ಆ್ಯಪ್ನಗರ

ನಿಖಿಲ್‌ ಮೈತ್ರಿ ಅಭ್ಯರ್ಥಿ ಅದಕ್ಕೆ ಬೆಂಬಲ, ಸುಮಲತಾಗೆ ಕೊಡಲ್ಲ ಅಂತ ಹೇಳಿ ಕಳಿಸಿದ್ದೀನಿ: ಮಾದೇಗೌಡ

ನಿಖಿಲ್‌ ಕಾಲಿಗೆ ಬಿದ್ದಾಗ ತಮಾಷೆ ಮಾಡುತ್ತಲೇ ಬುದ್ದಿವಾದ ಹೇಳಿದ ಮಾದೇಗೌಡ, ಹಿಂದಿನ ಕಾಲದಲ್ಲಿ ಈಗ ಕಾಲಿಗೆ ಬೀಳ್ತೀರಿ, ಆಮೇಲೆ ಜುಟ್ಟು ಹಿಡಿತೀರಿ ಅಂತಿದ್ರು. ಆ ರೀತಿ ಆಗಬಾರದು ಎಂದು ನಿಖಿಲ್‌ಗೆ ಕಿವಿಮಾತು ಹೇಳಿದರು.

Vijaya Karnataka Web 16 Mar 2019, 8:40 pm
ಮಂಡ್ಯ: ಮಂಡ್ಯದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಂದಾಗಿ ಚುನಾವಣೆ ರಂಗು ಪಡೆದುಕೊಂಡಿದೆ.
Vijaya Karnataka Web ಮಾದೇಗೌಡ ಮನೆಯಲ್ಲಿ ನಿಖಿಲ್‌
ಮಾದೇಗೌಡ ಮನೆಯಲ್ಲಿ ನಿಖಿಲ್‌


ಜೆಡಿಎಸ್‌ನ ದೇವೇಗೌಡ ಕುಟುಂಬದ ಮೂರನೇ ಕುಡಿ ನಿಖಿಲ್ ಕುಮಾರಸ್ವಾಮಿ ಹಾಗೂ ರೆಬೆಲ್‌ ಸ್ಟಾರ್‌ ಅಂಬರೀಷ್‌ ಪತ್ನಿ ಸುಮಲತಾ ಇಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

ಹೀಗಾಗಿ ಇಬ್ಬರೂ ಮಂಡ್ಯ ಜಿಲ್ಲಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ.

ಮಂಡ್ಯದ ಹಿರಿಯ ನಾಯಕ ಜಿ. ಮಾದೇಗೌಡ ಅವರನ್ನು ನಿಖಿಲ್‌ ಕುಮಾರಸ್ವಾಮಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾದೇಗೌಡ, ಜೆಡಿಎಸ್‌ನ ನಿಖಿಲ್‌ ಮನೆಗೆ ಬಂದು ಆಶೀರ್ವಾದ ಪಡೆದಿದ್ದಾನೆ. ಬೆಂಬಲ ಕೊಡುವಂತೆ ಕೇಳಿಕೊಂಡಿದ್ದಾನೆ. ಮೊದಲು ಇಲ್ಲ ಅಂದರೆ. ನಂತರ ಮೈತ್ರಿ ಅಭ್ಯರ್ಥಿ ಎಂದ ಕೊಡುತ್ತೇನೆ ಹೋಗು ಅಂದೆ ಎಂದರು.

ಸುಮಲತಾ ಕೂಡ ಬಂದು ಬೆಂಬಲ ಕೇಳಿದ್ದರು. ಆದರೆ ಆಗಲ್ಲ ಎಂದು ಹೇಳಿಕಳಿಸಿದ್ದೇನೆ ಎಂದು ಮಾದೇಗೌಡ ಸ್ಪಷ್ಟಪಡಿಸಿದರು.

ಮಾದೇಗೌಡ ಅವರ ಕಾಲಿಗೆ ಬಿದ್ದ ನಿಖಿಲ್‌ ಕುಮಾರಸ್ವಾಮಿ ಆಶೀರ್ವದಿಸಿ ಎಂದರು.

ನಿನಗೆ ಗುಡ್‌ಲಕ್‌ ಆಗಬೇಕು ಎಂದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನಿಖಿಲ್‌ಗೆ ಮಾದೇಗೌಡ ಸಲಹೆ ನೀಡಿದರು.

ನಿಖಿಲ್‌ ಕಾಲಿಗೆ ಬಿದ್ದಾಗ ತಮಾಷೆ ಮಾಡುತ್ತಲೇ ಬುದ್ದಿವಾದ ಹೇಳಿದ ಮಾದೇಗೌಡ, ಹಿಂದಿನ ಕಾಲದಲ್ಲಿ ಈಗ ಕಾಲಿಗೆ ಬೀಳ್ತೀರಿ, ಆಮೇಲೆ ಜುಟ್ಟು ಹಿಡಿತೀರಿ ಅಂತಿದ್ರು. ಆ ರೀತಿ ಆಗಬಾರದು ಎಂದು ನಿಖಿಲ್‌ಗೆ ಕಿವಿಮಾತು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌