ಆ್ಯಪ್ನಗರ

ಸುಮಲತಾ ನಾಮಪತ್ರ ವೇಳೆ ಹೆಚ್ಚು ಜನ ಸೇರಿರಬಹುದು, ಆದ್ರೆ ಸಿಎಂಗೆ ಒತ್ತಡವಿಲ್ಲ : ಡಿಕೆಶಿ

ಸುಮಲತಾ ಅಂಬರೀಷ್‌ ನಾಮಪತ್ರ ಸಲ್ಲಿಸುವಾಗ ಮಂಡ್ಯದಲ್ಲಿ ಹೆಚ್ಚು ಜನ ಸೇರಿರಬಹುದು ಇದರಿಂದ ಸಿಎಂ ಅವರಿಗೆ ಒತ್ತಡವಿಲ್ಲ...

Vijaya Karnataka Web 22 Mar 2019, 12:57 pm
ಬೆಂಗಳೂರು: ಸುಮಲತಾ ಅಂಬರೀಷ್‌ ನಾಮಪತ್ರ ಸಲ್ಲಿಸುವಾಗ ಮಂಡ್ಯದಲ್ಲಿ ಹೆಚ್ಚು ಜನ ಸೇರಿರಬಹುದು. ಇದರಿಂದ ಸಿಎಂ ಅವರಿಗೆ ಒತ್ತಡವಿಲ್ಲ. ಆದರೆ, ಅವರು ರಿಸ್ಕ್‌ ತಗೊಂಡು ಕೆಲಸ ಮಾಡುತ್ತಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.
Vijaya Karnataka Web dks


ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲಿಸುವ ಸಂಬಂಧ ಜಿಲ್ಲೆಯ ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಗಣಿಗ ರವಿ ಅವರೊಂದಿಗೆ ಡಿಕೆಶಿ ಮತ್ತೊಂದು ಸುತ್ತಿನ ಮಾತುಕತೆಯನ್ನು ಗುರುವಾರ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಂಡ್ಯದಲ್ಲಿ ಪರಿಸ್ಥಿತಿ ಈಗಿನಂತೆಯೇ ಇರುವುದಿಲ್ಲ. ನನಗೆ ಹೈಕಮಾಂಡ್‌ ಸೂಚನೆ ನೀಡಿರುವುದರಿಂದ ಮಂಡ್ಯದ ಮುಖಂಡರನ್ನು ಕರೆಸಿ ಮಾತನಾಡುತ್ತಿದ್ದೇನೆ. ನಾನು ಟ್ರಬಲ್‌ ಶೂಟರ್‌ ಅಲ್ಲ. ಇಲ್ಲಿ ಟ್ರಬಲ್ಲೂ ಇಲ್ಲ. ಶೂಟೂ ಇಲ್ಲ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌