಾಣದ ಮಾರ್ಗಮಧ್ಯೆ ರಸ್ತೆ ಸಂಪರ್ಕದಿಂದ ದೂರವಿರುವ ಹಲವು ಕುಗ್ರಾಮಗಳಿಗೆ ತೆರಳಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ದೋಣಿ ಸಂಚರಿಸುವ ಹಾದಿಯುದ್ದಕ್ಕೂ ಸಿಗುವ ದೇಗುಲಗಳು, ದರ್ಗಾಗಳಿಗೂ ಪ್ರಿಯಾಂಕಾ ಭೇಟಿ ನೀಡಲಿದ್ದಾರೆ. ವಾರಾಣಸಿಯಲ್ಲಿ ಹಲವು ದೇಗುಲಗಳ ಸಂದರ್ಶನ ಹಾಗೂ ನೇಕಾರರೊಂದಿಗೆ ಸಂವಾದವನ್ನೂ ಕಾಂಗ್ರೆಸ್‌ ಯೋಜಿಸಿದೆ.

'ಚೌಕೀದಾರ್‌' ವಿರುದ್ಧ ಕಿಡಿ: ಗಂಗಾಯಾತ್ರೆ ವೇಳೆ ಪ್ರಧಾನಿ ಮೋದಿ ಅವರ ಚೌಕೀದಾರ್‌ ಅಭಿಯಾನದ ಬಗ್ಗೆ ಪ್ರಿಯಾಂಕಾ ಕಿಡಿಕಾರಿದ್ದಾರೆ. ''ಹೆಸರಿನ ಮುಂದೆ ಏನು ಸೇರಿಸಬೇಕೆಂಬುದು ಅವರವರ ಇಷ್ಟ. ಇಷ್ಟಕ್ಕೂ ಚೌಕಿದಾರ್‌ ಬೇಕಾಗಿರುವುದು ಶ್ರೀಮತರಿಗೇ ಹೊರತು ರೈತ ಸಮುದಾಯಕ್ಕಲ್ಲ. ರೈತರಿಗೆ ರೈತರೇ ಚೌಕಿದಾರರು,'' ಎಂದರು. ''ೕ ಬಾರಿ ಕಾಂಗ್ರೆಸ್‌ ಗೆಲ್ಲಿಸಿ. ಅಣ್ಣ ರಾಹುಲ್‌ ಗಾಂಧಿ ನಿಮಗೆ (ಜನತೆಗೆ) ನೀಡಿದ ಎಲ್ಲ ಭರವಸೆಗಳನ್ನೂ ಖಂಡಿತ ಈಡೇರಿಸುತ್ತಾನೆ,'' ಎಂದು ಮನವಿ ಮಾಡಿದರು.

ಪ್ರಿಯಾಂಕಾ ಗಾಂಧಿ ಅವರು ಅವರು ಎಷ್ಟು ಬಾರಿ ಬೇಕಾದರೂ ದೋಣಿ ವಿಹಾರ ಮಾಡಬಹುದು. ಎಷ್ಟು ದೇವಾಲಯಗಳನ್ನು ಬೇಕಾದರೂ ಸುತ್ತಬಹುದು. ಆದರೆ ಅವರಿಗೆ ಒಂದು ವಿಷಯ ಗೊತ್ತಿರಲಿ, ಉತ್ತರ ಪ್ರದೇಶದ ಜನರು ಯಾರನ್ನು ಗೆಲ್ಲಿಸಬೇಕು ಎಂದು ಈಗಾಗಲೇ ತೀರ್ಮಾನಿಸಿದ್ದಾರೆ- ಕೇಶವ್‌ ಪ್ರಸಾದ್‌ ಮೌರ್ಯ, ಡಿಸಿಎಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ