ಆ್ಯಪ್ನಗರ

ಬಿಜೆಪಿಯಲ್ಲಿದ್ದರೂ ದಲಿತಪರ ಚಿಂತನೆ ಬದಲಾಗದು ಎಂದ ಶ್ರೀನಿವಾಸ್ ಪ್ರಸಾದ್

ಪಕ್ಷ ಬಿಜೆಪಿಯಾದರೂ ದಲಿತ ಪರ ಚಿಂತನೆ ಬದಲಾಗುವುದಿಲ್ಲ. ಡಾ.ಅಂಬೇಡ್ಕರ್‌ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಇಲ್ಲ. ಮುಸ್ಲಿಮರ ಮತ ಬೇಡ ಎಂದು ಈಶ್ವರಪ್ಪ ಹೇಳಿರುವುದು ಸರಿಯಲ್ಲ. ಸಂವಿಧಾನದ ಬಗ್ಗೆ ಅನಂತ್‌ಕುಮಾರ್‌ ಹೆಗಡೆ ಅವರದ್ದು ಬಾಲಿಷವಾದ ಹೇಳಿಕೆ. ಬಿಜೆಪಿ ದಲಿತರ ವಿರೋಧಿ ಎನ್ನುವುದು ಕೇವಲ ಚುನಾವಣಾ ಆರೋಪ...

Vijaya Karnataka 17 Apr 2019, 5:00 am
ಮೈಸೂರು: ಪಕ್ಷ ಬಿಜೆಪಿಯಾದರೂ ದಲಿತ ಪರ ಚಿಂತನೆ ಬದಲಾಗುವುದಿಲ್ಲ. ಡಾ.ಅಂಬೇಡ್ಕರ್‌ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಇಲ್ಲ. ಮುಸ್ಲಿಮರ ಮತ ಬೇಡ ಎಂದು ಈಶ್ವರಪ್ಪ ಹೇಳಿರುವುದು ಸರಿಯಲ್ಲ. ಸಂವಿಧಾನದ ಬಗ್ಗೆ ಅನಂತ್‌ಕುಮಾರ್‌ ಹೆಗಡೆ ಅವರದ್ದು ಬಾಲಿಷವಾದ ಹೇಳಿಕೆ. ಬಿಜೆಪಿ ದಲಿತರ ವಿರೋಧಿ ಎನ್ನುವುದು ಕೇವಲ ಚುನಾವಣಾ ಆರೋಪ...
Vijaya Karnataka Web Shrinivas Prasad


-ಇವು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಪ್ರಸಾದ್‌ ಅವರ ಅಭಿಪ್ರಾಯಗಳು. ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

''ಬಿಜೆಪಿ ಸೇರಿದಂತೆ ತಾವು ಯಾವ ಪಕ್ಷದಲ್ಲಿದ್ದರೂ ಡಾ.ಅಂಬೇಡ್ಕರ್‌ ಸಿದ್ಧಾಂತವನ್ನೇ ಪಾಲಿಸುತ್ತಿದ್ದು, ಅದರೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರ ಚಿಂತನೆಗಳನ್ನೇ ಪ್ರತಿಪಾದನೆ ಮಾಡುತ್ತಾ ಬರುತ್ತಿದ್ದೇನೆ. ಬಿಜೆಪಿ ದಲಿತರ ವಿರೋಧಿ ಎನ್ನುವುದು ಕೇವಲ ಚುನಾವಣಾ ಆರೋಪ ಮಾತ್ರ. ಇದರಲ್ಲಿ ಹುರುಳಿಲ್ಲ. ಇದೊಂದು ಚುನಾವಣಾ ತಂತ್ರಗಾರಿಕೆಗಾಗಿ ಮಾಡುತ್ತಿರುವ ಆರೋಪ. ಬಿಜೆಪಿಗೆ ಎಲ್ಲಾ ವರ್ಗದ ಬೆಂಬಲವಿದೆ,'' ಎಂದು ಸಮರ್ಥಿಸಿಕೊಂಡರು.

''ತಮಗೆ ಮುಸ್ಲಿಮರ ಮತಗಳು ಬೇಡ'' ಎಂಬ ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿದ ಶ್ರೀನಿವಾಸ್‌ ಪ್ರಸಾದ್‌, ''ಈ ರೀತಿ ಈಶ್ವರಪ್ಪ ಹೇಳಬಾರದು. ಮುಸ್ಲಿಮರು ಕೂಡ ಈ ದೇಶದ ಮತದಾರರು, ಮುಖ್ಯವಾಹಿನಿಯಲ್ಲಿ ಇರುವವರು. ಇದು ಜಾತ್ಯತೀತ ರಾಷ್ಟ್ರ. ಇಂತಹ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ,'' ಎಂದು ಹೇಳಿದರು.

''ಸಂವಿಧಾನದ ಕುರಿತು ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆ ಬಾಲಿಷವಾದ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸಂವಿಧಾನ ರಚನೆ ಹೇಗೆ ಆಗಿದೆ? ಅದರಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಸಂವಿಧಾನವನ್ನು ಯಾರಿಂದಲೂ ಬದಲು ಮಾಡಲು ಸಾಧ್ಯವಿಲ್ಲ,'' ಎಂದರು.

ಸಿ.ಎಂ.ಇಬ್ರಾಹಿಂಗೂ ದಾವೂದ್‌ ಇಬ್ರಾಹಿಂಗೂ ವ್ಯತ್ಯಾಸವಿಲ್ಲ

ಸಿ.ಎಂ.ಇಬ್ರಾಹಿಂ ಹಾಗೂ ದಾವೂದ್‌ ಇಬ್ರಾಹಿಂಗೂ ವ್ಯತ್ಯಾಸವಿಲ್ಲ. ಸಿಎಂ ಇಬ್ರಾಹಿಂ ದಿ ಮೋಸ್ಟ್‌ ಕ್ರಿಮಿನಲ್‌ ರಾಜಕಾರಣಿ ಎಂದು ವಿ.ಶ್ರೀನಿವಾಸ್‌ ಪ್ರಸಾದ್‌ ವಾಗ್ದಾಳಿ ನಡೆಸಿದರು. ''ಸಿ.ಎಂ.ಇಬ್ರಾಹಿಂ ಅವರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರೊಬ್ಬ ವಿದೂಷಕ. ದಿ ಮೋಸ್ಟ್‌ ಕ್ರಿಮಿನಲ್‌ ರಾಜಕಾರಣಿ'' ಎಂದರು. ನೀವು ಏಕೆ ರಾಜ್ಯಪಾಲ ಹುದ್ದೆಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನನಗೆ ರಾಜಕೀಯದಲ್ಲಿ ವಿಶ್ರಾಂತಿ ಬೇಕಿತ್ತು. ರಾಜಭವನ ಪ್ರವೇಶಿಸಿದ ನಂತರ ಅದನ್ನು ನರ್ಸಿಂಗ್‌ ಹೋಂ ಮಾಡಿಕೊಳ್ಳಲು ಇಷ್ಟವಾಗಲಿಲ್ಲ'' ಎಂದು ಸ್ಪಷ್ಟನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌